ಬೆಂಗಳೂರು.25.ಏಪ್ರಿಲ್ .25:- ಜಮ್ಮು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ ಪಾಕಿಸ್ತಾನಿಯರು ಹೆಚ್ಚಾಗಿ ಆನ್ಲೈನ್ ಮೂಲಕ “ಪಹಲ್ಗಾಮ್ ದಾಳಿ” ಮತ್ತು “ಮೋದಿ” ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಉಂಟಾಗಿರುವ ಉದ್ವಿಗ್ನತೆಯ ಬಗ್ಗೆ ಅವರ ಕಳವಳಗಳನ್ನು ವ್ಯಕ್ತಪಡಿಸಿದೆ. ಪಾಕಿಸ್ತಾನಿಯರು ಹೆಚ್ಚಾಗಿ ಆನ್ಲೈನ್ ಮೂಲಕ “ಪಹಲ್ಗಾಮ್ ದಾಳಿ” ಮತ್ತು “ಮೋದಿ” ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿಯ ಬಳಿಕ ವಿಶ್ವದಾದ್ಯಂತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಪಾಕಿಸ್ತಾನವೂ ಸೇರಿದಂತೆ ಹಲವಾರು ದೇಶಗಳು ಇದರ ಬೆಳವಣಿಗೆಯ ಬಗ್ಗೆ ಭಾರತದತ್ತ ಕುತೂಹಲದಿಂದ ನೋಡುತ್ತಿದ್ದಾರೆ. ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನಕ್ಕೆ ಯಾವ ರೀತಿಯಲ್ಲಿ ಚಾಟಿ ಬೀಸುತ್ತದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಏನು ಮಾಡುತ್ತದೆ ಎನ್ನುವ ಕುತೂಹಲ ಈಗ ಎಲ್ಲರಲ್ಲೂ ಇದೆ.
ಪಹಲ್ಗಾಮ್ ದಾಳಿಯ ಬಳಿಕ ಆನ್ಲೈನ್ ನಲ್ಲಿ ಪರಿಸ್ಥಿತಿಯ ಬಗ್ಗೆ ಆಸಕ್ತಿ, ಕಳವಳ ಮತ್ತು ಊಹಾಪೋಹಗಳು ಹೆಚ್ಚಾಗಿವೆ. ಅಲ್ಲದೇ ಈ ದಾಳಿಯ ಬಳಿಕ ಪಾಕಿಸ್ತಾನದ ಇಂಟರ್ನೆಟ್ ಚಟುವಟಿಕೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಗೂಗಲ್ ಟ್ರೆಂಡ್ ಮಾಹಿತಿಯ ಪ್ರಕಾರ ಪಾಕಿಸ್ತಾನಿ ಬಳಕೆದಾರರು ಪಹಲ್ಗಾಮ್ ದಾಳಿ, ಕಾಶ್ಮೀರ ದಾಳಿ, ಸಿಂಧೂ ಜಲ ಒಪ್ಪಂದ, ಭಾರತೀಯ ವಾಯುಪಡೆ, ಮೋದಿ, ಭಾರತದ ಸೇಡು, ಜಮ್ಮು.. ಮೊದಲಾದವುಗಳನ್ನು ಹೆಚ್ಚಾಗಿ ಹುಡುಕಾಡಿದ್ದಾರೆ. ಅದರಲ್ಲೂ ಪಹಲ್ಗಾಮ್ ಎಂಬ ಕೀವರ್ಡ್ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಹುಡುಕಿದ ಮೂರನೇ ಪದವಾಗಿದೆ.
ಇವು ಮಾತ್ರವಲ್ಲದೆ ಉಗ್ರರ ದಾಳಿಗೆ ಭಾರತದ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ತಿಳಿಯಲು ಹೆಚ್ಚಿನವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಕುರಿತು ಜಾಲಾಡಿದ್ದಾರೆ. ಮೋದಿ ಪಹಲ್ಗಾಮ್ ಪ್ರತಿಕ್ರಿಯೆ ಮತ್ತು ಪಾಕಿಸ್ತಾನ ಸೇನೆಯ ಬಗ್ಗೆ ಭಾರತದ ಸುದ್ದಿ ಕುರಿತಾದ ಹುಡುಕಾಟಗಳೂ ನಡೆದಿವೆ.
ಇದು ಕೇವಲ ಗೂಗಲ್ ನಲ್ಲಿ ಮಾತ್ರ ನಡೆದಿಲ್ಲ, ಟ್ವಿಟ್ಟರ್, ಫೇಸ್ ಬುಕ್, ಯೂಟ್ಯೂಬ್ ನಲ್ಲೂ ಪಹಲ್ಗಾಮ್ ಟೆರರ್ ಅಟ್ಯಾಕ್, ಮೋದಿ ಹೆಸರಿನ ಹ್ಯಾಶ್ಟ್ಯಾಗ್ಗಳು ಟ್ರೆಂಡಿಂಗ್ನಲ್ಲಿವೆ. ಹೆಚ್ಚಿನ ಬಳಕೆದಾರರು ದಾಳಿಯ ಬಗ್ಗೆ ಮುಂದೆ ಏನಾಗಬಹುದು ಎನ್ನುವ ಕುತೂಹಲವನ್ನು ವ್ಯಕ್ತಪಡಿಸುತ್ತಿದ್ದಾರೆ.
ಬೀದರ.12.ಜೂನ್.25:- ಭಾಲ್ಕಿ ತಾಲೂಕನ್ನು ಗುಡಿಸಲು ಮುಕ್ತನಾಗಿ ಮಾಡುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವರಾದ…
ಬೆಂಗಳೂರು.12.ಜೂನ್.25:- ರಜ್ಯದಲ್ಲಿ IAS ಮತ್ತು IPS ಮೂರು ಅಧಿಕಾರಿಗಳ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ರೋಹಿಣಿ ಸಿಂಧೂರಿ ಸಹಿತ…
ಹೊಸ ದೆಹಲಿ.12.ಜೂನ್.25:- ಇತ್ತೀಚೆಗೆ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ಕೆಡೆಟ್ಗಳನ್ನು ನವದೆಹಲಿಯಲ್ಲಿ ರಕ್ಷಣಾ ಸಚಿವ…
ಅಹಮದಾಬಾದ್.12.ಜೂನ್.25:- ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಗೃಹ ಸಚಿವ ಅಮಿತ್…
ಹೊಸ ದೆಹಲಿ.12.ಜೂನ್.25:- ತಂತ್ರಜ್ಞಾನವನ್ನು ಮುಂದುವರೆಸುವಲ್ಲಿ ಮತ್ತು ದೇಶದ ಸ್ವಾವಲಂಬನೆಯನ್ನು ಮುನ್ನಡೆಸುವಲ್ಲಿ ಭಾರತದ ಯುವ ನಾವೀನ್ಯಕಾರರ ಪ್ರಮುಖ ಪಾತ್ರಕ್ಕಾಗಿ ಪ್ರಧಾನಿ ನರೇಂದ್ರ…
ಅಹ್ಮದಾಬಾದ್.12.ಜೂನ್.25:- ಗುಜರಾತಿನ ಅಹಮದಾಬಾದ್ ನಗರದ ಮೇಘನಿ ನಗರ ಪ್ರದೇಶದಲ್ಲಿ ಇಂದು ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿದೆ. ಎಚ್ಚರಿಕೆ ಬಂದ ಕೂಡಲೇ ಅಗ್ನಿಶಾಮಕ…