ಬೀದರ 19.ಜನವರಿ.25:- ನಗರದಲ್ಲಿ ಜರುಗುತ್ತಿರುವ ಪಶು ವಿವಿಯ ಜಾನುವಾರು ಕುಕ್ಕುಟ ಹಾಗೂ ಮೀನುಗಾರಿಕೆ ಮೇಳದ ಎರಡನೆಯ ದಿನ ಅಪಾರ ಜನಸ್ತೋಮ ಪಾಲ್ಗೊಂಡಿತ್ತು. ಸುಮಾರು 40 ಸಾವಿರಕ್ಕಿಂತಲೂ ಹೆಚ್ಚುಜಿಲ್ಲೆಯ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು, ರೈತರು ಹಾಗೂ ನಗರದ ಪ್ರಾಣಿ ಪ್ರಿಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇಂದು ಸುಮಾರು 10 ಜಿಲ್ಲೆಯ ಶ್ರೇಷ್ಠ ರೈತ ಹಾಗೂ ಶ್ರೇಷ್ಠ ಮಹಿಳೆಯರಿಗೆ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮ ಪ್ರಶಸ್ತಿ ಪ್ರಧಾನ ಮಾಡಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಇಲ್ಲಿರುವ ಪಶುವೈದ್ಯಕೀಯ ವಿಶ್ವವಿದ್ಯಾಲಯ ಕೇವಲ ಜಿಲ್ಲೆಗಷ್ಟೇ ಸೀಮಿತವಲ್ಲ ಅದು ಇಡೀ ದೇಶದ ವೈಜ್ಞಾನಿಕ ಬೆಳವಣಿಗೆಗೆ ಸಹಕಾರಿ.
ಜಿಲ್ಲೆಯ ಜನರು ಅದನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಜೀವನಾಧಾರವನ್ನು ಉತ್ಕೃಷ್ಟಗೊಳಿಸಬೇಕು ಎಂದರು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಪ್ರಗತಿಪರ ರೈತರನ್ನ ಗುರುತಿಸಿ ಸನ್ಮಾನಿಸುತ್ತಿರುವುದು ವಿಶ್ವವಿದ್ಯಾಲಯ ಕಾರ್ಯ ನಿಜಕ್ಕೂ ಶ್ಲಾಘನೀಯ.
ಇಲ್ಲಿರುವ ಅಲಂಕಾರಿಕ ಮೀನುಗಾರಿಕೆಯ ಮತ್ಸಲೋಕ ಅತ್ಯಂತ ಆಕರ್ಷಣೀಯವಾಗಿದ್ದು ಜಾನುವಾರುಗಳನ್ನು ಹಾಗೂ ಕೋಳಿಗಳು ಕೂಡ ನಮ್ಮ ವಿದ್ಯಾರ್ಥಿಗಳು ನೋಡಲಿ ಎಂದರು.
ಈ ಸಂದರ್ಭದಲ್ಲಿ ಇದಕ್ಕೆ ಸಹಕಾರ ನೀಡಿದ ಎಲ್ಲಾ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ಸನ್ಮಾನ್ಯ ಕುಲಪತಿಗಳಾದ ಪ್ರೊಫೆಸರ್ ಕೆ ಸಿ ವೀರಣ್ಣ ಸನ್ಮಾನಿಸಿ ಅಭಿನಂದಿಸಿದರು.
ಜೈನ,ಸಿಖ್ ಸಮುದಾಯದ ಅರ್ಚಕರು, ಗ್ರಂಥಿಗಳಿಗೆ ಮಾಸಿಕ ಗೌರವಧನಕ್ಕೆ ಅರ್ಜಿ ಆಹ್ವಾನ. ಬೆಂಗಳೂರು.10.ಜೂನ್.25:- ಜೈನ್ ಸಮುದಾಯದ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಧಾನ…
ಬೆಂಗಳೂರು.10.ಜೂನ್.25:- ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರಗಳನ್ನು ಮುಚ್ಚುತ್ತಿರುವ ರಾಜ್ಯ ಸರ್ಕಾರ, ಈಗ ಡಿಪ್ಲೊಮಾ ನರ್ಸಿಂಗ್ ಶಾಲೆಗಳನ್ನು (ಜಿಎನ್ಎಂ) ಬಿ.ಎಸ್ಸಿ…
ಬೆಂಗಳೂರು.10.ಜೂನ್.25:-ರಾಜ್ಯಾದ್ಯಂತ ಶಾಲೆಗಳು ಪುನಾರಂಭವಾಗಿದ್ದು, ಪ್ರಾಥಮಿಕ ಹಾಗೂ ಪ್ರೌಢ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಸಂಬಂಧಿಸಿದ ಪೋಸ್ಟರ್ ಗಳನ್ನು ಪ್ರದರ್ಶಿಸುವ ಬಗ್ಗೆ…
ವಿಜಯಪುರ.10.ಜೂನ್.25:-ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮಹಿಳಾ ಸಬಲೀಕರಣಕ್ಕಾಗಿ ಹತ್ತು ಹಲವು ವಿನೂತನ ಮಹಿಳೆಯರಿಗೆ ಉನ್ನತ ಶಿಕ್ಷಣದ ಅವಕಾಶಗಳ ಹೆಬ್ಬಾಗಿಲನ್ನು ತೆರೆದಿರುವ ಶೈಕ್ಷಣಿಕ…
ಜೂನ್ 9 ರಂದು 14,582 ಹುದ್ದೆಗಳಿಗೆ SSC CGL 2025 ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು…
ಶ್ರೀಲಂಕಾ ಇಂದು ಪವಿತ್ರ ಪೋಸನ್ ಪೋಯ ಹಬ್ಬವನ್ನು ಆಚರಿಸುತ್ತಿದೆ, ಇದು 2,000 ವರ್ಷಗಳ ಹಿಂದೆ ಬೌದ್ಧಧರ್ಮದ ಐತಿಹಾಸಿಕ ಆಗಮನವನ್ನು ಸೂಚಿಸುತ್ತದೆ.…