ಬೀದರ್.15.ಮೇ.25:- ಬೀದರ ನಗರದ ಗೋಪಿ ಸ್ಟುಡಿಯೊದಲ್ಲಿ ದಿನಾಂಕ ೧೪-೫-೨೦೨೫ ರಂದು ಸಂಜೆ ೬ ಗಂಟೆಗೆ ಹಿರಿಯ ಪತ್ರಕರ್ತರಾದ ಮೌಲಾನಾಸಾಬ್ (ಹಾಜಿಪಾಶಾ) ಅವರಿಗೆ ಇತ್ತಿಚೆಗೆ ಕಾಸರಗೂಡ ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಪ್ರವಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿoದ ಕೊಡಮಾಡುವ ಡಾ. ಕುಳ್ಳೂರ ಕನ್ಯಾನ ಸದಾಶಿವಶೆಟ್ಟಿ ದತ್ತಿ ನಿಧಿ ಪ್ರಶಸ್ತಿಗೆ ಭಾಜನರಾಗಿದ್ದು, ಪ್ರಶಸ್ತಿ ನೀಡಿ ಸನ್ಮಾನಿನಸಲಾಗಿದೆ.
ಇವರಿಗೆ ಸಂದ ಈ ಗೌರವ ಇಡೀ ಬೀದರ ಜಿಲ್ಲೆಗೆ ಕೀರ್ತಿ ತರುವಂತಾಗಿದೆ ಎಂದು ಸಾಹಿತ್ಯ ರತ್ನ ಅಣಾಭಾವು ಸಾಠೆ ಟ್ರಸ್ಟ್ ಹಾಗೂ ಚಂದ್ರ ಸಾಂಸ್ಕೃತಿಕ ಮತ್ತು ಸಾಹಿತಿಕ ಚಾರಿಟೇಬಲ ಟ್ರಸ್ಟ್ ವತಿಯಿಂದ ಅಭಿನಂದಿಸಿ ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನಿಸಲಾಯಿತು. ಹಾಜಿಪಾಶಾ ಅವರು ಸುಮಾರು ೩೦ ವರ್ಷಗಳಿಂದ ಕನ್ನಡ ಮತ್ತು ಹಿಂದಿ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತಿದ್ದಾರೆ.
ಅತ್ಯತ್ತಮ ಛಾಯಾಗ್ರಾಹಕ ಪ್ರಶಸ್ತಿ ಪಡೆದ ಬೀದರನ ಗೋಪಿಚಂದ ತಾಂದಳೆ ಅವರಿಗೂ ಕೂಡ ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಣ್ಣಾಭಾವು ಸಾಠೆ ಟ್ರಸ್ಟ್ ಅಧ್ಯಕ್ಷರಾದ ಎಂ. ಎಸ್. ಮನೋಹರ, ಚಂದ್ರ ಸಾಂಸ್ಕೃತಿಕ ಮತ್ತು ಸಾಹಿತಿಕ ಚಾರಿಟೇಬಲ ಟ್ರಸ್ಟ್ ಅಧ್ಯಕ್ಷರಾದ ಪ್ರವೀಣಚಂದ್ರ, ಹಾಗೂ ಕೆಇಬಿ ನೌಕರರ ಸಂಘದ ಮುಖಂಡರು ಮತ್ತು ಕಲ್ಯಾಣ ಕನಾಟಕದ ೩೭೧ ಜೆ ರಾಜ್ಯ ಸಂಚಾಲಕರಾದ ಸುಮಂತ ಕಟ್ಟಿಮನಿ ಕೆಇಬಿ ಎಸ್ಸಿಎಸ್ಸಿ ನೌಕರರ ಸಂಘದ ರಾಜ್ಯ ಸಿಇಸಿ ಸದಸ್ಯರಾದ ವಿಜಯಕುಮಾರ ಡುಮ್ಮೆ ಹಾಗೂ ಕೆಇಬಿ ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಪುಂಡಲಿಕ ಗೋಖಲೆ ಹಾಗೂ ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಬಿಚ್ಚಪ್ಪ ಆಲೂರ ಉಪಸ್ಥಿತರಿದ್ದರು.
ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…
ಬೆಂಗಳೂರು.09.ಜೂನ್.25:- ನ್ಯಾಯಮೂರ್ತಿ ಡಾ:ಹೆಚ್.ಎನ್.ನಾಗಮೋಹನ್ ದಾಸ್, ಏಕ ಸದಸ್ಯ ಆಯೋಗ ರಾಜ್ಯ ಸರ್ಕಾರದಿಂದ 'ಪರಿಶಿಷ್ಟ ಜಾತಿ ಒಳ ಮೀಸಲಾತಿ' ಸಮೀಕ್ಷಾ ಕಾರ್ಯ…
ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಸೇರಿದಂತೆ ಅಂತರರಾಷ್ಟ್ರೀಯ ಕಾರ್ಯಕರ್ತರು ಮತ್ತು ಮಾನವೀಯ ನೆರವಿನೊಂದಿಗೆ ಗಾಜಾ ಪಟ್ಟಿಗೆ ಪ್ರವೇಶಿಸುವ ದತ್ತಿ…
ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 2025-26ನೇ ಸಾಲಿಗೆ ವಿಷಯವಾರು ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳು ನೇಮಕ ಮಾಡಿಕೊಳ್ಳಲು…
ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…
ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…