ಡಿ.24 ಇಂದು ಬೀದರನಲ್ಲಿ ಡಿಸೆಂಬರ್.19 ರಿಂದ 24 ರವರೆಗೆ ದೇಶಾದ್ಯಂತ ಗುಡ್ ಗರ್ನನ್ಸ್ ಉತ್ತಮ ಆಡಳಿತ ಆಚರಣೆ ಮಾಡಲಾಗುತ್ತಿದ್ದು, ಅಧಿಕಾರಿಗಳು ತಮ್ಮ ಹಂತದಲ್ಲಿಯೇ ನಿಗದಿತ ಅವಧಿ ಒಳಗಾಗಿ ಸಾರ್ವಜನಿಕರ ಅಹವಾಲುಗಳನ್ನು ವಿಲೇವಾರಿಗೊಳಿಸುವಂಎ ಜಿಲ್ಲಾಧಿಕಾರಿ ಶಿಲ್ಪಾ ಶಮಾ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿAದು ಹಮ್ಮಿಕೊಂಡ ಉತ್ಮತ ಆಡಳಿತ ಗುಡ್ ಗರ್ನನ್ಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈಲ್ಲಾಡಳಿತದ ಜಿಲ್ಲಾ ಪಂಚಾಯತನ ವಿವಿಧ ಇಲಾಖೆಗಳು ತಳಮಟ್ಟದಲ್ಲಿಯೇ ಅರ್ಜಿಗಳನ್ನು ವಿಲೇವಾರಿ ಮಾಡದಲ್ಲಿ ತಾಲ್ಲೂಕು ಅಥವಾ ಜಿಲ್ಲಾ ಮಟ್ಟಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ.
ಸಾರ್ವಜನಿಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಸದಾ ಕ್ರೀಯಾಶೀಲರಾಗಿರಬೇಕು. ಅರ್ಜಿಗಳು ಸಲ್ಲಿಯಾದ ತಕ್ಷಣವೇ ತಮ್ಮ ಮಟ್ಟದಲ್ಲಿ ಪರಿಶೀಲಿಸಿ ಪರಿಹರಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲ ಸಹಾಯ ಸೌಲಭ್ಯಗಳನ್ನು ನಿಗದಿತ ಸಮಯದೊಳಗೆ ಒದಗಿಸಬೇಕೆಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮಾತನಾಡಿ, ಅಧಿಕಾರಿಗಳು ಸಕಾಲ ಹಾಗೂ ಐಪಿಜಿಆರ್ಎಸ್ ತಂತ್ರಾAಶದಲ್ಲಿ ಬಾಕಿಯಿರುವ ಅರ್ಜಿಗಳನ್ನು ತಕ್ಷಣವೇ ವಿಲೇವಾರಿ ಮಾಡುವಂತೆ ತಿಳಿಸಿದರು.
ಬೀದರ ನಗರಸಭೆ 43 ಪ್ರಕರಣಗಳು ಬಾಕಿ ಇವೆ. ಸೇವಾ ಸಿಂಧು (ಎಸ್.ಸಿ./ಎಸ್.ಟಿ/ಓಬಿಸಿ) ಅಡಿ 181 ಪ್ರಕರಣಗಳು, ಸಹಕಾರ ಇಲಾಖೆಯ 25, ಕಾರ್ಮಿಕ ಇಲಾಖೆಯ 43, ಜಿಲ್ಲಾ ನೋಂದಣಿ 213, ಗ್ರಾಮಿಣ ಅಭಿವೃದ್ಧಿ ಪಂಚಾಯತರಾಜ್ 2, ಆರ್ಟಿಓ 15 ಸೇರಿದಂತೆ ಒಟ್ಟು 899 ವಿವಿಧ ಪ್ರಕರಣಗಳು ಬಾಕಿಯಿದ್ದು, ಅವುಗಳನ್ನು ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮೊಹಮ್ಮದ ಶಕೀಲ, ಬೀದರ ವಿಶ್ವವಿದ್ಯಾಲಯದ ರಜಿಸ್ಟಾçರ್ ಸುರೇಖಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
Source: www.prajaprabhat.com
ಮೆರವಣಿಗೆಯೊಂದಿಗೆ ಆಚರಿಸುತ್ತದೆ ಅಮೆರಿಕವನ್ನು ಬಲಪಡಿಸುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ. ಶನಿವಾರ ವಾಷಿಂಗ್ಟನ್, ಡಿಸಿಯಲ್ಲಿ ಯುಎಸ್ ಸೈನ್ಯವು ತನ್ನ 250 ನೇ…
ಇಂದು ಮಾರ್ಚ್ 31, 2026 ರ ವೇಳೆಗೆ ಭಾರತವು ನಕ್ಸಲ್ ವಾದದಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ…
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತದಲ್ಲಿ ಸೈಪ್ರಸ್ಗೆ ಆಗಮಿಸಿದ್ದಾರೆ. ಅವರನ್ನು ಲಾರ್ನಾಕಾ ಅಂತರಾಷ್ಟ್ರೀಯ…
ಗುಜರಾತ್ನ ಅಹಮದಾಬಾದ್ ವಿಮಾನ ಅಪಘಾತದಲ್ಲಿ, ಇಲ್ಲಿಯವರೆಗೆ ಒಟ್ಟು 32 ಮೃತರ ಡಿಎನ್ಎ ಮಾದರಿಗಳನ್ನು ಹೊಂದಾಣಿಕೆ ಮಾಡಲಾಗಿದ್ದು, 14 ಮೃತದೇಹಗಳನ್ನು ಅವರ…
ಪುಣೆ.15.ಜೂನ್.25:- ಪುಣೆ ಸೇತುವೆ ಕುಸಿತ: ಭಾನುವಾರ ಮಧ್ಯಾಹ್ನ 3.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ, ವಾರಾಂತ್ಯದ ಕಾರಣ ಆ…
ಹೊಸ ದೆಹಲಿ.15.ಜೂನ್.25:- ಯುಜಿಸಿ NET EXAM HALL TICKET AND CITY....ಯುಜಿಸಿ ನೆಟ್ ಜೂನ್ 2025 ಪರೀಕ್ಷೆಯನ್ನು ಜೂನ್ 25…