ನಾಳೆ ಬೀದರನಲ್ಲಿ “ರಾಷ್ಟ್ರ ರಕ್ಷಣೆಗಾಗಿ ನಾಗರಿಕರ” ವತಿಯಿಂದ ತಿರಂಗಾ ಯಾತ್ರೆ

ಬೀದರ.15.ಮೇ.25:- ಬೀದರ ಜಿಲ್ಲೆಯಲಿ ್ಲ “ರಾಷ್ಟç ರಕ್ಷಣೆಗಾಗಿ ನಾಗರಿಕರ” ವತಿಯಿಂದ ತಿರಂಗಾ ಯಾತ್ರೆ ಪಹಲಗಾಮನಲ್ಲಿ ನಮ್ಮ ಸಹೋದರಿಯರ ಸಿಂಧೂರ ಕಸಿದ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ “ ಆಪರೇಷನ್ ಸಿಂಧೂರ ” ಮುಖಾಂತರ ಉಗ್ರರ ನೆಲೆಗಳನ್ನು ಹಾಗೂ ಅವರ ಪೋಷಕ ಪಾಕಿಸ್ತಾನದ ಸೇನಾ ನೆಲೆಗಳನ್ನು ನಾಶಪಡಿಸಿ ವಿಶ್ವಕ್ಕೆ ಭಾರತದ ಸೈನ್ಯಶಕ್ತಿಯನ್ನು ತೋರಿಸಿದ ಸೈನಿಕರಿಗೆ ಗೌರವಾರ್ಥವಾಗಿ ನಗರದಲ್ಲಿ ನಾಳೆ  ಅಂದರೆ ಮೇ ೧೭ ಶನಿವಾರದಂದು ತಿರಂಗಾ ಯಾತ್ರೆ ಜರುಗಲಿದೆ ಎಂದು ಶಾಸಕರಾದ ಡಾ. ಶೇಲೈಂದ್ರ ಬೆಲ್ದಾಳೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮಾಜಿ ಸದಸ್ಯರಾದ ಸೋಮನಾಥ ಪಾಟೀಲ ಹುಡಗಿ ಅವರುಗಳು ಜಂಟಿಯಾಗಿ ತಿಳಿಸಿದ್ದಾರೆ.


        ಈ ಯಾತ್ರೆಯು ಮುಂಜಾನೆ ೦೯:೦೦ ಗಂಟೆಗೆ ಭೂಮರೆಡ್ಡಿ ಕಾಲೇಜಿನಿಂದ  ಎದರುಗಡೆ ಇರುವ ಬಸವ ಮುಕ್ತಿ ಮಂದಿರದಿoದ ಪಾದಯಾತ್ರೆ  ಪ್ರಾರಂಭಗೊoಡು  ೧೦:೩೦ ಗಂಟೆಗೆ ಶಿವಾಜಿ ಮಹಾರಾಜರ ವೃತ್ತದಲ್ಲಿ ಸಮಾರೊಪಗೊಳ್ಳಲಿದೆ.

  ಜಿಲ್ಲೆಯ ಮಠಾಧೀಶರು ಹಾಗೂ ಮಾಜಿ ಸೈನಿಕರ ನೇತ್ರತ್ವದಲ್ಲಿ ಜರುಗಲಿರುವ ಈ ಯಾತ್ರೆಯಲ್ಲಿ ವಕೀಲರು, ವೈದ್ಯರು, ಇಂಜಿನೀಯರಗಳು, ವ್ಯಾಪಾರಸ್ಥರು, ಎಲ್ಲಾ ಸಮಾಜಗಳ ಮುಖಂಡರು, ಸಂಘ ಸಂಸ್ಥೆಗಳ, ಪ್ರಮುಖರು, ಕಾಲೇಜು ವಿದ್ಯಾರ್ಥಿಗಳು, ಹಾಗೂ ದೇಶ ಭಕ್ತನಾಗರಿಕರು ಕೈಯಲ್ಲಿ ರಾಷ್ಟçಧ್ವಜ (ತಿರಂಗಾ) ಹಿಡಿದುಕೊಂಡು ಭಾರತಮಾತೆ ಹಾಗೂ ಸೈನಿಕರಿಗೆ ಜಯಘೊಶ ಮೊಳಗಿಸುತ್ತo್ತ ಪಾದಯಾತ್ರೆ ಮಾಡಲಿದ್ದಾರೆ.


ಪಕ್ಷಾತೀತ ಹಾಗೂ ಜ್ಯಾತ್ಯಾತೀತವಾಗಿ ದೇಶ ಹಾಗೂ ಸೈನಿಕರಿಗಾಗಿ ಜರಗುವ ಈ ಪಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಎಲ್ಲಾ ದೇಶಭಕ್ತ ನಾಗರಿಕರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಂದು ಮುಂಜಾನೆ ೦೯:೦೦ ಗಂಟೆಗೆ ಬಸವ ಮುಕ್ತಿ ಮಂದಿರಕ್ಕೆ ಆಗಮಿಸಬೇಕೆಂದು  ಪತ್ರಿಕಾ ಪ್ರಕಟಣೆ ಮುಖಾಂತರ  ಮನವಿ ಮಾಡಿದ್ದಾರೆ.

prajaprabhat

Recent Posts

ಬೀದರ: ಪತ್ರಿಕಾ ಗೋಷ್ಟಿಗೆ ಅವ್ಹಾನ

ಬೀದರ.09.ಜೂನೆ.25:- ನಾಳೆ ದಿನಾಂಕ 10. ಜೂನ್ ಬೆಳಿಗ್ಗೆ 10.00 ಗಂಟೆಗೆ ಪತ್ರಿಕಾ ಗೋಷ್ಟಿಗೆ ಅವ್ಹಾನ ನಾಳೆ(10/06/2025) ಮಂಗಳವಾರ ಬೆಳಿಗ್ಗೆ 10.00…

46 minutes ago

೨೧ ದಿನಗಳ ಕ್ರೀಡಾ ತರಬೇತಿ ಸಂಪನ್ನ, ಪ್ರಮಾಣ ಪತ್ರ ವಿತರಣೆ<br>

ಬೀದರ.09.ಜೂನ್.25:- ಕ್ರೀಡಾ ತರಬೇತಿ ಸಂಪನ್ನ, ಪ್ರಮಾಣ ಪತ್ರ ವಿತರಣೆ ಕ್ರೀಡೆಗಳಿಂದ ದೈಹಿಕ, ಬೌದ್ಧಿಕ ಬೆಳವಣಿಗೆಯಾಗುತ್ತದೆ - ರಾಜಶೇಖರ ಜವಳೆ ಕ್ರೀಡೆಗಳಿಂದ…

50 minutes ago

ಆಧುನಿಕ ಕೋಳಿ ಸಾಕಾಣಿಕೆ ತರಬೇತಿಗಾಗಿ ಅರ್ಜಿ ಆಹ್ವಾನ

ಬೀದರ.09.ಜೂನ್.25:- ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಬೀದರ, ಕೇಂದ್ರ ಗ್ರಂಥಾಲಯ ಹಿಂಭಾಗ ಜನವಾಡ ರಸ್ತೆ, ಬೀದರನಲ್ಲಿ ಎರಡು ದಿವಸ…

57 minutes ago

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

ಬೀದರ.09.ಜೂನ್.25:- ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಬೆಸ್ತ, ಅಂಬಿಗ/ಅAಬಿ, ಗಂಗಾಮತ, ಕಬ್ಬಲಿಗೆ, ಕೋಲಿ, ಮತ್ತು ಇದರ ಉಪಜಾತಿಗಳ ಅಭಿವೃದ್ಧಿಗಾಗಿ…

59 minutes ago

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

ಬೀದರ.09.ಜೂನ್.25:- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ…

1 hour ago

ಮೂರು ತಿಂಗಳಲ್ಲಿ ಸರಕಾರಕ್ಕೆ ಪ್ರಾದೇಶಿಕ ಅಸಮತೋಲನ<br>ನಿವಾರಣಾ ಸಮಿತಿಯ ವರದಿ ಸಲ್ಲಿಕೆ-ಅಧ್ಯಕ್ಷ ಪ್ರೊ.ಗೋವಿಂದರಾವ್

ಬೀದರ.09.ಜೂನ್.25:- ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಶಿಕ್ಷಣ, ಆರೋಗ್ಯ, ತಲಾ ಆದಾಯ, ಕೃಷಿ, ಹೈನುಗಾರಿಕೆ, ಕೈಗಾರಿಕೆ, ಸೇವಾ ಕ್ಷೇತ್ರ ಹಾಗೂ ಸಾಮಾಜಿಕ…

1 hour ago