ಬೆಂಗಳೂರು.12.ಜೂನ.25:- ದೆಹಲಿಯ ಕರ್ನಾಟಕ ಭವನದ ವಾಸ್ತವ್ಯ ದರ, ಮಾರ್ಗಸೂಚಿ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನವದೆಹಲಿಯ ಕರ್ನಾಟಕ ಭವನವು ರಾಜ್ಯ ಸರ್ಕಾರದ ಆತಿಥ್ಯ ಸಂಸ್ಥೆಯ ಅಂಗವಾಗಿದ್ದು ಪ್ರಸ್ತುತ 03 ಭವನಗಳು ಕಾರ್ಯನಿರ್ವಹಿಸುತ್ತಿವೆ-
ಕರ್ನಾಟಕ ಭವನ-1 ಅನೆಕ್ಸ್ ಕಟ್ಟಡ (ಚಾಣಕ್ಯಪುರಿ)
ಕರ್ನಾಟಕ ಭವನ-2 (ಶರಾವತಿ)
ಕರ್ನಾಟಕ ಭವನ-3 (ಭೀಮಾ),
ಮೇಲೆ (1)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ನವದೆಹಲಿಯಲ್ಲಿರುವ ಕರ್ನಾಟಕ ಭವನಗಳ ವಾಸ್ತವ್ಯದ ದರಗಳನ್ನು ಹಾಗೂ ಷರತ್ತುಗಳನ್ನು ನಿಗದಿಪಡಿಸಿ ಪ್ರಕಟಿಸಲಾಗಿದೆ.
ಮೇಲೆ ಓದಲಾದ
(2)ರ ಪತ್ರದಲ್ಲಿ ದರ ಹಾಗೂ ಕೊಠಡಿ ಹಂಚಿಕೆ ಮಾರ್ಗಸೂಚಿಗಳಿಗೆ ಕೆಲವೊಂದು ಮಾರ್ಪಾಡು ಮಾಡುವಂತೆ ನಿವಾಸಿ ಆಯುಕ್ತರು ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಅಲ್ಲದೇ, ಕರ್ನಾಟಕ ವಿಧಾನಸಭೆಯ ಅಂದಾಜು ಸಮಿತಿ ಹಾಗೂ ಹಕ್ಕು ಭಾದ್ಯತೆಗಳ ಸಮಿತಿಗಳು ಸಹ ಕೆಲವೊಂದು ಮಾರ್ಪಾಡುಗಳನ್ನು ತರುವಂತೆ ಸೂಚಿಸಿರುತ್ತಾರೆ. ಈ ಪ್ರಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ನವದೆಹಲಿಯ ಕರ್ನಾಟಕ ಭವನಗಳ ವಾಸ್ತವ್ಯ ದರಗಳು, ಷರತ್ತು & ನಿಬಂಧನೆಗಳು ಹಾಗೂ ಕೊಠಡಿಗಳ ಹಂಚಿಕೆ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ದಿನಾಂಕ: 29.03.2025ರ ಸಮ ಸಂಖ್ಯೆಯ ಸರ್ಕಾರದ ಆದೇಶ ಸಂಖ್ಯೆಯ
ಅನುಬಂಧ-1ರಲ್ಲಿರುವ ವಾಸ್ತವ್ಯ ದರಗಳನ್ನು ಹಾಗೂ ಅನುಬಂಧ-2ರಲ್ಲಿರುವ ಕೊಠಡಿ ಹಂಚಿಕೆ ಮಾರ್ಗಸೂಚಿಗಳನ್ನು, ಕ್ರಮವಾಗಿ ಷರತ್ತು & ನಿಬಂಧನೆಗಳೊಂದಿಗೆ ಪರಿಷ್ಕರಿಸಿ ಆದೇಶಿಸಲಾಗಿದೆ.
ಬೆಂಗಳೂರು.13.ಜೂನ್.25:- ರಾಜ್ಯದ ಆರೋಗ್ಯ ಇಲಾಖೆಯಲ್ಲಿ NHM ಅಡಿಯಲ್ಲಿ ನೇಮಕಗೊಂಡ ಆಶಾ ಮೆಂಟರ್ಸ್ ಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. 2007-08ನೇ…
ಬೆಂಗಳೂರು.13.ಜೂನ್.25:- ಬೀದರ್ ಬೆಂಗಳೂರು ಮತ್ತೊಂದು ವಿಶೇಷ ಟ್ರೈನ್ ಇದೇ 15 ಜೂನ್ ರಿಂದ ಪ್ರಾರಂಭ ಆಗ್ತಿದೆ. ಈ ಟ್ರೈನ್ ಕರ್ನಾಟಕದ…
ಬೆಂಗಳೂರು.13.ಜೂನ್ .25:- ರಾಜ್ಯ ಸರ್ಕಾರಿ ನೌಕರರಿಗೆ 2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ ರಾಜ್ಯಾದ್ಯಂತ ಶ್ರವಣ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ…
ಬಳ್ಳಾರಿ.13.ಜೂನ್.25:- ರಾಜ್ಯದಲ್ಲಿ ಏಕಲವ್ಯ ಮಾದರಿ ಸ್ಕೂಲ್ ಗಳಲ್ಲಿ ಬೇಕಾಗಿರುವ ಶೀಕ್ಷಕರ ಹುದ್ದೆಗಳು ತಾಲ್ಲೂಕಿನ ಕೊಳಗಲ್ಲು ಗ್ರಾಮದ ಏಕಲವ್ಯ ಮಾದರಿ ವಸತಿ…
ಬೆಂಗಳೂರು.13.ಜೂನ್.25:- ರಾಜ್ಯದ ಡಿಸಿಆರ್ಇ ಪೊಲೀಸ್ ಠಾಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವ ಮತ್ತು…
ಹೊಸ ದೆಹಲಿ.13.ಜೂನ್.25:- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2025-26ರ ಹಣಕಾಸು ವರ್ಷದ ನೇಮಕಾತಿಯ ಭಾಗವಾಗಿ 4,500 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ.…