ಜಿಲ್ಲಾಮಟ್ಟದ ವಿಚಾರಣ ಸಂಕಿರಣ ಕಾರ್ಯಕ್ರಮ.ಗೋಡಂಬಿ ಭಾರತಕ್ಕೆ ಪರಿಚಯಿಸಿದ ಪ್ರಮುಖ ವಾಣಿಜ್ ಡಾ.ಎಸ್.ವಿ.ಪಾಟೀಲ್

ಬೀದರ.20.ಮಾರ್ಚ.25:- ಗೋಡಂಬಿ (ಅನಾಕಾರ್ಡಿಯಂ ಆಕ್ಸಿಡೆಂಟೇಲ್ ಎಲ್.) 16ನೇ ಶತಮಾನದಲ್ಲಿ ಪೋರ್ಚುಗೀಸರು ಭಾರತಕ್ಕೆ ಪರಿಚಯಿಸಿದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ, ಭಾರತದಲ್ಲಿ ಗೋಡಂಬಿಯನ್ನು ಆರಂಭದಲ್ಲಿ ಗೋವಾದಲ್ಲಿ ಪರಿಚಯಿಸಲಾಯಿತು ಮತ್ತು ನಂತರ ಇತರ ರಾಜ್ಯಗಳಿಗೆ ವಿಸ್ತರಿಸಲಾಯಿತು ಎಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಹಾಗೂ ಪ್ರಧಾನ ಸಂಶೋಧಕರಾದ ಡಾ.ಎಸ್.ವಿ.ಪಾಟೀಲ್ ತಿಳಿಸಿದರು.


ಅವರು ಇತ್ತೀಚಿಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ, ತೋಟಗಾರಿಕೆ ಮಹಾವಿದ್ಯಾಲಯ ಬೀದರ ಮತ್ತು ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿ ಇವರುಗಳ ಸಂಯುಕ್ತಾಶ್ರಯದಲ್ಲಿ ಬೀದರನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ “ಗೋಡಂಬಿ ಬೆಳೆಯ ಸುಧಾರಿತ ಉತ್ಪಾದನಾ ತಾಂತ್ರಿಕತೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ” ಕುರಿತು ಜಿಲ್ಲಾಮಟ್ಟದ ವಿಚಾರಣ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಕಳಪೆ ಮಣ್ಣಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸ್ಥಿತಿಸ್ಥಾಪಕ ಮತ್ತು ಬರ ನಿರೋಧಕ ಮರವಾಗಿ, ಅರಣ್ಯನಾಶ ಮತ್ತು ಮಣ್ಣಿನ ಸವೆತವನ್ನು ಎದುರಿಸುವ ಹೋರಾಟದಲ್ಲಿ ಇದು ಪರಿಸರ ಪ್ರಯೋಜನಗಳನ್ನು ನೀಡುತ್ತದೆ ಆದ್ದರಿಂದ ಇದನ್ನು ತ್ಯಾಜ್ಯ ಭೂಮಿಯ ಚಿನ್ನದ ಗಣಿ ಎಂದು ಕರೆಯಲಾಗುತ್ತದೆ.

ಭಾರತದ ಗೋಡಂಬಿ ಉತ್ಪಾದನೆಯು 2021-22 ರಲ್ಲಿ 779 ಸಾವಿರ ಟನ್‌ಗಳಿಂದ 2022-23 ರಲ್ಲಿ 810 ಸಾವಿರ ಟನ್‌ಗಳಿಗೆ ಏರಿಕೆಯಾಗಿದ್ದು, ಶೇ. 4 ರಷ್ಟು ಬೆಳವಣಿಗೆಯ ದರವನ್ನು ದಾಖಲಿಸಿದೆ. ಬೀದರ್ ಗೋಡಂಬಿ ಬೆಳೆಯಲು ಸೂಕ್ತವಾಗಿದೆ ಹಾಗೂ ನೈಸರ್ಗಿಕ ಸಂಪನ್ಮೂಗಳಾದ ನೀರು ಮತ್ತು ಮಣ್ಣುಗಳ ಸರಿಯಾದ ಸದ್ಬಳಕೆ ಹಾಗೂ ಸಂರಕ್ಷಣೆಯಲ್ಲಿ ಗೋಡಂಬಿ ಬೆಳೆಯ ಪಾತ್ರ ತಿಳಿಸುತ್ತಾ, ಬರಡು ಭೂಮಿಗೆ ಬಂಗಾರ ಬೆಳೆಯಾದ ಗೋಡಂಬಿಯನ್ನು ಬೆಳೆದು ಅಧಿಕ ಲಾಭ ಪಡೆಯಲು ಡಾ.ಎಸ್.ವಿ.ಪಾಟೀಲ್ ಕರೆ ನೀಡಿದರು.


ಕಲಬುರಗಿ ಕೃಷಿ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ.ಸುರೇಶ ಪಾಟೀಲ ಮಾತನಾಡಿ, ಗೋಡಂಬಿಯನ್ನು ಸಾಮಾನ್ಯವಾಗಿ ‘ಬಡವರ ಬೆಳೆ ಮತ್ತು ಶ್ರೀಮಂತರ ಆಹಾರ’ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಪ್ರಮುಖ ನಗದು ಬೆಳೆ ಮತ್ತು ಹೆಚ್ಚು ಮೌಲ್ಯಯುತವಾದ ಬೀಜವಾಗಿದೆ.

ಗೋಡಂಬಿಯAತಹ ಬೀಜಗಳನ್ನು ತಿನ್ನುವುದು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು.


ಬೀದರ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಜಗನ್ನಾಥ ಮೂರ್ತಿ ಮಾತನಾಡಿ, ಗೋಡಂಬಿ ಮೂಲತಃ ಉಷ್ಣವಲಯದ ಬೆಳೆಯಾಗಿದ್ದು, ಬೆಚ್ಚಗಿನ, ತೇವಾಂಶವುಳ್ಳ ಮತ್ತು ಸಾಮಾನ್ಯವಾಗಿ ಉಷ್ಣವಲಯದ ಹವಾಮಾನದಲ್ಲಿ ಉತ್ತಮವಾಗಿ ಬೆಳೆಯುತ್ತದೆಂದರು.


ಕಾರ್ಯಕ್ರಮದಲ್ಲಿ ಅಮೋಲ ವಿಜಾಪೂರೆ, ನಿರ್ದೇಶಕರು, ವೀರಭದ್ರೇಶ್ವರ ಅಗ್ರೋ ಇಂಡಸ್ಟಿçÃಸ್ ಪ್ರತಾಪ ನಗರ, ಬೀದರ ಅವರು ತಮ್ಮ ಸಂಸ್ಥೆಯು ಯಾವು ರೀತಿಯಲ್ಲಿ ಗೋಡಂಬಿಯನ್ನು ಸಂಸ್ಕರಣೆ ಮಾಡಿ ಮಾರಾಟ ಮಾಡುವ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಿದರು.

ಇದೇ ಸಂಧರ್ಭದಲ್ಲಿ ಇವರು ತಮ್ಮ ಘಟಕದಲ್ಲಿ ಸಂಸ್ಕರಿಸಿದAತಹ ಕೆಲವು ಗೋಡಂಬಿಗಳನ್ನು ವಸ್ತು ಪ್ರದರ್ಶನಕ್ಕಾಗಿ ಇಟ್ಟಿರುವುದರಿಂದ ರೈತರು ಸದರಿ ಗೋಡಂಬಿ ಪ್ರದರ್ಶನವನ್ನು ನೋಡಿ ಸದರಿಯವರ ಸಂಸ್ಕರಣಾ ಘಟಕದ ಕಾರ್ಯವೈಖರಿಯ ಬಗ್ಗೆ ರೈತರು ಮಾಹಿತಿಯನ್ನು ಪಡೆದರು. ಈ ತರಬೇತಿ ಕಾರ್ಯಕ್ರಮದಲ್ಲಿ ಬೀದರ ಜಿಲ್ಲೆಯ 150 ರೈತರು ಭಾಗಿಯಾಗಿ ಸದುಪಯೋಗ ಪಡೆದರು.


ಡಾ. ಎಸ್. ವಿ. ಪಾಟೀಲ, ಡಾ. ಪ್ರವೀಣ ಜೋಳಗೀಕರ, ಡಾ. ವಿ.ಪಿ. ಸಿಂಗ್, ಡಾ. ಅಶೋಕ ಸೂರ್ಯವಂಶಿ, ಡಾ. ಪ್ರಶಾಂತ, ಡಾ. ಹರೀಶ ಟಿ. ಹಾಗೂ ಡಾ. ಕಡ್ಲಿ ವೀರೇಶ ಇವರುಗಳು ವಿಷಯವಾರು ಸಮಗ್ರವಾದಂತಹ ತಾಂತ್ರಿಕ ಮಾಹಿತಿಯನ್ನು ರೈತರಿಗೆ ನೀಡಿದರು.


ಈ ಕಾರ್ಯಕ್ರಮದಲ್ಲಿ ಡಾ. ವಿ.ಪಿ. ಸಿಂಗ್ ಅವರು ಪ್ರಸ್ತಾವಿಕ ನುಡಿ ಹೇಳಿದರು. ಡಾ. ಕಡ್ಲಿ ವೀರೇಶ ಇವರು ಎಲ್ಲಾ ಗಣ್ಯರಿಗೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹಾಗೂ ಡಾ. ಪ್ರಶಾಂತ, ಸಹಾಯಕ ಪ್ರಾಧ್ಯಾಪಕರು ಇವರು ವಂದಿಸಿದರು.

prajaprabhat

Recent Posts

UGC-NET ಜೂನ್ 2025 ರ ಪರೀಕ್ಷಾ ವೇಳಾಪಟ್ಟಿ ಮತ್ತು  ನೋಂದಣಿ

ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…

3 hours ago

ಬೀದರ್‌’ನಲ್ಲಿ ಮೀನು ನುಂಗಿ ರೋಗ ಗುಣಮುಖ ವಿಶಿಷ್ಟ ಆಚರಣೆ

ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…

5 hours ago

ಉತ್ತರಾಖಂಡದಲ್ಲಿ ಸೇನಾ ಸನ್ನದ್ಧತೆಯನ್ನು ಪರಿಶೀಲಿಸಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಐಬೆಕ್ಸ್ ತರಾನಾ 88.4 ಎಫ್‌ಎಂ ಅನ್ನು ಉದ್ಘಾಟಿಸಿದರು.

ಉತ್ತರಾಖಂಡದ ಗರ್ವಾಲ್‌ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…

7 hours ago

ಮಿಥಿ ನದಿ ಹೂಳೆತ್ತುವ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ದಾಳಿ ನಡೆಸಿದೆ.

ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…

7 hours ago

ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಉತ್ತರ ರೈಲ್ವೆ ಪ್ರಾರಂಭಿಸಿದೆ

ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…

7 hours ago

ಭೂಕುಸಿತದಿಂದ ಹಾನಿಗೊಳಗಾದ ಚಾಟೆನ್‌ನಿಂದ ಸಿಕ್ಕಿಬಿದ್ದ ಸ್ಥಳೀಯರು ಮತ್ತು ಟ್ಯಾಕ್ಸಿ ಚಾಲಕರನ್ನು ಸಿಕ್ಕಿಂ ಸರ್ಕಾರ ವಿಶೇಷ ಹೆಲಿಕಾಪ್ಟರ್ ಮೂಲಕ ರಕ್ಷಿಸಿದೆ

ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್‌ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…

7 hours ago