ಜನಮೆಚ್ಚಿದ ವೈದ್ಯರಾದ ಡಾ ಬಸವರಾಜ್ ರವರಿಗೆ  ಕಾಯಕ ರತ್ನ ಪ್ರಶಸ್ತಿ.

ಚಾಮರಾಜನಗರ.30.ಏಪ್ರಿಲ್.25:- ಯಳಂದೂರು: ವೈದ್ಯರು ಅಂದರೆ ದೇವರಿಗಿಂತ ಮಿಗಿಲು ಎಂಬುವುದಕ್ಕೆ ಇಂದಿನ ಸಮಾಜವೇ ಒಂದು ಉದಾಹರಣೆ.


ನರಳಾಡುತ್ತಿರುವ ರೋಗಿಯನ್ನು ವೈದ್ಯರು ಪ್ರೀತಿಯಂದ ಮಾತನಾಡಿಸಿ ನಿಮಗೆ ಏನೂ ಆಗಿಲ್ಲ ಧೈರ್ಯವಾಗಿರಿ ಎಂದು ಮನೋ ಸ್ಥೈರ್ಯ ತುಂಬಿದರೆ ರೋಗಿಗೆ ಅರ್ಧ ರೋಗ ನಿರ್ಮೂಲನೆಯಾದಗೆ ಎಂದರೆ ತಪ್ಪಾಗಲಾರದು.


ಇಂತಹ ಗುಣವಿರುವಂತಹ ಶಸ್ತ್ರ ಚಿಕಿತ್ಸಕ ಡಾ ಬಸವರಾಜ್ ರವರನ್ನು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ತು 2025 ನೇ ಸಾಲಿನ ಕಾಯಕ ರತ್ನ ಪ್ರಶಸ್ತಿಯಗೆ ಆಯ್ಕೆಮಾಡಿದ್ದಾರೆ
ಮೇ 2 ರಂದು ಬಾಗಲಕೋಟೆ ಜಿಲ್ಲೆ ರಬಕವಿ ಪಟ್ಟಣದಲ್ಲಿ ರಾಜ್ಯಮಟ್ಟದ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ.

ವೈದ್ಯಕೀಯ ಸೇವೆಯ ಮುಂದೆ ಇನ್ಯಾವುದೇ ಸೇವೆ ಏನೇನೂ ಅಲ್ಲ ಅನ್ನಿಸುತ್ತದೆ.
ವೈದ್ಯರಲ್ಲಿ ಸಹನೆ, ಕರುಣೆ, ಮಮತೆ ಎಂಬ ಗುಣಗಳು ಅಡಕವಾಗಿದ್ದರೆ ಜನರು ಇಂತಹ ವೈದ್ಯರನ್ನು ದೇವರಿಗಿಂತ ಪೂಜಿಸುತ್ತಾರೆ.


ಇಂತಹ ಗುಣವಿರುವಂತ ಜನಪ್ರಿಯ ವೈದ್ಯರು ಹಾಗೂ ಸಹನ ಮೂರ್ತಿ, ಯಾರಿಗೂ ನೋವನ್ನು ಉಂಟುಮಾಡದೇ ದೇವರಿಗಿಂತಲೂ ಮಿಗಿಲಾಗಿರುವ ಡಾ ಬಸವರಾಜ್ ರವರನ್ನು ಕೊಳ್ಳೇಗಾಲ ಮತ್ತು ಯಳಂದೂರು ಭಾಗದ ಜನರು ಪೂಜಿಸುತ್ತಾರೆ.

ಡಾ ಬಸವರಾಜ್ ರವರು ಕೊಳ್ಳೇಗಾಲದ ಭೀಮನಗರವಾಸಿ ಕಡುಬಡತನದಲ್ಲಿ ಬೆಳೆದು ಉತ್ತಮ ವಿದ್ಯಾಭ್ಯಾಸ ಮಾಡಿ ಇಂದು ವೈದ್ಯರಾಗಿದ್ದಾರೆ ಬಡವರ ನೋವನ್ನು ಸಂಪೂರ್ಣ ಅರ್ಥಮಾಡಿಕೊಂಡಿದ್ದಾರೆ ಇವರನ್ನು ಆದರ್ಶ ವೈದ್ಯರೆಂದು ಕರೆಯಲಾಗುತ್ತದೆ ಹಾಗೂ ದಲಿತ ರಾಜಕಾರಣಿ ದಿವಂಗತ ಶ್ರೀನಿವಾಸ್ ಪ್ರಸಾದ್ ರವರ ಸಂಬಂಧಿಯಾಗಿದ್ದಾರೆ. ಇವರು ವೈದ್ಯಕೀಯ ಸೇವೆಯಿಂದಲೇ ಅಪಾರವಾದ ಜನರನ್ನು ಸಂಪಾದಿಸಿಕೊಂಡಿದ್ದಾರೆ.


ಯಳಂದೂರಿನ ತಾಲ್ಲೂಕು ಆಸ್ಪತ್ರೆಯಲ್ಲಿ ಸೇವೆಸಲ್ಲಿಸಿ ಯಳಂದೂರು ಆಸ್ಪತ್ರೆಯನ್ನು ರಾಜ್ಯದಲ್ಲಿಯೇ ಗುರುತಿಸುವಂತೆ ಮಾಡಿದ್ದಾರೆ. ಹಾಗೂ ಪ್ರಸ್ತುತ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ಸರ್ಜನ್ ಡಾಕ್ಟರ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.


ಇವರನ್ನು ಜನಮೆಚ್ಚಿದ ವೈದ್ಯರೆಂದು ಗುರುತಿಸಲಾಗುತ್ತದೆ.
ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದಕ್ಕೆ ಜನರು ಸಂತಸಪಡುತ್ತಿದ್ದಾರೆ. ರಾಜ್ಯ ಸರಕಾರ ಅಥವಾ ಕೇಂದ್ರಸರಕಾರಗಳು ಇಂತಹ ವೈದ್ಯರನ್ನು ಗುರುತಿಸಿ ಗೌರವಿಸಿ ಅಭಿನಂದಿಸಬೇಕಾಗುತ್ತದೆ.


ಇವರಿಗೆ ಕೆಸ್ತೂರು ಗ್ರಾಪಂ ಸದಸ್ಯ ಹಾಗೂ ಯುವ ಮುಖಂಡ ಗುರುಲಿಂಗಯ್ಯ, ನಾಗಣ್ಣ, ರಾಮಕೃಷ್ಣ, ಸಿದ್ದರಾಜು, ನಾಗರಾಜು ಬಿ,  ಪತ್ರಕರ್ತ ಜೆ.ಪ್ರಸನ್ನಕುಮಾರ್, ಯುವ ಮುಖಂಡ ಕಿರಣ್, ಸಚಿನ್,  ಸಂಜಯರಾಜ್, ಚಿಕ್ಕನಿಂಗಯ್ಯ, ರಂಗಸ್ವಾಮಿ, ನಾಗೇಶ್, ಬಾಲುಪ್ರಸಾದ್ ಶುಭಾಶಯ ಕೋರಿದರು.
ವರದಿ.ಪ್ರಸನ್ನಕುಮಾರ್ ಕೆಸ್ತೂರು

prajaprabhat

Recent Posts

ವಿದ್ಯಾರ್ಥಿ ವೇತನ ಕೈಪಿಡಿ: ಮಿರೇ ಅಸೆಟ್ ಫೌಂಡೇಷನ್‌

ಮಿರೇ ಅಸೆಟ್ ಫೌಂಡೇಷನ್‌ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…

2 hours ago

AllA ಅವರ “ಯೋಗ ಸಮಾವೇಶ” ಕಾರ್ಯಾಗಾರ ಇಂದು ಪ್ರಾರಂಭವಾಗಿದೆ

ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…

2 hours ago

ಸಿಕ್ಕಿಂನ ಭೂಕುಸಿತ ಪ್ರದೇಶಗಳಿಂದ 28 ನಾಗರಿಕರು ಮತ್ತು 20 ಸೈನಿಕರನ್ನು ವಿಮಾನದ ಮೂಲಕ ರಕ್ಷಿಸಲಾಗಿದೆ.

ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ…

2 hours ago

ಪ್ರತ್ಯೇಕತೆಯಿಂದ ನಾವೀನ್ಯತೆಯವರೆಗೆ – ಸೇವಾ, ಸುಶಾಸನ್, ಗರೀಬ್ ಕಲ್ಯಾಣ್ ಅಡಿಯಲ್ಲಿ ಒಂದು ದಶಕದ ಪರಿವರ್ತನೆ.

ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…

2 hours ago

ಗ್ರಾ.ಪಂ.ಗಳಲ್ಲಿ ಅರ್ಹ ಆಸ್ತಿಗಳಿಗೆ ಇ-ಸ್ವತ್ತು ಅಭಿಯಾನ : ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…

2 hours ago

ರಾಜ್ಯದಲ್ಲಿ ನಾಳೆಯಿಂದ ಭಾರೀ ಮಳೆ’ ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…

5 hours ago