ಜಗತ್ತು ಕಂಡ ಜ್ಞಾನಸೂರ್ಯ ಡಾ.ಅಂಬೇಡ್ಕರರವರು–ಎಸ್.ಎಮ್.ಜನವಾಡಕರ್


ಬೀದರ.16.ಏಪ್ರಿಲ್.14. ಸಂವಿಧಾನಶಿಲ್ಪಿ, ಭಾರತರತ್ನ, ಡಾ.ಅಂಬೇಡ್ಕರ್‌ರವರು ಜಗತ್ತು ಕಂಡ ಮಹಾಜ್ಞಾನಿಯಾಗಿದ್ದರು ಎಂದು ಹಿರಿಯ ಸಾಹಿತಿಗಳಾದ ಶ್ರೀ ಎಸ್.ಎಂ.ಜನವಾಡಕರ್‌ರವರು ಹೇಳಿದರು.
ಅವರು ಇಂದು ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ್‌ರವರ ಜಯಂತಿಯ ಸಂದರ್ಭದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು.


ಭಾರತ ದೇಶದ ಘನತೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ಶ್ರೇಯಸ್ಸು ಡಾ.ಬಿ.ಆರ್.ಅಂಬೇಡ್ಕರ್‌ರವರಿಗೆ ಸಲ್ಲುತ್ತದೆ. ಡಾ.ಬಾಬಾಸಾಹೇಬ ಅಂಬೇಡ್ಕರ್‌ರವರು ತಮ್ಮ ಸತತ ಕಠಿಣ ಪರಿಶ್ರಮ, ಅಪಾರ ಜ್ಞಾನ, ಹೋರಾಟದಿಂದ ಇಡೀ ಜಗತ್ತಿಗೆ ಮಾದರಿಯಾದ ಮಹಾಪುರುಷರು. ಡಾ.ಬಾಬಾ ಸಾಹೇಬರು ಜ್ಞಾನದ ಭಂಡಾರವಾಗಿ ಜ್ಞಾನಸೂರ್ಯರಾದರು.

ಅವರೊಬ್ಬ ಗ್ರಂಥಾಲಯವಾಗಿದ್ದರು ಎಂಬುದಕ್ಕೆ ಅವರ ಬರಹ ಹಾಗೂ ಭಾಷಣಗಳೆ ಸಾಕ್ಷಿಯಾಗಿವೆ. ಅತ್ಯಂತ ಕೆಳಸ್ತರದಿಂದ ಬಂದoತಹ ಅವರು ಸಾಧಿಸಿದ ಉತ್ತುಂಗ ಶಿಖರ ಎಲ್ಲರಿಗೂ ಹೆಮ್ಮೆ ಹಾಗೂ ಅಭಿಮಾನದ ಸಂಗತಿಯಾಗಿದೆ ಎಂದರು.


ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶಾಂತಲಿAಗ ಸಾವಳಗಿಯವರು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್‌ರವರು ಭಾರತ ದೇಶಕ್ಕೆ ಒಂದು ಅಮೂಲ್ಯ ವರದಾನ. ಬೃಹತ್ ಪ್ರಜಾಪ್ರಭುತ್ವದ ಆಡಳಿತವು ಸುಸೂತ್ರವಾಗಿ ನಡೆದಿರುವುದು ಡಾ.ಬಾಬಾಸಾಹೇಬರು ನೀಡಿದ ಸಂವಿಧಾನದಿAದ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರರವರು ಮಾತನಾಡುತ್ತ ದೀನ, ದುರ್ಬಲರಿಗೆ ಸ್ವಾತಂತ್ರö್ಯ ಹಾಗೂ ಸಮಾನತೆ ದೊರೆತದ್ದು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ರವರು ನೀಡಿರುವ ಸಂವಿಧಾನದಿoದ. ಅವರ ಸಂವಿಧಾನದಿAದಾಗಿ ನಮಗೆ ಶಿಕ್ಷಣ, ಸಮಾನತೆ, ಅಭಿವ್ಯಕ್ತಿ, ಮತದಾನ ಮುಂತಾದ ಹಕ್ಕುಗಳು ನಮಗೆ ದೊರೆತಿವೆ. ಅವರ ಆಶಯದಂತೆ ನಮಗೆ ಹಕ್ಕು ಪಡೆಯುವಂತೆ ಜವಾಬ್ದಾರಿಗಳೂ ಸಹ ಇರುತ್ತವೆ ಎಂಬುದನ್ನು ಮರೆಯಬಾರದು ಎಂದರು


ಪ್ರಸ್ತಾವಿಕ ಮಾತನಾಡಿದ ಬೀದರ ವಿಶ್ವವಿದ್ಯಾಲಯದ ಕುಲಸಚಿವರು ಆಡಳಿತ ಸುರೇಖಾ ಕೆ.ಎ.ಎಸ್. ಡಾ.ಬಾಬಾಸಾಹೇಬರವರಂತಹ ಅಪ್ರತಿಮ ಜ್ಞಾನಿಯನ್ನು ಜಗತ್ತಿಗೆ ನೀಡಿದ ಭಾರತ ದೇಶ ನಿಜವಾಗಿಯೂ ಧನ್ಯವಾಗಿದೆ. ಅವರ ಪರಿಶ್ರಮ, ಪ್ರತಿಭೆ, ಹೋರಾಟದ ಜೀವನ ಆದರ್ಶಮಯವಾಗಿದೆ. ವಿಧ್ಯಾರ್ಥಿಗಳು ಅವರ ಸತತ ಪ್ರಯತ್ನ ಹಾಗೂ ಕಠಿಣ ಪರಿಶ್ರಮದo ಅಧ್ಯಯನವನ್ನು ಇಂದಿನ ಯುವಕರು ಪಾಲಿಸಬೇಕಾಗಿದೆ ಎಂದರು.


ಕಾರ್ಯಕ್ರಮಕ್ಕೂ ಮೊದಲು ಬೀದರ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಆಡಳಿತವರ್ಗ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಆಣದೂರವರೆಗೆ ಪಾದಯಾತ್ರೆ ಕೈಗೊಂಡು ಅಲ್ಲಿನ ಡಾ.ಅಂಬೇಡ್ಕರ್ ಪ್ರತಿಮೆಗೆ ಪೂಜೆ ಸಲ್ಲಿಸಿ ಪ್ರತಿಮೆಯ ಮುಂಭಾಗದಲ್ಲಿ ಸಂವಿಧಾನದ ಪೀಠಿಕೆಯನ್ನು ಪಠಿಸಿದರು. ನಂತರ ಡಾ.ಅಂಬೇಡ್ಕರ್‌ರವರ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ಪರ್ಧೆಗಳ ವಿಜೇತರಿಗೆ ವೇದಿಕೆಯ ಗಣ್ಯರು ಬಹುಮಾನಗಳನ್ನು ವಿತರಿಸಿದರು.


ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶಿವನಾಥ ಎಂ.ಪಾಟೀಲ, ಕು.ವೈಷ್ಣವಿ ಪಾಟೀಲ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯ್ಕ.ಟಿ. ವಿಶೇಷಾಧಿಕಾರಿಗಳಾದ ಡಾ.ರವೀಂದ್ರನಾಥ.ವಿ.ಗಬಾಡಿ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪಾಲ್ಗೊಂಡಿದ್ದರು.

prajaprabhat

Recent Posts

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸುಲಭದಲ್ಲಿ ಕೈಗೆಟಕುತ್ತಿದೆ ಉನ್ನತ ಶಿಕ್ಷಣ

ವಿಜಯಪುರ.10.ಜೂನ್.25:-ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮಹಿಳಾ ಸಬಲೀಕರಣಕ್ಕಾಗಿ ಹತ್ತು ಹಲವು ವಿನೂತನ ಮಹಿಳೆಯರಿಗೆ ಉನ್ನತ ಶಿಕ್ಷಣದ ಅವಕಾಶಗಳ ಹೆಬ್ಬಾಗಿಲನ್ನು ತೆರೆದಿರುವ  ಶೈಕ್ಷಣಿಕ…

22 minutes ago

SSC 14,582 ಹುದ್ದೆಗಳಿಗೆ ಅರ್ಜಿ ಆಹ್ವಾನ

ಜೂನ್ 9 ರಂದು 14,582 ಹುದ್ದೆಗಳಿಗೆ SSC CGL 2025 ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು…

2 hours ago

2000 ವರ್ಷಗಳ ಹಿಂದೆ ಬೌದ್ಧಧರ್ಮದ ಆಗಮನವನ್ನು ಗುರುತಿಸುವ ಪೋಸನ್ ಪೋಯವನ್ನು ಶ್ರೀಲಂಕಾ ಆಚರಿಸುತ್ತಿದೆ.

ಶ್ರೀಲಂಕಾ ಇಂದು ಪವಿತ್ರ ಪೋಸನ್ ಪೋಯ ಹಬ್ಬವನ್ನು ಆಚರಿಸುತ್ತಿದೆ, ಇದು 2,000 ವರ್ಷಗಳ ಹಿಂದೆ ಬೌದ್ಧಧರ್ಮದ ಐತಿಹಾಸಿಕ ಆಗಮನವನ್ನು ಸೂಚಿಸುತ್ತದೆ.…

2 hours ago

ದಕ್ಷಿಣ ಭಾರತದಲ್ಲಿ ಭಾರೀ ಮಳೆ, ಪೂರ್ವ-ಮಧ್ಯ ಭಾರತದಾದ್ಯಂತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ: ಐಎಂಡಿ ಮುನ್ಸೂಚನೆ

ಹೊಸ ದೆಹಲಿ.10.ಜೂನ್.25:- ಕರಾವಳಿ ಕರ್ನಾಟಕ ಮತ್ತು ಕರ್ನಾಟಕದ ಒಳನಾಡು, ಕೇರಳ, ಮಾಹೆ, ಒಡಿಶಾ, ರಾಯಲಸೀಮಾ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್…

3 hours ago

ಹಣಕಾಸು ಸಚಿವ ಸೀತಾರಾಮನ್ ಅಧ್ಯಕ್ಷತೆಯಲ್ಲಿ 6ನೇ NIIF ಜಿಸಿ ಸಭೆ.

ಹೊಸ ದೆಹಲಿ.10.ಜೂನ್.25:- ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ…

3 hours ago

ಭಾರತೀಯ ಯುವಕರು ಉದ್ಯೋಗಾಕಾಂಕ್ಷಿಗಳಿಂದ ಉದ್ಯೋಗ ಸೃಷ್ಟಿಕರ್ತರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ, ಐಐಟಿಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ: ಲೋಕಸಭಾ ಸ್ಪೀಕರ್

ಹೊಸ ದೆಹಲಿ.10.ಜೂನ್.25:- ಭಾರತವು ತನ್ನ ಯುವ ಪ್ರತಿಭೆ ಮತ್ತು ತಾಂತ್ರಿಕ ನಾವೀನ್ಯತೆಗಳ ಬಲದ ಮೂಲಕ ಸಮಕಾಲೀನ ಸವಾಲುಗಳನ್ನು ಎದುರಿಸುವಲ್ಲಿ ಜಾಗತಿಕ…

4 hours ago