ಚೀನಾದಲ್ಲ ಹೊಸ ವೈರಸ್ ಪತ್ತೆ : ಹೊಸ ತಳಿಗೆ ‘HKU-5-Cov-2’ ಎಂದು ನಾಮಕರಣ.!

ಹೊಸ ದೆಹಲಿ.22.ಫೆ.25:- ಕೊರೊನ ಹೊಡೆತದಿಂದ ಈಗಾಗಲೇ ಇಡೀ ಜಗತ್ತೇ ತತ್ತರಿಸಿ ಹೋಗಿದ್ದು, ಇನ್ನು ಹಲವು ದೇಶಗಳು ಆರ್ಥಿಕವಾಗಿ ಮೇಲೆ ಏಳಲು ಹರಸಾಹಸ ಪಡುತ್ತಿವೆ.

ಐದು ವರ್ಷಗಳ ಹಿಂದೆ ಚೀನಾದಲ್ಲಿ ಕಂಡುಬಂದಿದ್ದ ಕೊರೊನಾ ವೈರಸ್ ಮಹಾಮಾರಿಯಿಂದ ಜಗತ್ತಿನಾದ್ಯಂತ ಕೋಟ್ಯಂತರ ಜನ ಜೀವ ಕಳೆದುಕೊಂಡರು, ಬದುಕುಳಿದವರ ಜೀವನದ ದಿಕ್ಕೆ ಬದಲಾಗಿ ಹೋಯ್ತು. ಜನರ ಜೀವ ಹಾಗೂ ಜೀವನದೊಂದಿಗೆ ಚೆಲ್ಲಾಟವಾಡಿದ ಕೊರೊನಾ ಭೀತಿಯಿಂದ ಜಗತ್ತು ಹೊರಬರುತ್ತಿರುವ ಸಂದರ್ಭದಲ್ಲಿಯೇ ಇದೀಗ ಮತ್ತೊಂದು ಆತಂಕಕಾರಿ ಸುದ್ದಿ ಚೀನಾದಿಂದ ಬಂದಿದೆ.

ಮತ್ತೊಂದು ಮಹಾಮಾರಿ ವೈರಸ್ ಅಲ್ಲಿ ಕಾಣಿಸಿಕೊಂಡಿದ್ದು, ಜಗತ್ತಿನಾದ್ಯಂತ ಬೇರೆ ಬೇರೆ ರಾಷ್ಟ್ರಗಳು ಅಲರ್ಟ್ ಆಗಿವೆ. ಚೀನಾ ನೆರೆಯ ರಾಷ್ಟ್ರವಾಗಿರುವುದರಿಂದ ಭಾರತವೂ ಕೂಡ ಸೂಕ್ಷ್ಮವಾಗಿ ಚೀನಾದಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ.ಕೋವಿಡ್ -19 ಕಾಯಿಲೆಗೆ ಕಾರಣವಾಗುವ ವೈರಸ್ ಸಾರ್ಸ್-ಕೋವ್-2 ಗೆ ಹೋಲುವ ಮತ್ತೊಂದು ವೈರಸ್’ನ್ನ ಚೀನಾ ಕಂಡು ಹಿಡಿದಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಕಾರಣವೆಂದು ಶಂಕಿಸಲಾದ ಸಂಶೋಧನೆಗೆ ಕುಖ್ಯಾತರಾಗಿರುವ ಚೀನಾದ ವಿಜ್ಞಾನಿ ಶಿ ಜೆಂಗ್ಲಿ ಅಧ್ಯಯನದ ನೇತೃತ್ವ ವಹಿಸಿದ್ದಾರೆ. ಇದರ ಮಧ್ಯ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದ್ದು, ಇದು ಬಾವಲಿಗಳ ಮೂಲಕ ಮಾನವನ ದೇಹವನ್ನು ಪ್ರವೇಶಿಸುತ್ತದೆ ಎಂದು ತಿಳಿದು ಬಂದಿದೆ. ಈ ಒಂದು ಹೊಸ ವೈರಸ್‌ಗೆ ಚೀನಾ ರಾಷ್ಟ್ರದ ವಿಜ್ಞಾನಿಗಳು HKU-5-Cov-2 ಎಂದು ನಾಮಕರಣ ಮಾಡಿದ್ದಾರೆ.

ಹೌದು ಚೀನಾದಲ್ಲಿ ಮತ್ತೊಂದು ಅಪಾಯಕಾರಿ ವೈರಸ್ ಪತ್ತೆಯಾಗಿದೆ. ಬಾವಲಿ ಮೂಲಕ ಮಾನವನ ದೇಹ ಹೊಕ್ಕಿರುವ ಹೊಸ ಬಗೆಯ ವೈರಸ್ ಇದಾಗಿದ್ದು, ಹೊಸ ವೈರಸ್‌ಗೆ HKU-5-Cov-2 ಎಂದು ನಾಮಕರಣ ಮಾಡಲಾಗಿದೆ. ಮಾನವನ ಜೀವಕೋಶದ ಪ್ರೋಟೀನ್ ಗಳನ್ನು ಈ ಒಂದು ವೈರಸ್ ಹಾನಿ ಮಾಡುತ್ತದೆ.

ಒಬ್ಬರಿಂದ ಮತ್ತೊಬ್ಬರಿಗೆ ಗಾಳಿಯ ಮೂಲಕ ರೋಗ ಹರಡುವ ವೈರಸ್ ಆಗಿದ್ದು, ಕೊರೊನ ವೈರಸ್ ನಿಂದ ರೋಗನಿರೋಧಕ ಶಕ್ತಿ ಸೃಷ್ಟಿಯಾಗಿದೆ. ಹೊಸ ವೈರಸ್ ಹೆಚ್ಚು ಪರಿಣಾಮ ಬೀರಲ್ಲ ಎಂದು ಚೀನಾದ ಸಂಶೋಧಕರು ತಿಳಿಸಿದ್ದಾರೆ.

ಈ ವಾರ ಸೆಲ್ ಜರ್ನಲ್’ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಶಿ ಮತ್ತು ಅವರ ಸಹ ಸಂಶೋಧಕರು ಎಚ್ಕೆಯು 5 ಕರೋನವೈರಸ್’ಗೆ ಸಂಬಂಧಿಸಿದ ಹೊಸ ವೈರಸ್ ಕಂಡುಹಿಡಿದಿದ್ದಾರೆ, ಅದು ಜೀವಿಗಳಿಗೆ ಸೋಂಕು ತಗುಲಿಸಲು ಎಸಿಇ 2 ಗ್ರಾಹಕವನ್ನ ಬಳಸುತ್ತದೆ.

ಸಾರ್ಸ್-ಕೋವ್-2 ಸೋಂಕಿಗೆ ಎಸಿಇ 2 ರಿಸೆಪ್ಟರ್ ಸಹ ಬಳಸುತ್ತದೆ.ಎಚ್ಕೆಯು 5-ಕೋವ್-2 ಎಂದು ಕರೆಯಲ್ಪಡುವ ಹೊಸ ವೈರಸ್ “ನೇರ ಪ್ರಸರಣದ ಮೂಲಕ ಅಥವಾ ಮಧ್ಯಂತರ ಆತಿಥೇಯರಿಂದ ಅನುಕೂಲಕರವಾದ ಮಾನವರಿಗೆ ಹರಡುವ ಹೆಚ್ಚಿನ ಅಪಾಯವನ್ನು ಹೊಂದಿದೆ” ಎಂದು ಶಿ ಮತ್ತು ಇತರರು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ.

ಕಾರೋಣ ವೈರಸ್ ಬದಲಾಗಿ ಹೊಸ ವೈರಸ್‌ಗೆ ಚೀನಾ ರಾಷ್ಟ್ರದ ವಿಜ್ಞಾನಿಗಳು HKU-5-Cov-2 ಈವತೆ ನಾಮಕರಣ ಮಾಡಿದ್ದಾರೆ.

prajaprabhat

Recent Posts

ದೆಹಲಿ ಸಿಎಂ ರೇಖಾ ಗುಪ್ತಾ ಅವರು ‘ಏಕ್ ಪೆಡ್ ಮಾ ಕೆ ನಾಮ್ 2.0’ ಬಿಡುಗಡೆ ಮಾಡಿದರು

ಹೊಸ ದೆಹಲಿ.09.ಜೂನ್.25:- ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ನಗರದ ಪರಿಸರವನ್ನು ಸುಧಾರಿಸಲು ಈ ಋತುವಿನಲ್ಲಿ 70 ಲಕ್ಷ ಮರಗಳನ್ನು…

2 hours ago

ಬೀದರ: ಪತ್ರಿಕಾ ಗೋಷ್ಟಿಗೆ ಅವ್ಹಾನ

ಬೀದರ.09.ಜೂನೆ.25:- ನಾಳೆ ದಿನಾಂಕ 10. ಜೂನ್ ಬೆಳಿಗ್ಗೆ 10.00 ಗಂಟೆಗೆ ಪತ್ರಿಕಾ ಗೋಷ್ಟಿಗೆ ಅವ್ಹಾನ ನಾಳೆ(10/06/2025) ಮಂಗಳವಾರ ಬೆಳಿಗ್ಗೆ 10.00…

2 hours ago

೨೧ ದಿನಗಳ ಕ್ರೀಡಾ ತರಬೇತಿ ಸಂಪನ್ನ, ಪ್ರಮಾಣ ಪತ್ರ ವಿತರಣೆ<br>

ಬೀದರ.09.ಜೂನ್.25:- ಕ್ರೀಡಾ ತರಬೇತಿ ಸಂಪನ್ನ, ಪ್ರಮಾಣ ಪತ್ರ ವಿತರಣೆ ಕ್ರೀಡೆಗಳಿಂದ ದೈಹಿಕ, ಬೌದ್ಧಿಕ ಬೆಳವಣಿಗೆಯಾಗುತ್ತದೆ - ರಾಜಶೇಖರ ಜವಳೆ ಕ್ರೀಡೆಗಳಿಂದ…

3 hours ago

ಆಧುನಿಕ ಕೋಳಿ ಸಾಕಾಣಿಕೆ ತರಬೇತಿಗಾಗಿ ಅರ್ಜಿ ಆಹ್ವಾನ

ಬೀದರ.09.ಜೂನ್.25:- ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಬೀದರ, ಕೇಂದ್ರ ಗ್ರಂಥಾಲಯ ಹಿಂಭಾಗ ಜನವಾಡ ರಸ್ತೆ, ಬೀದರನಲ್ಲಿ ಎರಡು ದಿವಸ…

3 hours ago

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

ಬೀದರ.09.ಜೂನ್.25:- ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಬೆಸ್ತ, ಅಂಬಿಗ/ಅAಬಿ, ಗಂಗಾಮತ, ಕಬ್ಬಲಿಗೆ, ಕೋಲಿ, ಮತ್ತು ಇದರ ಉಪಜಾತಿಗಳ ಅಭಿವೃದ್ಧಿಗಾಗಿ…

3 hours ago

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

ಬೀದರ.09.ಜೂನ್.25:- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ…

3 hours ago