ಚಾಮರಾಜನಗರ ದಲಿತರ ಹುಲಿ, ಅಪ್ಪಟ ಅಂಬೇಡ್ಕರ್ ವಾದಿ ಎಸ್ ನಂಜುಂಡಸ್ವಾಮಿ ಇನ್ನಿಲ್ಲ.

ಚಾಮರಾಜನಗರ.31.ಮಾರ್ಚ್.25:-ಎಸ್ ನಂಜುಂಡಸ್ವಾಮಿರವರು ನಗರದ ಕುದುರೆ ಸಿದ್ದಯ್ಯ ಶ್ರೀಮತಿ ದೇವಮ್ಮರವರ   ಮಗನಾಗಿ 14-4-1945 ರಂದು ಜನಿಸಿದರು.

ಚಾಮರಾಜನಗರ, ನಗರ ಸಭೆಗೆ ಹೆಚ್ಚು ಬಾರಿ  ಆಯ್ಕೆಯಾಗಿ ಎರಡು ಬಾರಿ ಅಧ್ಯಕ್ಷರಾಗಿ ಅನೇಕ ಜನಪರ ಕಾರ್ಯನಿರ್ವಹಿಸುವುದರ ಜೊತೆಗೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ದಲಿತ ರಾಜಕಾರಣಿಯಾಗಿದ್ದರು.



ಚಾಮರಾಜನಗರ ತಾಲ್ಲೂಕು ಆದಿ ಕರ್ನಾಟಕ ಸಂಘದ ಅಧ್ಯಕ್ಷರು ಕೂಡ ಆಗಿದ್ದರು

ರಾಜ್ಯದ ರಾಜಕೀಯ ನಾಯಕರಾದ ಸಿದ್ದರಾಮಯ್ಯ, ಎಚ್ ಸಿ ಮಹದೇವಪ್ಪ,ಬೆಂಕಿ ಮಹದೇವಪ್ಪ,  ಯಡಿಯೂರಪ್ಪ  , ಎಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್,  ಜೊತೆಗೆ ಹಾಗೂ ಕೇಂದ್ರದ ರಾಜಕೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ರವರ ಜೊತೆಗೆ ರಾಜಕೀಯ ಒಡನಾಟ ಹೊಂದಿ ರಾಜಕೀಯ ಧುರೀಣರಾಗಿದ್ದರು. ದಿವಂಗತ ರಾದ ಬಿ ರಾಚಯ್ಯ, ರಾಜುಗೌಡ, ನಾಗಪ್ಪ
ಶ್ರೀನಿವಾಸ್ ಪ್ರಸಾದ್, ಆರ್ ಧ್ರುವನಾರಾಯಣ್, ಎಸ್ ಜಯಣ್ಣ ರವರ ಜೊತೆಗೂ ಕೂಡ ಉತ್ತಮ‌


ಕುದುರೆ ಸಿದ್ದಯ್ಯನವರ ಕುಟುಂಬವೆಂದರೆ ಜಿಲ್ಲೆಯ ದಲಿತರಿರಲ್ಲಿ ಒಳ್ಳೆಯ ಭಾವನೆವಿದೆ ದಾನ ಧರ್ಮ, ಅನ್ನದಾನ, ದಲಿತ ಸಮುದಾಯದಲ್ಲಿ ಏನೇ ಸಮಸ್ಯೆವಿದ್ದರು  ಶಾಂತಿಯುತವಾಗಿ ನ್ಯಾಯ ದೊರಕಿಸುವ ಕಾರ್ಯದಲ್ಲಿ ಮುಂದಾಗಿದ್ದರು. ಅದಲ್ಲದೇ ದಲಿತರು ಮತ್ತು ಬೇರೆ ಸಮುದಾಯ ನಡುವೆ ಮನಸ್ತಾಪಗಳಿದ್ದರೆ ಈ ಕುಟುಂಬದ ಮರಣ್ಣ ಮತ್ತು ಎಸ್ ನಂಜುಂಡಯ್ಯನವರು ಬಗೆಹರಿಸುತ್ತಿದ್ದರು.ಇದು ಈ  ಮನೆತನದ  ಪರಂಪರೆಯಾಗಿದೆ.

ಎಸ್ ನಂಜುಂಡಸ್ವಾಮಿ ಅಂದರೆ ಚಾಮರಾಜನಗರ ಜಿಲ್ಲೆಯ ದಲಿತ ಜನಾಂಗದ ದೊಡ್ಡ ನಾಯಕರು ಅಪ್ಪಟ ಅಂಬೇಡ್ಕರ್ ವಾದಿಗಳು, ಬುದ್ದ ಬಸವ ಅಂಬೇಡ್ಕರ್ ತತ್ವವನ್ನು ಅಳವಡಿಸಿಕೊಂಡು ಮುಂದೆ ಬಂದರು.
ಶೋಷಿತರ ಪರ ಸದಾ ಹೋರಾಟದಲ್ಲಿ ತೊಡಗಿದರು.
ಇವರ ಕಾಲದಲ್ಲಿಯೇ ಚಾಮರಾಜನಗರ ದಲ್ಲಿ ಬುದ್ದ ಧ್ಯಾನ ಮಂದಿರ ಸ್ಥಾಪನೆಯಾಯಿತು ಹಾಗೂ ಇವರ ಮನೆಯ ಮುಂದೆಯೇ ಬೃಹತ್ ಆಕಾರದಲ್ಲಿ ಬುದ್ದನ ಪ್ರತಿಮೆಯನ್ನು ಸ್ಥಾಪಿಸಿಕೊಂಡಿದ್ದಾರೆ.
ಇಡೀ ಚಾಮರಾಜನಗರದಲ್ಲಿ ಜಿಲ್ಲೆಯಲ್ಲಿ ಅಪಾರ ಅಭಿಮಾನವಿದೆ.
ಇವರಿಗೆ ತಿರುಗಿ ಮಾತನಾಡುವವರು ಯಾರು? ಇರಲಿಲ್ಲ.

ಚಾಮರಾಜನಗರದ  ಸಂತೇ ಮರಳ್ಳಿ ಸರ್ಕಲ್ , ಪಚ್ಚಪ್ಪ ಸರ್ಕಲ್, ಬಿ ರಾಚಯ್ಯ ಜೋಡಿ ರಸ್ತೆಯ ಅಗಲಿಕರಣದಲ್ಲಿ ಕಟ್ಟಡ ಮಾಲೀಕರು ಅಗಲೀಕರಣಮಾಡುವುದಕ್ಕೆ ಅಡ್ಡಿ ಪಡಿಸುತ್ತಿದ್ದಾಗ ಸರಕಾರಿ ಅಧಿಕಾರಿಗಳ ಜೊತೆಗೆ ನಿಂತು ಸಮಸ್ಯೆ ಬಗೆಹರಿಸಿದರು.
ರಸ್ತೆ ಬದಿಯಲ್ಲಿದ್ದ ತಮ್ಮ ಸ್ವಂತ ವಾಣಿಜ್ಯ ಕಟ್ಟಡವನ್ನು ತಾವೇ ನಿಂತು ಹೊಡಿಸಿ ರಸ್ತೆ ಅಗಲೀಕರಣಕ್ಕೆ ಸಹಕಾರ ಮಾಡಿದರು.

ಕೊನೆಯ ದಿನಗಳಲ್ಲಿ ಕೆಲ ರಾಜಕಾರಣಿಗಳಿಂದ ಮನನೊಂದರು.

ಶೈಕ್ಷಣಿಕ ಸಾಧನೆ:
2002 ರಲ್ಲಿ ನಂಜುಂಡಸ್ವಾಮಿ ರವರು ಜಿಲ್ಲಾ ಕೋರ್ಟ್ ಹಿಂಭಾಗ  ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ಅವಕಾಶ ಮಾಡಿಕೊಟ್ಟರು.
ಅಪಾರ ಜನ ಬಳಗವನ್ನು ಹೊಂದಿರುವ ಎಸ್ ನಂಜುಂಡಸ್ವಾಮಿರವರು ದಿನಾಂಕ 31 -03-2025 ರಂದು ಅನಾರೋಗ್ಯದಿಂದ ಸಾವನ್ನಪ್ಪಿದರು.

ಒಬ್ಬ ಅಪ್ಪಟ ಅಂಬೇಡ್ಕರ್ ವಾದಿ ಹಾಗೂ ದಲಿತರ ಸಮಸ್ಯೆಗಳನ್ನು ಹುಲಿಯಂತೆ ಘರ್ಜಿಸಿ ಬಗೆಹರಿಸುತ್ತಿದ್ದರು.

ಪತ್ರಕರ್ತ ಜೆ.ಪ್ರಸನ್ನಕುಮಾರ್ ಕೆಸ್ತೂರು…..

prajaprabhat

Recent Posts

ಬೀದರ್‌’ನಲ್ಲಿ ಮೀನು ನುಂಗಿ ರೋಗ ಗುಣಮುಖ ವಿಶಿಷ್ಟ ಆಚರಣೆ

ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…

1 hour ago

ಉತ್ತರಾಖಂಡದಲ್ಲಿ ಸೇನಾ ಸನ್ನದ್ಧತೆಯನ್ನು ಪರಿಶೀಲಿಸಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಐಬೆಕ್ಸ್ ತರಾನಾ 88.4 ಎಫ್‌ಎಂ ಅನ್ನು ಉದ್ಘಾಟಿಸಿದರು.

ಉತ್ತರಾಖಂಡದ ಗರ್ವಾಲ್‌ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…

4 hours ago

ಮಿಥಿ ನದಿ ಹೂಳೆತ್ತುವ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ದಾಳಿ ನಡೆಸಿದೆ.

ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…

4 hours ago

ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಉತ್ತರ ರೈಲ್ವೆ ಪ್ರಾರಂಭಿಸಿದೆ

ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…

4 hours ago

ಭೂಕುಸಿತದಿಂದ ಹಾನಿಗೊಳಗಾದ ಚಾಟೆನ್‌ನಿಂದ ಸಿಕ್ಕಿಬಿದ್ದ ಸ್ಥಳೀಯರು ಮತ್ತು ಟ್ಯಾಕ್ಸಿ ಚಾಲಕರನ್ನು ಸಿಕ್ಕಿಂ ಸರ್ಕಾರ ವಿಶೇಷ ಹೆಲಿಕಾಪ್ಟರ್ ಮೂಲಕ ರಕ್ಷಿಸಿದೆ

ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್‌ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…

4 hours ago

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಣೆ; ಪ್ರತ್ಯೇಕ ಸ್ಥಳಗಳಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯನ್ನು ಐಎಂಡಿ ಮುನ್ಸೂಚನೆ ನೀಡಿದೆ.

ಸಿಕ್ಕಿಂ ಸರ್ಕಾರವು ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ ಸಿಲುಕಿರುವ ಸ್ಥಳೀಯರು, ಪ್ರವಾಸಿ ಟ್ಯಾಕ್ಸಿ ಚಾಲಕರು ಮತ್ತು ಕೆಲವು ಸರ್ಕಾರಿ ಅಧಿಕಾರಿಗಳನ್ನು ವಾಯು…

4 hours ago