ಚಾಮರಾಜನಗರ ದಲಿತರ ಹುಲಿ, ಅಪ್ಪಟ ಅಂಬೇಡ್ಕರ್ ವಾದಿ ಎಸ್ ನಂಜುಂಡಸ್ವಾಮಿ ಇನ್ನಿಲ್ಲ.

ಚಾಮರಾಜನಗರ.31.ಮಾರ್ಚ್.25:-ಎಸ್ ನಂಜುಂಡಸ್ವಾಮಿರವರು ನಗರದ ಕುದುರೆ ಸಿದ್ದಯ್ಯ ಶ್ರೀಮತಿ ದೇವಮ್ಮರವರ   ಮಗನಾಗಿ 14-4-1945 ರಂದು ಜನಿಸಿದರು.

ಚಾಮರಾಜನಗರ, ನಗರ ಸಭೆಗೆ ಹೆಚ್ಚು ಬಾರಿ  ಆಯ್ಕೆಯಾಗಿ ಎರಡು ಬಾರಿ ಅಧ್ಯಕ್ಷರಾಗಿ ಅನೇಕ ಜನಪರ ಕಾರ್ಯನಿರ್ವಹಿಸುವುದರ ಜೊತೆಗೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ದಲಿತ ರಾಜಕಾರಣಿಯಾಗಿದ್ದರು.



ಚಾಮರಾಜನಗರ ತಾಲ್ಲೂಕು ಆದಿ ಕರ್ನಾಟಕ ಸಂಘದ ಅಧ್ಯಕ್ಷರು ಕೂಡ ಆಗಿದ್ದರು

ರಾಜ್ಯದ ರಾಜಕೀಯ ನಾಯಕರಾದ ಸಿದ್ದರಾಮಯ್ಯ, ಎಚ್ ಸಿ ಮಹದೇವಪ್ಪ,ಬೆಂಕಿ ಮಹದೇವಪ್ಪ,  ಯಡಿಯೂರಪ್ಪ  , ಎಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್,  ಜೊತೆಗೆ ಹಾಗೂ ಕೇಂದ್ರದ ರಾಜಕೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ರವರ ಜೊತೆಗೆ ರಾಜಕೀಯ ಒಡನಾಟ ಹೊಂದಿ ರಾಜಕೀಯ ಧುರೀಣರಾಗಿದ್ದರು. ದಿವಂಗತ ರಾದ ಬಿ ರಾಚಯ್ಯ, ರಾಜುಗೌಡ, ನಾಗಪ್ಪ
ಶ್ರೀನಿವಾಸ್ ಪ್ರಸಾದ್, ಆರ್ ಧ್ರುವನಾರಾಯಣ್, ಎಸ್ ಜಯಣ್ಣ ರವರ ಜೊತೆಗೂ ಕೂಡ ಉತ್ತಮ‌


ಕುದುರೆ ಸಿದ್ದಯ್ಯನವರ ಕುಟುಂಬವೆಂದರೆ ಜಿಲ್ಲೆಯ ದಲಿತರಿರಲ್ಲಿ ಒಳ್ಳೆಯ ಭಾವನೆವಿದೆ ದಾನ ಧರ್ಮ, ಅನ್ನದಾನ, ದಲಿತ ಸಮುದಾಯದಲ್ಲಿ ಏನೇ ಸಮಸ್ಯೆವಿದ್ದರು  ಶಾಂತಿಯುತವಾಗಿ ನ್ಯಾಯ ದೊರಕಿಸುವ ಕಾರ್ಯದಲ್ಲಿ ಮುಂದಾಗಿದ್ದರು. ಅದಲ್ಲದೇ ದಲಿತರು ಮತ್ತು ಬೇರೆ ಸಮುದಾಯ ನಡುವೆ ಮನಸ್ತಾಪಗಳಿದ್ದರೆ ಈ ಕುಟುಂಬದ ಮರಣ್ಣ ಮತ್ತು ಎಸ್ ನಂಜುಂಡಯ್ಯನವರು ಬಗೆಹರಿಸುತ್ತಿದ್ದರು.ಇದು ಈ  ಮನೆತನದ  ಪರಂಪರೆಯಾಗಿದೆ.

ಎಸ್ ನಂಜುಂಡಸ್ವಾಮಿ ಅಂದರೆ ಚಾಮರಾಜನಗರ ಜಿಲ್ಲೆಯ ದಲಿತ ಜನಾಂಗದ ದೊಡ್ಡ ನಾಯಕರು ಅಪ್ಪಟ ಅಂಬೇಡ್ಕರ್ ವಾದಿಗಳು, ಬುದ್ದ ಬಸವ ಅಂಬೇಡ್ಕರ್ ತತ್ವವನ್ನು ಅಳವಡಿಸಿಕೊಂಡು ಮುಂದೆ ಬಂದರು.
ಶೋಷಿತರ ಪರ ಸದಾ ಹೋರಾಟದಲ್ಲಿ ತೊಡಗಿದರು.
ಇವರ ಕಾಲದಲ್ಲಿಯೇ ಚಾಮರಾಜನಗರ ದಲ್ಲಿ ಬುದ್ದ ಧ್ಯಾನ ಮಂದಿರ ಸ್ಥಾಪನೆಯಾಯಿತು ಹಾಗೂ ಇವರ ಮನೆಯ ಮುಂದೆಯೇ ಬೃಹತ್ ಆಕಾರದಲ್ಲಿ ಬುದ್ದನ ಪ್ರತಿಮೆಯನ್ನು ಸ್ಥಾಪಿಸಿಕೊಂಡಿದ್ದಾರೆ.
ಇಡೀ ಚಾಮರಾಜನಗರದಲ್ಲಿ ಜಿಲ್ಲೆಯಲ್ಲಿ ಅಪಾರ ಅಭಿಮಾನವಿದೆ.
ಇವರಿಗೆ ತಿರುಗಿ ಮಾತನಾಡುವವರು ಯಾರು? ಇರಲಿಲ್ಲ.

ಚಾಮರಾಜನಗರದ  ಸಂತೇ ಮರಳ್ಳಿ ಸರ್ಕಲ್ , ಪಚ್ಚಪ್ಪ ಸರ್ಕಲ್, ಬಿ ರಾಚಯ್ಯ ಜೋಡಿ ರಸ್ತೆಯ ಅಗಲಿಕರಣದಲ್ಲಿ ಕಟ್ಟಡ ಮಾಲೀಕರು ಅಗಲೀಕರಣಮಾಡುವುದಕ್ಕೆ ಅಡ್ಡಿ ಪಡಿಸುತ್ತಿದ್ದಾಗ ಸರಕಾರಿ ಅಧಿಕಾರಿಗಳ ಜೊತೆಗೆ ನಿಂತು ಸಮಸ್ಯೆ ಬಗೆಹರಿಸಿದರು.
ರಸ್ತೆ ಬದಿಯಲ್ಲಿದ್ದ ತಮ್ಮ ಸ್ವಂತ ವಾಣಿಜ್ಯ ಕಟ್ಟಡವನ್ನು ತಾವೇ ನಿಂತು ಹೊಡಿಸಿ ರಸ್ತೆ ಅಗಲೀಕರಣಕ್ಕೆ ಸಹಕಾರ ಮಾಡಿದರು.

ಕೊನೆಯ ದಿನಗಳಲ್ಲಿ ಕೆಲ ರಾಜಕಾರಣಿಗಳಿಂದ ಮನನೊಂದರು.

ಶೈಕ್ಷಣಿಕ ಸಾಧನೆ:
2002 ರಲ್ಲಿ ನಂಜುಂಡಸ್ವಾಮಿ ರವರು ಜಿಲ್ಲಾ ಕೋರ್ಟ್ ಹಿಂಭಾಗ  ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ಅವಕಾಶ ಮಾಡಿಕೊಟ್ಟರು.
ಅಪಾರ ಜನ ಬಳಗವನ್ನು ಹೊಂದಿರುವ ಎಸ್ ನಂಜುಂಡಸ್ವಾಮಿರವರು ದಿನಾಂಕ 31 -03-2025 ರಂದು ಅನಾರೋಗ್ಯದಿಂದ ಸಾವನ್ನಪ್ಪಿದರು.

ಒಬ್ಬ ಅಪ್ಪಟ ಅಂಬೇಡ್ಕರ್ ವಾದಿ ಹಾಗೂ ದಲಿತರ ಸಮಸ್ಯೆಗಳನ್ನು ಹುಲಿಯಂತೆ ಘರ್ಜಿಸಿ ಬಗೆಹರಿಸುತ್ತಿದ್ದರು.

ಪತ್ರಕರ್ತ ಜೆ.ಪ್ರಸನ್ನಕುಮಾರ್ ಕೆಸ್ತೂರು…..

prajaprabhat

Recent Posts

ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ.

ಬೀದರ.02.ಆಗಸ್ಟ.25:- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿಗೆ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಯು.ಪಿ.ಎಸ್.ಸಿ ನಾಗರೀಕ ಸೇವೆ. ಕೆ.ಎ.ಎಸ್ ಗೆಜೆಟೆಡ್…

1 hour ago

ಪ್ರಜ್ವಲ್ ರೇವಣ್ಣ  ಅವರಿಗೆ ಜೀವಾವಧಿ ಶಿಕ್ಷೆ.

ಬೆಂಗಳೂರಿನ ವಿಶೇಷ ನ್ಯಾಯಾಲಯ ಬೆಂಗಳೂರು.02.ಆಗಸ್ಟ್.25:- ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಮತ್ತು ಅಮಾನತುಗೊಂಡ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರಿಗೆ…

6 hours ago

ಅರಿವು ಶೈಕ್ಷಣಿಕ ಸಾಲ ಯೋಜನೆಯುಡಿ ಅರ್ಜಿ ಆಹ್ವಾನ

ಬೀದರ.02.ಆಗಸ್ಟ್.25- ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ…

7 hours ago

ಆಗಸ್ಟ್.8 ರಿಂದ 25 ರವರೆಗೆ ಅಗ್ನಿವೀರ ನೇಮಕಾತಿ ರ‍್ಯಾಲಿ

ಬೀದರ.02. ಆಗಸ್ಟ್.25:- ಅಗ್ನಿವೀರ ನೇಮಕಾತಿ ರ‍್ಯಾಲಿಯು ರಾಯಚೂರಿನ ಕರ್ನಾಟಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್.8 ರಿಂದ 25 ರವರೆಗೆ…

7 hours ago

ರಾಜ್ಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ‘ವಿದ್ಯಾಸಿರಿ’ ವಿದ್ಯಾರ್ಥಿವೇತನ ಸೇರಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು.02.ಆಗಸ್ಟ್.25:- 2025-26 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ…

7 hours ago

ಅತಿಥಿ ಉಪನ್ಯಾಸಕರ  ಸಮಸ್ಯೆಗಳನ್ನು (ಕಾನೂನು ತಿದ್ದುಪಡಿ) ಸರಿಪಡಿಸಲು. ಡಾ. ಹನಮಂತ್ ಗೌಡ ಕಲ್ಮನಿ ಮನವಿ.

ಗದಗ.02.ಆಗಸ್ಟ್.25:- ಇಂದು..ಬೆಳಗ್ಗೆ ಹುಲಕೋಟಿ ಯಲ್ಲಿ. ಕಾನೂನು .ಶಾಸನ ರಚನೆ.ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಡಾ.ಎಚ್.ಕೆ.ಪಾಟೀಲ ಸರ್ ಅವರನ್ನು…

8 hours ago