ಚಾಮರಾಜನಗರ | ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಪದಾಧಿಕಾರಿಗಳಿಗೆ ತರಬೇತಿ.

ಚಾಮರಾಜನಗರ .21.ಮಾರ್ಚ.25:- ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಚಾಮರಾಜನಗರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ವಚ್ಛ ಭಾರತ್ ಮಿಷನ್ , ಜಲ ಜೀವನ್ ಮಿಷನ್ ವತಿಯಿಂದ ಶುಕ್ರವಾರ
ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಪದಾಧಿಕಾರಿಗಳಿಗೆ ತರಬೇತಿ
ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಗ್ರಾಮ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ ಮಾತನಾಡಿ.

ಪ್ರತಿಯೊಂದು ಗ್ರಾಮವೂ ನೈರ್ಮಲ್ಯದಿಂದ ಕೂಡಿರ ಬೇಕು .ಗ್ರಾಮಗಳು ಅಭಿವೃದ್ಧಿವೊಂದಿದರೆ ದೇಶ ಅಭಿವೃದ್ಧಿ ಹೊಂದುತ್ತದೆ ಎಂಬುವುದು ಮಹಾತ್ಮ ಗಾಂಧೀಜಿ ರವರ ಚಿಂತನೆಯಾಗಿದೆ.  ನಾವು ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳ ಜೊತೆಗೆ ಸ್ವಚ್ಚತೆ ಮತ್ತು ಉತ್ತಮ ಆರೋಗ್ಯ ನಿರ್ಮಾಣ ಮಾಡುವುದಕ್ಕೆ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕಾಗಿದೆ.

ಪ್ರತಿ ಗ್ರಾಮಪಂಚಾಯತಿಯಲ್ಲಿಯೂ ಗ್ರಾಮನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ಇದ್ದು ಈ ಸಮಿತಿಯು ನೀರು ಸರಬರಾಜು ಮತ್ತು ಸ್ವಚ್ಛತೆ ಯೋಜನೆಗಳ ಅನುಷ್ಠಾನದಲ್ಲಿ ಪಂಚಾಯತಿಗಳಿಗೆ ನೆರವಾಗುವ ಸಮಿತಿಯಾಗಿದೆ.

ಜಲಜೀವನ್ ಮಿಷನ್ ಯೋಜನೆಯಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿದೆ ಹಾಗೂ ನೀರು ಬಳಕೆಯಲ್ಲಿ ಜಾಗೃತಿ ಮುಖ್ಯವಾಗಿದೆ. ನಮ್ಮ ಕೆಸ್ತೂರು ಗ್ರಾಮಪಂಚಾಯತಿ ಬಯಲು ಮುಕ್ತವಾಗಿದೆ ಹಾಗೂ ಸ್ವಚ್ಚತೆಯಲ್ಲಿಯೂ ಕೂಡ ಬದಲಾವಣೆಯಾಗಿದೆ ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅನುಷ್ಠಾನ ಅಧಿಕಾರಿಯಾಗಿರುವ ರಂಗಸ್ವಾಮಿ ನಾಯಕ್ ರವರು ತರಬೇತಿ ನೀಡಿದರು. ಈ ಸಮಿತಿ ಸದಸ್ಯರು ಗ್ರಾಮಪಂಚಾಯತಿ ಸದಸ್ಯರಾಗಿರಬೇಕು, ಈ ಸಮಿತಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯದರ್ಶಿಗಳು, ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು ಸಮಿತಿಯಲ್ಲಿ ಪದಾಧಿಕಾರಿಗಳಾಗಿದ್ದಾರೆ.

ಕಾರ್ಯದರ್ಶಿಯಾಗಿ ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೇ ಆಗಿರಬೇಕು. ಈ ಸಮಿತಿಯ ಅಧಿಕಾರವಧಿ ರಚನೆಯಾದದಿನದಿಂದ ಮೂವತ್ತು ತಿಂಗಳವರೆಗೆ.

ಗರಿಷ್ಠ 10 ಮಂದಿ ಸದಸ್ಯರಿರಬೇಕು, 50% ಮಹಿಳೆಯರು ಇರಬೇಕು, ಶೇ% 20 ರಷ್ಟು ಎಸ್ಸಿ, ಎಸ್ಟಿ ಸದಸ್ಯರಿರಬೇಕು ಈ ಸಮಿತಿಯ ಉದ್ದೇಶ ನೀರು ಸರಬರಾಜು ವ್ಯವಸ್ಥೆ, ಗ್ರಾಮದ ಸ್ವಚ್ಚತೆ, ಗ್ರಾಮದ ನೈರ್ಮಲ್ಯೀಕರಣ, ಚರಂಡಿ ವ್ಯವಸ್ಥೆಯ ಜವಾಬ್ದಾರಿಯಾಗಿದೆ.

ಗ್ರಾಮದ ಪರಿಸರ ಸ್ವಚ್ಚತೆ, ಕುಡಿಯುವ ನೀರಿನ ಮಿತ ಬಳಕೆ ಹಾಗೂ ಜಾಗೃತಿ ಕುರಿತು ತಿಳಿಸುತ್ತದೆ.

ಈ ಸಂದರ್ಭದಲ್ಲಿ ಗ್ರಾಮಪಂಚಾಯತಿ ಅಧ್ಯಕ್ಷೆ ದೊಡ್ಡತಾಯಮ್ಮ, ಸಮಾಲೋಚಾನ ಅಧಿಕಾರಿ ಮಹೇಶ್,  ಸದಸ್ಯರಾದ ರಾಜು, ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ವರದಿ.ಪ್ರಸನ್ನಕುಮಾರ್ ಕೆಸ್ತೂರು

prajaprabhat

Recent Posts

SSC 14,582 ಹುದ್ದೆಗಳಿಗೆ ಅರ್ಜಿ ಆಹ್ವಾನ

ಜೂನ್ 9 ರಂದು 14,582 ಹುದ್ದೆಗಳಿಗೆ SSC CGL 2025 ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು…

23 minutes ago

2000 ವರ್ಷಗಳ ಹಿಂದೆ ಬೌದ್ಧಧರ್ಮದ ಆಗಮನವನ್ನು ಗುರುತಿಸುವ ಪೋಸನ್ ಪೋಯವನ್ನು ಶ್ರೀಲಂಕಾ ಆಚರಿಸುತ್ತಿದೆ.

ಶ್ರೀಲಂಕಾ ಇಂದು ಪವಿತ್ರ ಪೋಸನ್ ಪೋಯ ಹಬ್ಬವನ್ನು ಆಚರಿಸುತ್ತಿದೆ, ಇದು 2,000 ವರ್ಷಗಳ ಹಿಂದೆ ಬೌದ್ಧಧರ್ಮದ ಐತಿಹಾಸಿಕ ಆಗಮನವನ್ನು ಸೂಚಿಸುತ್ತದೆ.…

53 minutes ago

ದಕ್ಷಿಣ ಭಾರತದಲ್ಲಿ ಭಾರೀ ಮಳೆ, ಪೂರ್ವ-ಮಧ್ಯ ಭಾರತದಾದ್ಯಂತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ: ಐಎಂಡಿ ಮುನ್ಸೂಚನೆ

ಹೊಸ ದೆಹಲಿ.10.ಜೂನ್.25:- ಕರಾವಳಿ ಕರ್ನಾಟಕ ಮತ್ತು ಕರ್ನಾಟಕದ ಒಳನಾಡು, ಕೇರಳ, ಮಾಹೆ, ಒಡಿಶಾ, ರಾಯಲಸೀಮಾ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್…

2 hours ago

ಹಣಕಾಸು ಸಚಿವ ಸೀತಾರಾಮನ್ ಅಧ್ಯಕ್ಷತೆಯಲ್ಲಿ 6ನೇ NIIF ಜಿಸಿ ಸಭೆ.

ಹೊಸ ದೆಹಲಿ.10.ಜೂನ್.25:- ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ…

2 hours ago

ಭಾರತೀಯ ಯುವಕರು ಉದ್ಯೋಗಾಕಾಂಕ್ಷಿಗಳಿಂದ ಉದ್ಯೋಗ ಸೃಷ್ಟಿಕರ್ತರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ, ಐಐಟಿಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ: ಲೋಕಸಭಾ ಸ್ಪೀಕರ್

ಹೊಸ ದೆಹಲಿ.10.ಜೂನ್.25:- ಭಾರತವು ತನ್ನ ಯುವ ಪ್ರತಿಭೆ ಮತ್ತು ತಾಂತ್ರಿಕ ನಾವೀನ್ಯತೆಗಳ ಬಲದ ಮೂಲಕ ಸಮಕಾಲೀನ ಸವಾಲುಗಳನ್ನು ಎದುರಿಸುವಲ್ಲಿ ಜಾಗತಿಕ…

2 hours ago

ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದ ಶೆಲ್ ದಾಳಿಯಿಂದ ಹಾನಿಗೊಳಗಾದ 2060 ಮನೆಗಳಿಗೆ ಸರ್ಕಾರ 25 ಕೋಟಿ ನೆರವು ನೀಡಲಿದೆ.

ಹೊಸ ದೆಹಲಿ.10.ಜೂನ್.25:- ಗಡಿ ಪ್ರದೇಶಗಳಲ್ಲಿ ಹಾನಿಗೊಳಗಾದ 2,060 ಮನೆಗಳಿಗೆ ಸರ್ಕಾರ ಹೆಚ್ಚುವರಿ 25 ಕೋಟಿ ರೂಪಾಯಿಗಳನ್ನು ಒದಗಿಸಲಿದೆ. ಆಪರೇಷನ್ ಸಿಂಧೂರ್…

2 hours ago