ಈ ಗ್ರಾಮದಲ್ಲಿ ದಲಿತರಿಗೆ ದೇವಾಲಯ’ಕೆ ಪ್ರವೇಶವಿಲ್ಲ.

ಮಂಡ್ಯ.09.ಏಪ್ರಿಲ್.25:- ಶ್ರೀರಂಗಪಟ್ಟಣ ತಾಲ್ಲೂಕಿನ ಹುಂಜನೆರೆ ಗ್ರಾಮದ ದೇವಾಲಯ ಕರ್ಣಾಟಕ ಸರ್ಕಾರ ಮುಜರಾಯಿ ಇಲಾಖೆಗೆ ಸೇರಿದ್ದು ಇನ್ಮುಂದೇ ಗ್ರಾಮದ ಪ್ರತಿಯೊಬ್ಬರಿಗೂ  ಎಲ್ಲ ದಿನವೂ ಮುಕ್ತ ಪ್ರವೇಶ ನೀಡಬೇಕು ಎಂದು ಗ್ರಾಮದ  ಮುಖಂಡರು ಆಗ್ರಹ.

ಪಟ್ಟಣದಲ್ಲಿ ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೇಘ ಅವರಿಗೆ ಮನವಿ ಸಲ್ಲಿಸಿದ ಮುಖಂಡರು, ‘ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದರೂ ಗ್ರಾಮದ ದಲಿತರಿಗೆ ಪ್ರವೇಶವಿಲ್ಲ. ಶಾಸಕ ರಮೇಶ ಬಂಡಿಸಿದ್ದೇಗೌಡ ಅವರಿಗೆ ತಿಳಿಸಿದ ಬಳಿಕ, ವಿಶೇಷ ದಿನಗಳಲ್ಲಿ ಮಾತ್ರ ಅವಕಾಶ ನೀಡಲು ಒಪ್ಪಿಗೆ ಸಿಕ್ಕಿದೆ. ವರ್ಷದ ಎಲ್ಲ ದಿನವೂ ದಲಿತರು ಇಲ್ಲಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು.

ದೇವಾಲಯದ ಮುಂದೆ ಫಲಕ ಹಾಕಬೇಕು’ ಎಂದು ಮುಖಂಡರಾದ ಚನ್ನಪ್ಪ ಮತ್ತು ಸಿದ್ದಲಿಂಗು ಒತ್ತಾಯಿಸಿದರು.

ಯುಗಾದಿ ಉತ್ಸವ ಸೇರಿ ವಿಶೇಷ ದಿನಗಳಲ್ಲಿ ಮಾತ್ರ ದಲಿತರಿಗೆ ಪ್ರವೇಶ ಮತ್ತು ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಉಳಿದ ದಿನಗಳಲ್ಲೂ ದಲಿತರಿಗೆ ಪೂಜೆ ಮಾಡಲು ಕ್ರಮ ವಹಿಸಬೇಕು’ ಎಂದು ದಸಂಸ ಮುಖಂಡ ಎಂ. ಚಂದ್ರಶೇಖರ್‌, ಗಂಜಾಂ ರವಿಚಂದ್ರ, ಮಹದೇವಸ್ವಾಮಿ ಮನವಿ ಮಾಡಿದರು.

‘ಮುಜರಾಯಿ ಇಲಾಖೆಗೆ ಸೇರಿದ ಯಾವುದೇ ದೇವಾಲಯದಲ್ಲೂ ಪ್ರವೇಶದ ವಿಷಯದಲ್ಲಿ ತಾರತಮ್ಯ ಮಾಡುವಂತಿಲ್ಲ. ತಾರತಮ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಶೀಘ್ರ ದಲಿತರು ಮತ್ತು ಸವರ್ಣೀಯರ ಸಭೆ ನಡೆಸಿ ಗೊಂದಲ ಬಗಹರಿಸಲಾಗುವುದು’ ಎಂದು ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ ಭರವಸೆ ನೀಡಿದರು.

ಅಪೆಕ್ಸ್‌ ಬ್ಯಾಂಕ್‌ ಮಾಜಿ ನಿರ್ದೇಶಕ ಅರಕೆರೆ ಶಿವಯ್ಯ, ರೈತ ಸಂಘದ ತಾಲ್ಲೂಕು ಘಟಕದ ಸಂಚಾಲಕ ಪಾಂಡು, ಬೆಳಗೊಳ ಬಸವಯ್ಯ, ಕುಬೇರಪ್ಪ, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಸುರೇಶ್, ಸೋಮೇಶ್ ಪಾಲ್ಗೊಂಡಿದ್ದರು.

ತಾಲ್ಲೂಕಿನ ಹುಂಜನೆರೆ ಗ್ರಾಮದ ಚನ್ನಕೇಶ್ವರಸ್ವಾಮಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು, ದಲಿತರಿಗೆ ವರ್ಷದ ಎಲ್ಲ ದಿನವೂ ಮುಕ್ತ ಪ್ರವೇಶ ನೀಡಬೇಕು’ ಎಂದು ಗ್ರಾಮಸ್ಥರು ಹಾಗೂ ದಲಿತ ಸಂಘರ್ಷ ಸಮಿತಿಯ ಮುಖಂಡರು ಮಂಗಳವಾರ ಆಗ್ರಹಿಸಿದರು.

ಪಟ್ಟಣದಲ್ಲಿ ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೇಘ ಅವರಿಗೆ ಮನವಿ ಸಲ್ಲಿಸಿದ ಮುಖಂಡರು, ‘ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದರೂ ಗ್ರಾಮದ ದಲಿತರಿಗೆ ಪ್ರವೇಶವಿಲ್ಲ. ಶಾಸಕ ರಮೇಶ ಬಂಡಿಸಿದ್ದೇಗೌಡ ಅವರಿಗೆ ತಿಳಿಸಿದ ಬಳಿಕ, ವಿಶೇಷ ದಿನಗಳಲ್ಲಿ ಮಾತ್ರ ಅವಕಾಶ ನೀಡಲು ಒಪ್ಪಿಗೆ ಸಿಕ್ಕಿದೆ. ವರ್ಷದ ಎಲ್ಲ ದಿನವೂ ದಲಿತರು ಇಲ್ಲಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ದೇವಾಲಯದ ಮುಂದೆ ಫಲಕ ಹಾಕಬೇಕು’ ಎಂದು ಮುಖಂಡರಾದ ಚನ್ನಪ್ಪ ಮತ್ತು ಸಿದ್ದಲಿಂಗು ಒತ್ತಾಯಿಸಿದರು.

ಯುಗಾದಿ ಉತ್ಸವ ಸೇರಿ ವಿಶೇಷ ದಿನಗಳಲ್ಲಿ ಮಾತ್ರ ದಲಿತರಿಗೆ ಪ್ರವೇಶ ಮತ್ತು ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಉಳಿದ ದಿನಗಳಲ್ಲೂ ದಲಿತರಿಗೆ ಪೂಜೆ ಮಾಡಲು ಕ್ರಮ ವಹಿಸಬೇಕು’ ಎಂದು ದಸಂಸ ಮುಖಂಡ ಎಂ. ಚಂದ್ರಶೇಖರ್‌, ಗಂಜಾಂ ರವಿಚಂದ್ರ, ಮಹದೇವಸ್ವಾಮಿ ಮನವಿ ಮಾಡಿದರು.

ಮುಜರಾಯಿ ಇಲಾಖೆಗೆ ಸೇರಿದ ಯಾವುದೇ ದೇವಾಲಯದಲ್ಲೂ ಪ್ರವೇಶದ ವಿಷಯದಲ್ಲಿ ತಾರತಮ್ಯ ಮಾಡುವಂತಿಲ್ಲ. ತಾರತಮ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಶೀಘ್ರ ದಲಿತರು ಮತ್ತು ಸವರ್ಣೀಯರ ಸಭೆ ನಡೆಸಿ ಗೊಂದಲ ಬಗಹರಿಸಲಾಗುವುದು’ ಎಂದು ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ ಭರವಸೆ ನೀಡಿದರು.

ಅಪೆಕ್ಸ್‌ ಬ್ಯಾಂಕ್‌ ಮಾಜಿ ನಿರ್ದೇಶಕ ಅರಕೆರೆ ಶಿವಯ್ಯ, ರೈತ ಸಂಘದ ತಾಲ್ಲೂಕು ಘಟಕದ ಸಂಚಾಲಕ ಪಾಂಡು, ಬೆಳಗೊಳ ಬಸವಯ್ಯ, ಕುಬೇರಪ್ಪ, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಸುರೇಶ್, ಸೋಮೇಶ್ ಪಾಲ್ಗೊಂಡಿದ್ದರು.

prajaprabhat

Recent Posts

ಸರ್ಕಾರಿ ಕಾಲೇಜುಗಳಲ್ಲಿ ನೇಮಕಾತಿಗಾಗಿ ಯುಜಿಸಿ ನಿರ್ದಿಷ್ಟಪಡಿಸಿದ ಅರ್ಹತೆಗಳನ್ನು ಪೂರೈಸಬೇಕು ಎಂದು ತೀರ್ಪು ನೀಡಿದೆ.

ಬೆಂಗಳೂರು.ಯುಜಿಸಿ ಅತಿಥಿ ಅಧ್ಯಾಪಕರ ಕುರಿತಾದ ಇತ್ತೀಚಿನ ಸುತ್ತೋಲೆಗಳು ಸಾಮಾನ್ಯವಾಗಿ ಅವರ ನೇಮಕಾತಿ, ಅರ್ಹತೆಗಳು ಮತ್ತು ಗೌರವ ಧನಕ್ಕೆ ಸಂಬಂಧಿಸಿದ ವಿಷಯಗಳನ್ನು…

4 minutes ago

ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸಿದೆ; ಯುಜಿಸಿ ಅರ್ಹರಿಗೆ ದಿನಕ್ಕೆ 2,200 ವೇತನ ಕಾಲೇಜು ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ.

ಅತಿಥಿ ಉಪನ್ಯಾಸಕರ ವೇತನವನ್ನು UGC Eligibility ಯುಜಿಸಿ ಅರ್ಹತೆ ಹೊಂದಿರುವವರಿಗೆ ದಿನಕ್ಕೆ ರೂ. 1750/- ದರದಲ್ಲಿ ತಿಂಗಳಿಗೆ ಗರಿಷ್ಠ ರೂ.…

16 minutes ago

UGC Rules ಏಕಕಾಲದಲ್ಲಿ ಎರಡು ಪದವಿಗಳನ್ನು ಪಡೆಯಡು Right/Wrong?

ಹೊಸ UGC ನಿಯಮವು ಏಕಕಾಲದಲ್ಲಿ ಎರಡು ಪದವಿಗಳನ್ನು ಪಡೆಯಲು ಅವಕಾಶ ನೀಡುತ್ತದೆ - 2025 ಶೈಕ್ಷಣಿಕ ವರ್ಷಕ್ಕೆ ಪೂರ್ಣ ಮಾರ್ಗಸೂಚಿಗಳು…

53 minutes ago

ಭಾಲ್ಕಿ ತಾಲೂಕನ್ನು ಗುಡಿಸಲು ಮುಕ್ತ* <br>ಮಾಡುವುದೇ ಮುಖ್ಯ ಗುರಿ-ಸಚಿವ ಈಶ್ವರ ಖಂಡ್ರೆ

ಬೀದರ.12.ಜೂನ್.25:- ಭಾಲ್ಕಿ ತಾಲೂಕನ್ನು ಗುಡಿಸಲು ಮುಕ್ತನಾಗಿ ಮಾಡುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವರಾದ…

2 hours ago

ರೋಹಿಣಿ ಸಿಂಧೂರಿ ಸಹಿತ ಮೂವರು IAS ಅಧಿಕಾರಿಗಳು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು.12.ಜೂನ್.25:- ರಜ್ಯದಲ್ಲಿ IAS ಮತ್ತು IPS ಮೂರು ಅಧಿಕಾರಿಗಳ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ರೋಹಿಣಿ ಸಿಂಧೂರಿ ಸಹಿತ…

2 hours ago

ಮೌಂಟ್ ಎವರೆಸ್ಟ್ ಶಿಖರವನ್ನೇರಿದ ಎನ್‌ಸಿಸಿ ಕೆಡೆಟ್‌ಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸನ್ಮಾನಿಸಿದರು.

ಹೊಸ ದೆಹಲಿ.12.ಜೂನ್.25:- ಇತ್ತೀಚೆಗೆ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಕೆಡೆಟ್‌ಗಳನ್ನು ನವದೆಹಲಿಯಲ್ಲಿ ರಕ್ಷಣಾ ಸಚಿವ…

2 hours ago