ಔರಾದ.10.ಜೂನ್.25:- ಡಾ.ಸಿಂಧೆ ಭೀಮಸೇನ್ ರಾವ್ ಅವರು ಸೋಮವಾರ ರಾಜ್ಯ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಅವರನ್ನು ಭೇಟಿ ಮಾಡಿ ಔರಾದ ಮತ್ತು ಕಮಲನಗರ ತಾಲ್ಲೂಕುಗಳ ರೈತರಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಗುಣಮಟ್ಟದ ಸೋಯಾಬೀನ್ ಬಿತ್ತನೆ ಬೀಜಗಳನ್ನು ಸರಬರಾಜು ಮಾಡುವಂತೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯಾದಾದ್ಯಂತ ಮುಂಗಾರು ಮಳೆ ಪ್ರಾರಂಭವಾಗಿದ್ದು, ಬೀದರ್ ಜಿಲ್ಲೆಯ ಔರಾದ (ಬಿ) ಮತ್ತು ಕಮಲನಗರ ತಾಲ್ಲೂಕುಗಳಲ್ಲಿ ರೈತರು ಹೊಲಗಳನ್ನು ಹಸನು ಮಾಡಿಕೊಂಡು ರೈತರ ಪ್ರಮುಖ ಬೆಳೆಯಾದ ಸೋಯಾ ಬೀನ್ ಬಿತ್ತನೆ ಮಾಡಲು ಉತ್ತಮ ಗುಣಮಟ್ಟದ ಸೋಯಬೀನ್ ಬಿತ್ತನೆ ಬೀಜಕ್ಕಾಗಿ ರೈತರು ಕಾಯುತ್ತಿದ್ದಾರೆ.
ರೈತರಿಗೆ ಬಿತ್ತನೆಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಕೃಷಿ ಇಲಾಖೆಯಿಂದ ತ್ವರಿತವಾಗಿ ಹಾಗೂ ಸಮರ್ಪಕ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಸೋಯಾ ಬೀಜದ ಲಭ್ಯತೆ ಅವಶ್ಯಕವಾಗಿರುತ್ತದೆ. ಆದರೆ ಪ್ರಸ್ತುತ ಈ ಭಾಗದಲ್ಲಿ ಹಲವಾರು ರೈತರು ಬೀಜದ ಕೊರತೆಯಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆದುದರಿಂದ ಕೃಷಿ ಇಲಾಖೆಯ ಮೂಲಕ ಶಾಶ್ವತವಾಗಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ಸೋಯಾ ಬೀಜಗಳನ್ನ, ಸರಕಾರದಿಂದ ಅನುಮೋದಿತ, ಪ್ರಮಾಣಿತ ಹಾಗೂ ತಪಾಸಣೆಯಾದ ಬೀಜಗಳನ್ನು, ಸರ್ಕಾರದ ವತಿಯಿಂದ ಸೂಕ್ತ ಸಬ್ಸಿಡಿ ವ್ಯವಸ್ಥೆಯನ್ನು ಜಾರಿಗೊಳಿಸಿ, ರೋಗನಿರೋಧಕ ಕ್ರಮ, ಹಾಗೂ ಜೈವಿಕ ಪದ್ಧತಿಗಳ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ರೈತರಿಗೆ ಅಗತ್ಯವಿರುವಷ್ಟು ಉತ್ತಮ ಗುಣಮಟ್ಟದ ಸೋಯಾ ಬೀನ್ ಬಿತ್ತನೆ ಬೀಜಗಳನ್ನು ಸರಬಾಜು ಮಾಡಿದಲ್ಲಿ ರೈತರು ಸಮಯಕ್ಕೆ ತಕ್ಕಂತೆ ಬೆಳೆ ಬಿತ್ತಲು ಸಾಧ್ಯವಾಗುತ್ತದೆ. ಇದರಿಂದಾಗಿ ರೈತರ ಆದಾಯವನ್ನೂ ಹೆಚ್ಚಿಸುತ್ತದೆ ಮತ್ತು “ರೈತರ ಬಾಳಿಗೆ ಬೆಳಕು” ಎಂಬ ದೃಷ್ಟಿ ಕೋನವನ್ನು ಪೂರೈಸುವಲ್ಲಿ ಸಹಕಾರಿಯಾಗುತ್ತದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದರು.
ಕಲಬುರಗಿ.12.ಜೂನ್.25:- ರಾಜ್ಯದಲ್ಲಿ 2025-26 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರುಗಳ ಹುದ್ದೆಗಳಿಗೆ ಅತಿಥಿ…
ಕೇಂದ್ರ ಲೋಕ ಸೇವಾ ಆಯೋಗಹೊಸ ದೆಹಲಿ.11.ಜೂನ.25:- ಇದು ಭಾರತದ ಒಂದು ಕೇಂದ್ರೀಯ ಸಂಸ್ಥೆಯಾಗಿದ್ದು ಸಾರ್ವಜನಿಕ ಸೇವೆಗೆ ರಾಷ್ಟ್ರ ಮಟ್ಟದಲ್ಲಿ ಪರೀಕ್ಷೆಗಳನ್ನು…
ಹೊಸ UGC ನಿಯಮವು ಏಕಕಾಲದಲ್ಲಿ ಎರಡು ಪದವಿಗಳನ್ನು ಪಡೆಯಲು ಅವಕಾಶ ನೀಡುತ್ತದೆ - 2025 ಶೈಕ್ಷಣಿಕ ವರ್ಷಕ್ಕೆ ಪೂರ್ಣ ಮಾರ್ಗಸೂಚಿಗಳು…
ಕ್ಷಣದಲ್ಲಿ UGC, ಒಂದು ಸಾಥ್ 89 ಕಾಲೇಜುಗಳು ಕೋ ನೋಟೀಸ್ ಜಾರಿ, ಪಟ್ಟಿಯಲ್ಲಿ ಎಮ್ಎಸ್, ಐ,ಐ.ಯು.ಇ. ಇಗ್ನೂ ಭಿ ಶಾಮಿಲ್,…
2025-26 ನೇ ಶೈಕ್ಷಣಿಕ ಸಾಲಿಗಾಗಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ವಿವಿಧ ಸ್ನಾತಕ ವಿಷಯಗಳಿಗೆ ತಾತ್ಕಾಲಿಕ ಅತಿಥಿ…
ಈಗ ಪ್ರತಿಯೊಬ್ಬರಿಗೂ 'ಪಿಂಚಣಿ' ; ಕೇಂದ್ರ ಸರ್ಕಾರದಿಂದ ಹೊಸ 'ಯೋಜನೆ' ಪರಿಚಯ ಹೊಸ ದೆಹಲಿ.11.ಜೂನ್.25:- ಕೇಂದ್ರ ಸರ್ಕಾರ ಈಗ ಪ್ರತಿಯೊಬ್ಬರಿಗೂ…