ಚಾಮರಾಜನಗರ.22.ಮಾರ್ಚ.25:- ಯಳಂದೂರು: ತಾಲ್ಲೂಕಿನ ಗುಂಬಳ್ಳಿ ಗ್ರಾಮದ ಗ್ರಾಮಪಂಚಾಯತಿ ಮುಂಭಾಗವಿರುವ ಕುಡಿಯುವ ನೀರಿನ ತೊಂಬೆಯ ಸುತ್ತಲೂ ಮದ್ಯದ ಪೌಚ್ ಗಳು ರಾಶಿಯಾಗಿ ಬಿದ್ದಿದೆ ಹಾಗೂ ಘನ ತ್ಯಾಜ್ಯಗಳಿಂದ ಕೂಡಿದೆ
ಪ್ರತಿ ದಿನ ಈ ನೀರಿನ ತೊಂಬೆಯ ಮೂಲಕವೇ ಕುಡಿಯುವ ನೀರನ್ನು ಸಾರ್ವಜನಿಕರು ತೆಗೆದುಕೊಳ್ಳುತ್ತಾರೆ. ಚರಂಡಿಯಲ್ಲಿ ಹೂಳು ತುಂಬಿ ಗಬ್ಬುನಾರುತ್ತದೆ
ತೊಂಬೆಯ ಸುತ್ತಲೂ ಅನೈರ್ಮಲ್ಯದಿಂದ ಕೂಡಿ ಅನೇಕ ರೋಗಗಳಿಗೆ ಅವಕಾಶಮಾಡಿ ಕೊಟ್ಟಿದೆ.
ಮದ್ಯ ಪ್ರಿಯರಿಗೆ ಈ ನೀರಿನ ತೊಂಬೆಯ ಕೇಂದ್ರಸ್ಥಾನವಾಗಿದೆ ಅಲ್ಲಿಯೇ ಕೂತು ಲೋಟಕ್ಕೆ ಮದ್ಯವನ್ನು ಹಾಕಿ ಆ ನೀರಿನ ತೊಂಬೆಯಲ್ಲಿಯೇ ನೀರು ಮಿಶ್ರಣಮಾಡಿ ಕುಡಿದು ಪೌಚ್ ಮತ್ತು ಲೋಟವನ್ನು ಅಲ್ಲಿ ಇರಿಸುತ್ತಾರೆ.
ಗ್ರಾಮಪಂಚಾಯತಿ ಮುಂಭಾಗನೇ ಅನೈರ್ಮಲ್ಯವಿದ್ದು ಇನ್ನೂ ಗ್ರಾಮದೊಳಗೆ ಇನ್ನೇಷ್ಟು ಸಮಸ್ಯೆಗಳಿದೆ ಎನ್ನುವುದು ಪ್ರಶ್ನೆಯಾಗಿದೆ?. ಇಲ್ಲಿ ಗ್ರಾಮಪಂಚಾಯತಿ ಆಡಳಿತ ನಡೆಸುತ್ತಿದಿಯೋ ಅಥವಾ ಇಲ್ಲವೋ ಎನ್ನುವುದು ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಕಾರ್ಯನಿರ್ವಹಿಸುತ್ತಿಲ್ಲ ಅದಕ್ಕೆ ಇಂತಹ ಸಮಸ್ಯೆಗಳು ಉದ್ಬವಗೊಂಡಿದೆ.
ಗ್ರಾಮಪಂಚಾಯತಿ ಆಡಳಿತ ಮತ್ತು ಗ್ರಾಮಅಭಿವೃದ್ದಿ ಅಧಿಕಾರಿಗಳು ಗ್ರಾಮಪಂಚಾಯತಿ ಮುಂಭಾಗನೇ ಅನೈರ್ಮಲ್ಯದಿಂದ ಕೂಡಿದ್ದರು ಏಕೆ ? ಮೌನವಾಗಿದ್ದಾರೆ.
ಇವರ ನಿರ್ಲಕ್ಷ್ಯ ತನವನ್ನು ತೋರಿಸುತ್ತಿದ್ದಾರೆಂದು ಸಾರ್ವಜನಿಕರು ತಿಳಿಸಿದರು.
ಕೂಡಲೇ ಜಿಲ್ಲಾ ಮಟ್ಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇತ್ತ ಗಮನಿಸಬೇಕಾಗಿದೆ. ಈ ಸಮಸ್ಯೆ ಬಗೆಹರಿಯದಿದ್ದರೆ ಪಂಚಾಯತ್ ರಾಜ್ ಸಚಿವರ ಗಮನಕ್ಕೆ ತರಲಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ವರದಿ.ಪ್ರಸನ್ನಕುಮಾರ್ ಕೆಸ್ತೂರು
ಬೆಂಗಳೂರು.13.ಜೂನ್.25:- ರಾಜ್ಯದ ಆರೋಗ್ಯ ಇಲಾಖೆಯಲ್ಲಿ NHM ಅಡಿಯಲ್ಲಿ ನೇಮಕಗೊಂಡ ಆಶಾ ಮೆಂಟರ್ಸ್ ಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. 2007-08ನೇ…
ಬೆಂಗಳೂರು.13.ಜೂನ್.25:- ಬೀದರ್ ಬೆಂಗಳೂರು ಮತ್ತೊಂದು ವಿಶೇಷ ಟ್ರೈನ್ ಇದೇ 15 ಜೂನ್ ರಿಂದ ಪ್ರಾರಂಭ ಆಗ್ತಿದೆ. ಈ ಟ್ರೈನ್ ಕರ್ನಾಟಕದ…
ಬೆಂಗಳೂರು.13.ಜೂನ್ .25:- ರಾಜ್ಯ ಸರ್ಕಾರಿ ನೌಕರರಿಗೆ 2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ ರಾಜ್ಯಾದ್ಯಂತ ಶ್ರವಣ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ…
ಬಳ್ಳಾರಿ.13.ಜೂನ್.25:- ರಾಜ್ಯದಲ್ಲಿ ಏಕಲವ್ಯ ಮಾದರಿ ಸ್ಕೂಲ್ ಗಳಲ್ಲಿ ಬೇಕಾಗಿರುವ ಶೀಕ್ಷಕರ ಹುದ್ದೆಗಳು ತಾಲ್ಲೂಕಿನ ಕೊಳಗಲ್ಲು ಗ್ರಾಮದ ಏಕಲವ್ಯ ಮಾದರಿ ವಸತಿ…
ಬೆಂಗಳೂರು.13.ಜೂನ್.25:- ರಾಜ್ಯದ ಡಿಸಿಆರ್ಇ ಪೊಲೀಸ್ ಠಾಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವ ಮತ್ತು…
ಹೊಸ ದೆಹಲಿ.13.ಜೂನ್.25:- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2025-26ರ ಹಣಕಾಸು ವರ್ಷದ ನೇಮಕಾತಿಯ ಭಾಗವಾಗಿ 4,500 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ.…