13 ಡಿಸೆಂಬರ್24 ಬೀದರ್:- ತೊಗರಿ ಬೆಳೆಯ ಕೃಷಿಯಲ್ಲಿ ಬರುವಂತಹ ತೊಂದರೆ, ಪರಿಣಾಮಗಳು, ಹವಾಮಾನ ಏರಿಳಿತದಿಂದಾಗುವ ತೊಂದರೆಗಳು ಜೊತೆಗೆ ಮಣ್ಣಿನ ಆರೋಗ್ಯ ಹಾಗೂ ಪೋಷಕಾಂಶಗಳ ನಿರ್ವಹಣೆ ಹಾಗೂ ಎಫ್ .ಪಿ .ಓ, ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುವಂತಹ “ಪಲ್ಸ್ ಮ್ಯಾಜಿಕ್” ಎಂಬ ಗೊಬ್ಬರವು ಹೆಸರು, ಸೋಯಾಬೀನ, ಉದ್ದು, ತೊಗರಿ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಪಡೆಯಲು ಉಪಯೋಗಿಸಬಹುದಾಗಿದೆ ಎಂದು ಡಾ.ಆರ್.ಎಲ್.ಜಾಧವ್ ತಿಳಿಸಿದರು
ಅವರು ಗುರುವಾರ “ರಿವಾರ್ಡ್” ಯೋಜನೆಯ ಭೂ ಸಂಪನ್ಮೂಲ ಸಮೀಕ್ಷೆ ಆಧಾರಿತ ರಸಗೊಬ್ಬರಗಳ ಯೋಜನೆಯಡಿಯಲ್ಲಿ ಗಡಿ ಕುಶ್ನುರ್ ಗ್ರಾಮದ ರೈತರಾದ ಉಮೇಶ್ ಪಾಟೀಲ್, ಶ್ರೀದೇವಿ ಅಪ್ಪರಾವ ಅವರ ತೊಗರಿ ಬೆಳೆ ಜಮೀನಿನಲ್ಲಿ ಹಮ್ಮಿಕೊಂಡಿದ್ದ ತೊಗರಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜನವಾಡ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞರು, ಮುಖ್ಯಸ್ಥರಾದ ಡಾ. ಸುನಿಲ್ ಎನ್ .ಎಂ. ಅವರು ಮಾತನಾಡಿ, ತೊಗರಿಯಲ್ಲಿ ಬರುವಂತಹ ಮುಖ್ಯ ಕೀಟಗಳ ಬಗ್ಗೆ ರೈತರಿಗೆ ಮಾಹಿತಿ ತಿಳಿಸಿದರು ಮತ್ತು ಅವುಗಳ ಸಮಗ್ರ ನಿರ್ವಹಣೆಯ ಬಗ್ಗೆ ಮಾಹಿತಿ ತಿಳಿಸಿದರು ಮುಖ್ಯವಾಗಿ ತೊಗರಿಯಲ್ಲಿ ಗಮನಕ್ಕೆ ಬಾರದ “ಕಾಯಿ ನೊಣ” ಎಂಬ ಕೀಟದ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದರು.
ಕ್ಷೇತ್ರೋತ್ಸವದಲ್ಲಿ, ಪ್ರಾತ್ಯಕ್ಷಿಕೆ ತಾಕುಗಳಿಗೆ ಭೇಟಿ,ರೈತರ ಜೊತೆ ಚರ್ಚೆ ಹಾಗೂ ತಜ್ಞರ ಜೊತೆ ರೈತರ ಸಂವಾದ ನಡೆಸಲಾಯಿತು.
ಈ ಸಂದರ್ಭದಲ್ಲಿ ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್, ತೊಗರಿ ಬೆಳೆ ತಜ್ಞರಾದ ಡಾ.ಆರ್.ಎಲ್.ಜಾಧವ್, ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪ್ರವೀರ್ಣ ಜೋಳಗಿಕಾರ್, ಸಂತಪುರ ಕೃಷಿ ಅಧಿಕಾರಿ, ಚಂದ್ರಕಾAತ, ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಅಶೋಕ್, ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ವಿ.ಪಿ.ಸಿಂಗ್, ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಕಡ್ಲಿ ವಿರೇಶ್, ಮಾದಪ್ಪ, ಗ್ರಾಮ ಪಂಚಾಯತ ಸದಸ್ಯರು ಹಾಗೂ ಈ ಯೋಜನೆಯ ಫಲಾನುಭವಿ ರೈತರುಗಳು ಹಾಗೂ ಅವರ ಕುಟುಂಬಸ್ಥರು, ಲಾಧಾ ,ಗಡಿ ಕುಶ್ನುರ್ ಮತ್ತು , ಗ್ರಾಮದ ರೈತರು ಉಪಸ್ಥಿತರಿದ್ದರು.
ತಜ್ಞರೊಂದಿಗೆ ಸಂವಾದ ಕಾರ್ಯಕ್ರಮದ ನಂತರ ಪ್ರತ್ಯಕ್ಷಿಕೆ ತಾಕುಗಳಿಗೆ ಎಲ್ಲ ತಜ್ಞರು ಹಾಗೂ ರೈತರೊಂದಿಗೆಗೆ ಭೇಟಿ ನೀಡಲಾಯಿತು ಕಾರ್ಯಕ್ರಮವನ್ನು ವಿಠ್ಠಲ್ ನಿರೂಪಿಸಿದರು. ತೋಟಗಾರಿಕೆ ಮಹಾವಿದ್ಯಾಲಯ ಸಹಪ್ರಾಧ್ಯಪಕರಾದ ಡಾ. ಪ್ರಸನ್ನ ಯೋಜನೆಯ ಸವಿವರ ನೀಡುವ ಮೂಲಕ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು.
ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…
ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್ನಲ್ಲಿ…
ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…
ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…
ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…
ಬೆಂಗಳೂರು.09.ಜೂನ್.25:- ನ್ಯಾಯಮೂರ್ತಿ ಡಾ:ಹೆಚ್.ಎನ್.ನಾಗಮೋಹನ್ ದಾಸ್, ಏಕ ಸದಸ್ಯ ಆಯೋಗ ರಾಜ್ಯ ಸರ್ಕಾರದಿಂದ 'ಪರಿಶಿಷ್ಟ ಜಾತಿ ಒಳ ಮೀಸಲಾತಿ' ಸಮೀಕ್ಷಾ ಕಾರ್ಯ…