ಗಂಗಾವತಿ ನ್ಯಾಯಾಲಯದಿಂದ ಆರೋಪಿಗೆ ಶಿಕ್ಷೆ

ಕೊಪ್ಪಳ.12.ಜೂನ್25:- ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಗೌರಾವಾನ್ವಿತ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.


ಪ್ರಕರಣದ ಫಿರ್ಯಾದುದಾರರು ಹಾಗೂ ಆರೋಪಿಯು ಸ್ನೇಹಿತಾರಾಗಿದ್ದು, ಕಳೆದ ಮೊಹರಂ ಹಬ್ಬದ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಫಿರ್ಯಾದುದಾರರು ಆರೋಪಿಗೆ ಉಳಿದ ಸ್ನೇಹಿತರ ಮುಂದೆ ಅವಮಾನ ಮಾಡಿದರು ಎಂಬ ದ್ವೇಷದಿಂದ ದಿನಾಂಕ: 27-10-2022 ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಚಿಕ್ಕಜಂತಕಲ್ ಗ್ರಾಮದ ಶಾದಿ ಮಹಲ್ ಹತ್ತಿರ ಫಿರ್ಯಾದುದಾರರು ಸ್ನೇಹಿತರೊಂದಿಗೆ ಮಾತನಾಡುತ್ತಾ ಕುಳಿತಾಗ ಆರೋಪಿಯು ಫಿರ್ಯಾದುದಾರರ ಕುತ್ತಿಗೆಗೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುತ್ತಾನೆ. ಈ ಸಂಬAಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖಾಧಿಕಾರಿಗಳಾದ ಮಂಜುನಾಥ ಅವರು ತನಿಖೆಯಲ್ಲಿ ಆರೋಪಿತನು ಭಾರತೀಯ ದಂಡ ಸಂಹಿತೆ ಕಲಂ 307, 504, 506 ಪ್ರಕಾರ ಅಪರಾಧವೆಸಗಿದ್ದು ತನಿಖೆಯಿಂದ ಮತ್ತು ಸಾಕ್ಷಾö್ಯಧಾರಗಳಿಂದ ದೃಢಪಟ್ಟಿದ್ದರಿಂದ ಆರೋಪಿ ಓಂ ಪ್ರಕಾಶ ತಂದೆ ಹೆಚ್.ಈರಣ್ಣ, ಸಾ|| ಜಂತಕಲ್ ಈತನ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.


ಗಂಗಾವತಿಯ 1ನೇ ಹೆಚ್ಚವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಸಾಕ್ಷಿದಾರರು ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಗೌರವಾನ್ವಿತ ನ್ಯಾಯಾಧೀಶರು, ಆರೋಪಿತನು ತಪ್ಪಿತಸ್ಥನೆಂದು ತೀರ್ಪು ನೀಡಿ, ಆರೋಪಿತನಿಗೆ ಭಾರತೀಯ ದಂಡ ಸಂಹಿತೆ ಕಲಂ 307 ಅಪರಾಧಕ್ಕೆ 7 ವರ್ಷ ಕಾರಾಗೃಹ ವಾಸದ ಶಿಕ್ಷೆ, ಹಾಗೂ ರೂ.5000 ಗಳ ದಂಡ, 3 ತಿಂಗಳೊಳಗೆ ದಂಡ ಪಾವತಿಸದಿದ್ದಲ್ಲಿ 3 ತಿಂಗಳು ಸಾದಾ ಕಾರಾಗೃಹ ವಾಸದ ಶಿಕ್ಷೆ ಅನುಭವಿಸುವಂತೆ ಹಾಗೂ ಭಾರತೀಯ ದಂಡ ಸಂಹಿತೆ ಕಲಂ 506 ಅಪರಾಧಕ್ಕೆ 2 ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ಹಾಗೂ ರೂ.2000 ಗಳ ದಂಡ, 2 ತಿಂಗಳೊಳಗೆ ದಂಡ ಪಾವತಿಸದಿದ್ದಲ್ಲಿ 2 ತಿಂಗಳು ಸಾದಾ ಕಾರಾಗೃಹ ವಾಸ ಶಿಕ್ಷೆ ಅನುಭವಿಸುವಂತೆ ದಿನಾಂಕ: 09-06-2025 ರಂದು ತೀರ್ಪು ನೀಡಿದ್ದಾರೆ.


ಪ್ರಕರಣದಲ್ಲಿ ಅಭಿಯೋಜನಾ ಪರವಾಗಿ ಸರ್ಕಾರಿ ಅಭಿಯೋಜಕರಾದ ನಾಗಲಕ್ಷಿö್ಮo ಎಸ್. ಅವರು ವಾದ ಮಂಡಿಸಿರುತ್ತಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ವೆಂಕಟೇಶ ಮತ್ತು ಮಂಜುನಾಥ ರವರು ಪ್ರಕರಣದ ವಿಚಾರಣೆ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಹಕಾರ ನೀಡಿದ್ದಾರೆ ಎಂದು ಗಂಗಾವತಿಯ ಸರಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

prajaprabhat

Recent Posts

ಇಂದಿನಿಂದ 3 ದಿನ ಭಾರೀ ಮಳೆ! ಈ 7 ಜಿಲ್ಲೆಗಳಿಗೆ ರೆಡ್ ಮೂರು ಜಿಲ್ಲೆಗಳಿಗೆ ‘ರೆಡ್ ಅಲರ್ಟ್‌’

ರಾಜ್ಯದಲ್ಲಿ ಮುಂದಿನ 48 ಗಂಟೆಗಳಲ್ಲಿ ಎಚ್ಚರಿಕೆ ನೀಡಿದ್ದಾರೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಹಾವೇರಿ, ಸೇರಿದಂತೆ ಬೆಂಗಳೂರು,…

5 minutes ago

ಬೇಡಿಕೆಯಂತೆ ಸೋಯಾಬೀನ್ ಬಿತ್ತನೆ ಬೀಜ, ಆತಂಕ ಬೇಡ-ಈಶ್ವರ ಖಂಡ್ರೆ

ಬೀದರ.15.ಜೂನ್.25:- ಬೀದರ್ ಜಿಲ್ಲೆಯ ರೈತರ ಬೇಡಿಕೆಗೆ ಅನುಗುಣವಾಗಿ ಸೋಯಾಬೀನ್ ಬಿತ್ತನೆ ಬೀಜ ಪೂರೈಕೆ ಮಾಡಲು ಕ್ರಮ ವಹಿಸಲಾಗಿದ್ದು, ರೈತರು ಆತಂಕ…

20 minutes ago

ಉತ್ತರಾಖಂಡ್: ಕೇದಾರನಾಥ ಬಳಿ ಹೆಲಿಕಾಪ್ಟರ್ ಪತನ, ಅದರಲ್ಲಿದ್ದ ಏಳು ಮಂದಿ ಸಾವು

ಉತ್ತರಾಖಂಡದ ಕೇದಾರನಾಥ ಪ್ರದೇಶದ ಗೌರಿಕುಂಡ್ ಖಾರ್ಕ್ ಬೆಟ್ಟ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಆರು ಯಾತ್ರಿಕರು ಮತ್ತು ಪೈಲಟ್…

25 minutes ago

ಪ್ರಜಾ ಪ್ರಭಾತ ಕನ್ನಡ ನ್ಯೂಸ್’ಗೆ ಜಿಲ್ಲಾ, ತಾಲ್ಲೂಕು ವರದಿಗಾರರ ಬರ್ಕಾಗಿದರೆ. | Wanted News Reporter’s

ಪ್ರಜಾ ಪ್ರಭಾತ ಡಿಜಿಟಲ್ ಡೆಸ್ಕ್: ಪ್ರಜಾ ಪ್ರಭಾತ ಕನ್ನಡ ಡಿಜಿಟಲ್ ನ್ಯೂಸ್ 24X4 ವೆಬ್ ಸೈಟ್ ಗೆ ಜಿಲ್ಲಾ ಹಾಗೂ…

3 hours ago

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ : 2025-26ನೇ ಸಾಲಿನ ‘NMMSS’ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

2025-26 ನೇ ಶೈಕ್ಷಣಿಕ ಸಾಲಿಗೆ NMMS ವಿದ್ಯಾರ್ಥಿ ವೇತನಕ್ಕಾಗಿ, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP)…

6 hours ago

ಸರಕಾರಿ ಪದವಿ ಕಾಲೇಜುಗು ಈಗ ಖಾಸಗಿ ಕಾಲೇಜುಗಳಂತೆ : ಡಾ.ಎಂ.ಸಿ.ಸುಧಾಕರ್

ಚಿಕ್ಕಮಗಳೂರು.15.ಜೂನ್.25:- ರಾಜ್ಯ ಸರಕಾರ ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಖಾಸಗಿ ಕಾಲೇಜುಗಳಂತೆ…

7 hours ago