ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲವು ಒಂದು ತಾಲ್ಲೂಕು ಕೇಂದ್ರವಾಗಿದೆ.ಈ ನಗರ ಕಾವೇರಿ ನದಿ ದಡದಲ್ಲಿದೆ.
ಕೊಳ್ಳೇಗಾಲವೆಂದರೆ ಬ್ರಿಟಿಷರ ಕಾಲದಿಂದಲೂ ವಾಣಿಜ್ಯ ರಂಗದಲ್ಲಿ ಶ್ರೀಮಂತಿಕೆಯನ್ನು ಪಡೆದುಕೊಂಡಿದೆ ಇಂದಿಗೂ ಸಹ ಕೊಳ್ಳೇಗಾಲದ ಚಿನ್ನ ಹಾಗೂ ಇತರೆ ವಸ್ತುಗಳು ರಾಜ್ಯದ ಗ್ರಾಹಕರನ್ನು ತನ್ನತ್ತ ಸೆಳೆದು ಕೊಳ್ಳೇಗಾಲವನ್ನು ರಾಜ್ಯದಲ್ಲಿ ಗುರುತಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.
ಅದರ ಜೊತೆಗೆ ಮಾಟಮಂತ್ರ ಮಾಡುವುದರಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ ಅಂತ ಕೆಳವರು ಮಾತನಾಡುತ್ತಾರೆ ಆದರೆ ಅದು ನಿಜನಾ? ಅಥವಾ ಸುಳ್ಳ? ಎಂಬುವುದರ ಬಗ್ಗೆ ನಿಗೂಢವಾಗಿದೆ.!
ಆದರೂ ಕೆಲ ಚಲನಚಿತ್ರಗಳು ಕೊಳ್ಳೇಗಾಲವನ್ನು ಮಾಟಮಂತ್ರ ಮಾಡುವುದರಲ್ಲಿ ಜನಪ್ರಿಯ ಎಂದು ಬಿಂಬಿಸಿ ರಾಜ್ಯವೇ ಕೊಳ್ಳೇಗಾಲ ಕಂಡರೆ ಹೆದರಿಕೊಳ್ಳುವಂತೆ ಮಾಡಿದೆ.ಬೆಂಗಳೂರಿನ ಜನ ಕೊಳ್ಳೇಗಾಲದವರು ಎಂದರೆ ಇಂದಿಗೂ ಭಯಪಡುತ್ತಾರೆಂದು ಹೇಳುತ್ತಾರೆ.
ರಾಜ್ಯದ ಎರಡನೇ ಶ್ರೀಮಂತ ದೇವಾಲಯ ಎಂಬ ಖ್ಯಾತಿಗೆ ಶ್ರೀಮಲೈ ಮಹದೇಶ್ವರ ಬೆಟ್ಟ ಹೆಸರುವಾಸಿಯಾಗಿರುವುದರಿಂದ ಅಪಾರ ಭಕ್ತಾದಿಗಳು ಕೊಳ್ಳೇಗಾಲಕ್ಕೆ ಬಂದು ಬೆಟ್ಟಕ್ಕೆ ತೆರಳುವುದರಿಂದ ಇನ್ನೂ ಈ ನಗರ ಹೆಸರುವಾಸಿಯಾಗಿದೆ.
ಏನೇ ಆದರೂ ಸರಿ ನಮ್ಮ ಕೊಳ್ಳೇಗಾಲ ಅಂದರೆ ಇಡೀ ರಾಜ್ಯವೆ ಇಂದು ಗುರುತಿಸುತ್ತದೆ.ಹಾಗೇಯೆ ಕೊಳ್ಳೇಗಾಲದ ಭೀಮನಗರವೆಂದರೆ ರಾಜ್ಯದೊಳಗೆ ಇರುವ ಅಂಬೇಡ್ಕರ್ ವಾದಿಗಳಿಗೆ , ವಿಚಾರವಾದಿಗಳಿಗೆ, ವಿಮರ್ಶಕರಿಗೆ ತುಂಬಾ ಇಷ್ಟ ಪಡುತ್ತಾರೆ.
ಭೀಮನಗರದ ಜನವೆಂದರೆ ತುಂಬಾ ಗತ್ತು ಪಕ್ಕ ಅಂಬೇಡ್ಕರ್ ವಾದಿಗಳು ಎನ್ನುತ್ತಾರೆ ವಿಚಾರವಂತರು.
ಮೈಸೂರಿನ ಆಶೋಕಪುರಂ, ಕೊಳ್ಳೇಗಾಲದ ಭೀಮನಗರ, ಚಾಮರಾಜನಗರದ ರಾಮಸಮುದ್ರ, ಇಲ್ಲಿರುವ ಅಂಬೇಡ್ಕರ್ ಅನುಯಾಯಿಗಳು ರಾಜ್ಯದ ಇತರೆ ಜಿಲ್ಲೆಯಲ್ಲಿರುವ ದಲಿತರಿಗೆ ಮಾರ್ಗದರ್ಶಕರಾಗಿದ್ದಾರೆ. ಇಲ್ಲಿನ ಜನ ಬುದ್ದ, ಬಸವ, ಅಂಬೇಡ್ಕರ್ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸ್ವಾಭಿಮಾನಿಗಳಾಗಿದ್ದಾರೆ. ಅಂಬೇಡ್ಕರ್ ರವರನ್ನು ಮನಸ್ಸಿನಲ್ಲಿ ಆರಾಧಿಸುತ್ತಾರೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಎಸ್ಸಿ ಮೀಸಲಾತಿ ವುಳ್ಳ ಕ್ಷೇತ್ರವಾಗಿದೆ. ಈ ಕ್ಷೇತ್ರದ ಜನ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಿದ್ದಾಂತವನ್ನು ಮೈಗೂಡಿಸಿಕೊಂಡಿದ್ದಾರೆ. ಒಟ್ಟಾರೆ ಬುದ್ದಿಜೀವಿಗಳ ಕ್ಷೇತ್ರವಾಗಿದೆ. ಕೊಳ್ಳೇಗಾಲ ಪಟ್ಟಣಕ್ಕೆ ಯಾರೇ ನಟ, ರಾಜಕಾರಣಿಗಳು ಬಂದರೂ ಅಂಬೇಡ್ಕರ್ ಹೆಸರು ಹೇಳಬೇಕು ಅಷ್ಟೇ. ಇದು ಭೀಮನಗರದ ಧೀರರ ಗತ್ತು.
ಕೊಳ್ಳೇಗಾಲದ ಭೀಮನಗರವೆಂದರೆ ರಾಜ್ಯದ ದಲಿತರು, ಸುತ್ತಮುತ್ತಲಿನ ಗ್ರಾಮದ ಜನರು ಹಾಗೂ ಪಟ್ಟಣದ ವಾಸಿಗಳು ವಿಶೇಷವಾಗಿ ಹಾಗೂ ಗೌರವಯುತವಾಗಿ ನೋಡುತ್ತಾರೆ. ಏಕೆಂದರೆ ಅಲ್ಲಿರುವ ಭೀಮನ ಮೊಕ್ಕಳು ಧೀರರು, ಶೂರರು ಅವರು ಸತ್ಯಕ್ಕೆ ತಲೆಬಾಗುತ್ತಾರೆ.ಸುಳ್ಳು ಎಂದರೆ ಅವರಿಗೆ ಕಿಂಚಿತ್ತೂ ಆಗುವುದಿಲ್ಲ.
ಅಂಬೇಡ್ಕರ್ ರವರನ್ನು ಈ ಧೀರರು ಹೃದಯಕ್ಕೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಅಂಬೇಡ್ಕರ್ ಸಿದ್ದಾಂತಕ್ಕೆ ಯಾವ ರಾಜಕಾರಣಿಗಳಾಗಿರಲಿ, ಯಾರೇ ಆಗಿರಲಿ ದಕ್ಕೆ ಮಾಡಿದ್ದಾರೆ ಎಂದು ಗೊತ್ತಾದರೆ ಭೀಮನಗರದ ಜನ ಎದೆ ತಟ್ಟಿಕೊಂಡು ಮುಂದೆ ಬರುತ್ತಾರೆ ಅಷ್ಟು ಗತ್ತು, ಗಾಂಭೀರ್ಯ ಈ ಜೈ ಭೀಮನ ಮೊಮ್ಮಕ್ಕಳಿದೆ. ಇದು ಈ ದೇಶದ ಮೂಲನಿವಾಸಿಗಳಾದ ನಾಗಜನಾಂಗದ ಗತ್ತು ಎನ್ನಬಹುದು.
ಇಡೀ ಕೊಳ್ಳೇಗಾಲದ ಜನ ಭೀಮನಗರವೆಂದರೆ ನೋಡುವುದೇ ವಿಶೇಷ. ಇವರು ಛಲದಿಂದ ಬದುಕಿದ್ದಾರೆ. ಇವರು ಪಕ್ಕ ಸ್ವಾಭಿಮಾನಿಗಳು ಇವರ ಸ್ವಾಭಿಮಾನಕ್ಕೆ ಯಾರಾದರೂ ದಕ್ಕೆ ಮಾಡಿದರೆ ಕಾನೂನು ಬದ್ದವಾಗಿ ಹೋರಾಟ ಮಾಡಿ ನ್ಯಾಯವನ್ನು ಛಲದಿಂದ ಪಡೆಯುತ್ತಾರೆ.
ಸತ್ಯಕ್ಕೋಸ್ಕರ ಯಾರನ್ನಾದರೂ ಸರಿ ಇವರು ನೇರವಾಗಿ ಪ್ರಶ್ನೆಮಾಡುತ್ತಾರೆ. ಹೆದರಿಕೆ ಅನ್ನೋದ್ ಇವರ ರಕ್ತದಲ್ಲಿಯೇ ಇಲ್ಲ ಅಷ್ಟಕ್ಕೂ ಅಂಬೇಡ್ಕರ್ ಮೊಮ್ಮಕ್ಕಳಲ್ಲವೇ.!
ಕೊಳ್ಳೇಗಾಲ ಮತ್ತು ಸುತ್ತಲಿನ ಗ್ರಾಮಗಳಲ್ಲಿ ದಲಿತರ ಮೇಲೆ ಯಾರೇ ದೌರ್ಜನ್ಯ, ದಬ್ಬಾಳಿಕೆ , ಅಸ್ಪೃಶ್ಯತೆಯಂತ ಘಟನೆಗಳು ನಡೆದರೆ ಈ ಭೀಮನಗರದ ಧೀರರು ಬಂದು ಈ ಘಟನೆಗಳ ವಿರುದ್ಧ ಪ್ರತಿಭಟನೆ ಮಾಡಿ ನ್ಯಾಯ ಒದಗಿಸುವುದಕ್ಕೆ ಮುಂದಾಗುತ್ತಾರೆ.
ಕೊಳ್ಳೇಗಾಲದ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಬೇಕಾದರೆ ರಾಜಕಾರಣಿಗಳು ಭೀಮನಗರದ ವಿಶ್ವಾಸವನ್ನು ತೆಗೆದುಕೊಳ್ಳಬೇಕಾಗಿದೆ.
ದಲಿತರ ಹಿರಿಯ ರಾಜಕೀಯ ಮುತ್ಸದ್ದಿ ದಿವಂಗತ ವಿ ಶ್ರೀನಿವಾಸ್ ಪ್ರಸಾದ್, ದಿವಂಗತ ಆರ್ ಧ್ರುವ ನಾರಾಯಣ್ , ದಿವಂಗತ ಎಸ್ ಜಯಣ್ಣ, ಜಿ ಎನ್ ನಂಜುಂಡಸ್ವಾಮಿ, ಬಾಲರಾಜು, ಎನ್ ಮಹೇಶ್, ಎ ಆರ್ ಕೃಷ್ಣಮೂರ್ತಿ, ಎಚ್ ಸಿ ಮಹದೇವಪ್ಪ, ಸುನೀಲ್ ಬೋಸ್ ಇವರೆಲ್ಲರೂ ಭೀಮನಗರದ ಜನರ ಜೊತೆಗೆ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ.
ಭೀಮನಗರ ಬುದ್ದಿ ಜೀವಿಗಳ ತಾಣವಾಗಿದೆ. ವಿಚಾರವಾದಿಗಳು, ಕವಿಗಳು, ರಾಜಕಾರಣಿಗಳು, ಶಿಕ್ಷಕರು, ವಕೀಲರು, ಉಪನ್ಯಾಸಕರು, ಪತ್ರಕರ್ತರು, ಇಂಜನಿಯರ್, ವೈದ್ಯರು, ಪೋಲೀಸರು, ಐ ಎ ಎಸ್, ಕೆ ಎ ಎಸ್, ಅಧಿಕಾರಿಗಳು, ಹಾಗೂ ವಿದೇಶದಲ್ಲಿಯೂ ವಾಸಮಾಡುವವರು, ಕ್ಲಾಸ್ ಒನ್ ಗುತ್ತಿದಾರರು, ಉದ್ಯಮಿಗಳು ಹಾಗೂ ವಿವಿಧ ರಂಗದಲ್ಲಿ ಗುರುತಿಸಿಕೊಂಡಿರುವವರು ಇದ್ದಾರೆ ಇದಕ್ಕೆ ಕಾರಣ ಅಂಬೇಡ್ಕರ್ ರವರ ಸಿದ್ದಾಂತವನ್ನು ಮೈಗೂಡಿಸಿಕೊಂಡು ಸ್ವಾಭಿಮಾನದಿಂದ ಉನ್ನತ ಹುದ್ದೆಗಳನ್ನು ಪಡೆದು ಉಳಿದ ಶೋಷಿತ ಸಮುದಾಯದ ಜನರಿಗೆ ಮಾರ್ಗದರ್ಶಕರಾಗಿದ್ದಾರೆ.
ಮೈಸೂರು ನಗರದ ಆಶೋಕಪುರಂ ಹಾಗೂ ಕೊಳ್ಳೇಗಾಲದ ಭೀಮನಗರ ಹಾಗೂ ಚಾಮರಾಜನಗರದ ರಾಮಸಮುದ್ರ( ಭೀಮಸಮುದ್ರ) ಜನರನ್ನು ರಾಜ್ಯದ ಜನ ಗೌರವಿಸುತ್ತಾರೆ.
ನ್ಯಾಯಕ್ಕೆ ತಲೆಬಾಗುತ್ತಾರೆ. ಅನ್ಯಾಯ ಮಾಡಿದವರ ವಿರುದ್ದ ಹೋರಾಟ ಮಾಡಿ ನ್ಯಾಯ ಕೊಡಿಸುವುದು ಇವರ ಗುರಿಯಾಗಿದೆ.
( ಜೆ.ಪ್ರಸನ್ನಕುಮಾರ್ ಕೆಸ್ತೂರು) ಸಾಹಿತಿ
( ರಾಜ್ಯಶಾಸ್ತ್ರ ಉಪನ್ಯಾಸಕರು)
ಹೊಸ ದೆಹಲಿ.08.ಜೂನ್.25:-ಅಭಿವೃದ್ಧಿ ಹೊಂದಿದ ಭಾರತದತ್ತ ಮಹಿಳೆಯರು ವಹಿಸಿರುವ ಪರಿವರ್ತನಾತ್ಮಕ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಎತ್ತಿ ತೋರಿಸಿದರು, ಕಳೆದ…
ಬೆಂಗಳೂರು.08.ಜೂನ್.25:- ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಕುಟುಂಬದವರಿಗೂ ಉಚಿತ ಆರೋಗ್ಯ ವಿಮಾ'ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದೆ.ಎಂಬುದಾಗಿ ಕರೆಯುವಂತ ಯೋಜನೆಯಡಿ…
ಹೊಸ ದೆಹಲಿ.08.ಜೂನ್.25:-ದೇಶದಲ್ಲಿ 49 ಜಿಲ್ಲೆಗಳಲ್ಲಿ ಜನಿಸಿದ ಮಕ್ಕಳ ಸಂಖ್ಯೆಗಿಂತ ಸಾವಿನ ಸಂಖ್ಯೆ ಹೆಚ್ಚಾಗಿದೆ. 2021 ರ ಭಾರತದ ನಾಗರಿಕ ನೋಂದಣಿ…
ಬಾಗಲಕೋಟೆ.07.ಜೂನ್.25:- ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬಾಗಲಕೋಟ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭ ಇದೇ ತಿಂಗಳು ಜೂನ್ 10 ರಂದು ಬೆಳಿಗ್ಗೆ…
ಫ್ರೆಂಚ್ ಓಪನ್ ಟೆನಿಸ್ನಲ್ಲಿ, ವಿಶ್ವದ ನಂ. 1 ಆಟಗಾರ್ತಿ ಅರಿನಾ ಸಬಲೆಂಕಾ ಇಂದು ಸಂಜೆ ನಡೆಯಲಿರುವ ಬಹುನಿರೀಕ್ಷಿತ ಮಹಿಳಾ ಸಿಂಗಲ್ಸ್…
"ಭಾರತವು ಯಾವಾಗಲೂ ಕಾನೂನಿನ ನಿಯಮ, ಜಾಗತಿಕ ಸಹಕಾರ ಮತ್ತು ವಿಶ್ವ ವೇದಿಕೆಯಲ್ಲಿ ಸಂವಾದದ ಅಗತ್ಯವನ್ನು ಬೆಂಬಲಿಸಿದೆ" ಎಂದು ಲೋಕಸಭಾ ಸ್ಪೀಕರ್…