ಕೇರಳದ ಕಾಸರಗೋಡಿಗೇ ಈ ಜಿಲ್ಲೆಗಳಲ್ಲಿ ಅತೀ ಹೆಚ್ಚು  ಪಾಕ್ ಪ್ರಜೆಗಳು!

ಭಾರತದ ಕೆರಳ ರಾಜ್ಯದಲ್ಲಿ ಅತೀ ಹೆಚ್ಚು ಪಾಕಿಸ್ತಾನಿ ಪ್ರಜೆಗಳಿರುವ ಕಾಸರಗೋಡು ಜಿಲ್ಲೆ ಆಗಿದೆ. ದ್ವಿತೀಯ ಸ್ಥಾನ ಕಲ್ಲಿಕೋಟೆ ಜಿಲ್ಲೆಗಿದ್ದು, ವಯನಾಡು ಜಿಲ್ಲೆಯು ಮೂರನೇ ಸ್ಥಾನದಲ್ಲಿದೆ. ರಾಜ್ಯದ ಪೊಲೀಸ್ ಇಲಾಖೆಯ ವರದಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ.

ಕೇರಳದಲ್ಲಿ ಒಟ್ಟು 106 ಮಂದಿ ಪಾಕ್ ಪ್ರಜೆಗಳಿದ್ದು, ಇದರಲ್ಲಿ 30 ಮಂದಿ ಈಗಾಗಲೇ ರಾಜ್ಯದಿಂದ ಪಾಕಿಸ್ತಾನಕ್ಕೆ ಮರಳಿದ್ದಾರೆ. ಉಳಿದವರು ಶೀಘ್ರದಲ್ಲೇ ಕೇರಳ ಬಿಡಬೇಕೆಂದು ಕೇಂದ್ರ ಗೃಹ ಇಲಾಖೆಯ ಸ್ಪಷ್ಟ ಸೂಚನೆಯಂತೆ ರಾಜ್ಯ ಗೃಹ ಇಲಾಖೆ ಮತ್ತು ಪೊಲೀಸ್ ಇಲಾಖೆಯು ಅಗತ್ಯದ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಈ ನಿಟ್ಟಿನಲ್ಲಿ ಕೇರಳದಲ್ಲಿ ನೆಲೆಸಿರುವ ಪಾಕ್ ಪೌರರಿಗೆ ಈಗಾಗಲೇ ನೋಟೀಸ್‌ಗಳನ್ನು ನೀಡಲಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ 20 ಮಂದಿ ಪಾಕ್ ಪ್ರಜೆಗಳಿದ್ದರೆ, ಕಲ್ಲಿಕೋಟೆಯಲ್ಲಿ 16 ಹಾಗು ವಯನಾಡು ಜಿಲ್ಲೆಯಲ್ಲಿ 14 ಮಂದಿ ನೆಲೆಸಿದ್ದಾರೆ.

ಈ ಮಧ್ಯೆ ರಾಜ್ಯದಲ್ಲಿ ಈಗ ನೆಲೆಸಿರುವ ಪಾಕಿಸ್ತಾನಿಗಳ ಪೈಕಿ 45 ಮಂದಿ ಕೇರಳದಲ್ಲೇ ವಿವಾಹವಾಗಿ ವಾಸಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಅವರೆಲ್ಲರೂ ಭಾರತೀಯ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಇನ್ನು55 ಮಂದಿ ಸಂದರ್ಶನ ವೀಸಾದಲ್ಲಿ ಕೇರಳಕ್ಕೆ ಆಗಮಿಸಿದವರು. ಇದರ ಹೊರತಾಗಿ ಮೆಡಿಕಲ್ ವೀಸಾದಲ್ಲಿ ಮೂರು ಮಂದಿ ಆಗಮಿಸಿದ್ದಾರೆ.

ಈ ನಡುವೆ ಸಂದರ್ಶನ ವೀಸಾದಲ್ಲಿ ಮತ್ತು ಮೆಡಿಕಲ್ ವೀಸಾದಲ್ಲಿ ಕೇರಳಕ್ಕೆ ಆಗಮಿಸಿದವರು ಏಪ್ರಿಲ್ 29 ರೊಳಗಾಗಿ ಭಾರತ ಬಿಟ್ಟು ತೆರಳಬೇಕೆಂದು ಆದೇಶಿಸಲಾಗಿದೆ.

ಇನ್ನೊಂದೆಡೆ ಮೆಡಿಕಲ್ ವೀಸಾದಲ್ಲಿ ಆಗಮಿಸಿ ಕೇರಳದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಕ್ ಪ್ರಜೆಗಳು ತಮ್ಮ ಚಿಕಿತ್ಸೆ ಮುಗಿಯುವ ತನಕ ಇಲ್ಲೇ ಉಳಿಯಬೇಕಾಗಿದ್ದಲ್ಲಿ ಅದಕ್ಕೆ ಕೇಂದ್ರ ಗೃಹ ಖಾತೆಯ ಅನುಮತಿ ಕಡ್ಡಾಯವಾಗಿದೆ.

ವೀಸಾ ಇಲ್ಲದೆ ಅಕ್ರಮವಾಗಿ ಕೇರಳಕ್ಕೆ ಆಗಮಿಸಿದ ಓರ್ವ ಪಾಕಿಸ್ತಾನಿ ಪೌರನನ್ನು ಪೊಲೀಸರು ಈಗಾಗಲೇ ಬಂಽಸಿ ಸಮಗ್ರ ತನಿಖೆಗೊಳಪಡಿಸಿದ್ದಾರೆ.

ಆತ ಈಗ ತೃಶ್ಶೂರು ಜೈಲಿನಲ್ಲಿದ್ದಾನೆ. ವೀಸಾ ಸಮಯ ವ್ಯಾಪ್ತಿ ಮುಗಿದರೂ ಭಾರತ ಬಿಡದ ಪಾಕ್ ಪ್ರಜೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಗೂ ಮಾಹಿತಿ ಕಳುಹಿಸಲಾಗಿದೆ.

prajaprabhat

Recent Posts

ವಿದ್ಯಾರ್ಥಿ ವೇತನ ಕೈಪಿಡಿ: ಮಿರೇ ಅಸೆಟ್ ಫೌಂಡೇಷನ್‌

ಮಿರೇ ಅಸೆಟ್ ಫೌಂಡೇಷನ್‌ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…

4 hours ago

AllA ಅವರ “ಯೋಗ ಸಮಾವೇಶ” ಕಾರ್ಯಾಗಾರ ಇಂದು ಪ್ರಾರಂಭವಾಗಿದೆ

ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…

5 hours ago

ಸಿಕ್ಕಿಂನ ಭೂಕುಸಿತ ಪ್ರದೇಶಗಳಿಂದ 28 ನಾಗರಿಕರು ಮತ್ತು 20 ಸೈನಿಕರನ್ನು ವಿಮಾನದ ಮೂಲಕ ರಕ್ಷಿಸಲಾಗಿದೆ.

ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ…

5 hours ago

ಪ್ರತ್ಯೇಕತೆಯಿಂದ ನಾವೀನ್ಯತೆಯವರೆಗೆ – ಸೇವಾ, ಸುಶಾಸನ್, ಗರೀಬ್ ಕಲ್ಯಾಣ್ ಅಡಿಯಲ್ಲಿ ಒಂದು ದಶಕದ ಪರಿವರ್ತನೆ.

ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…

5 hours ago

ಗ್ರಾ.ಪಂ.ಗಳಲ್ಲಿ ಅರ್ಹ ಆಸ್ತಿಗಳಿಗೆ ಇ-ಸ್ವತ್ತು ಅಭಿಯಾನ : ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…

5 hours ago

ರಾಜ್ಯದಲ್ಲಿ ನಾಳೆಯಿಂದ ಭಾರೀ ಮಳೆ’ ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…

8 hours ago