ಕೆಸ್ತೂರು ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ

ಯಳಂದೂರು.30.ಜೂನ್ .25:- ತಾಲ್ಲೂಕಿನ ಕೆಸ್ತೂರು ಗ್ರಾಮದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ 2024-2025 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅಂಬೇಡ್ಕರ್ ಸಂಘದ ವತಿಯಿಂದ  ಭಾನುವಾರ ಆಯೋಜಿಸಲಾಗಿತ್ತು.


ದೈಹಿಕ ಶಿಕ್ಷಕರಾದ ಕುಮಾರ್ ನಾಯಕ್ ಮಾತನಾಡಿ.
ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರ ಮಾಡುವ  ಉದ್ದೇಶ ಉಳಿದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಹಾಗೂ ಅವರು ಕೂಡ ಉತ್ತಮವಾದ ಅಂಕವನ್ನು ಗಳಿಸಬೇಕೆಂಬ ಆಶಯವನ್ನು ಹೊಂದಿಸಲಾಗುತ್ತದೆ.


ನಾವು ಏನಾದರು ಸಾಧನೆ ಮಾಡಬೇಕಾದರೆ ಹಾಗೂ ಸಮಾಜದಲ್ಲಿ ಏನಾದರೂ ಬದಲಾವಣೆ ಮಾಡಬೇಕಾದರೆ  ಮೊದಲು ಶಿಕ್ಷಿತರಾಗಬೇಕು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರು ಶಿಕ್ಷಣ ಸಂಘಟನೆ ಹೋರಾಟ ಎಂಬ ಅಸ್ತ್ರದ ಮೂಲಕ ಸಮಾಜವನ್ನು ಬದಲಾಯಿಸಿದರು.

ಅಂಬೇಡ್ಕರ್ ರವರು ಶಿಕ್ಷಣವನ್ನು ಪಡೆದು ಕೊಳ್ಳಬೇಕಾದರೆ ಅನೇಕ ಸಮಸ್ಯೆಗಳನ್ನು ಅನುಭವಿಸಿದರು ಅವರು ಮಹಾನ್ ವ್ಯಕ್ತಿಯಾಗುವುದಕ್ಕೆ ಕಾರಣ ಬಡತನ, ಶೋಷಣೆ, ಅಸಮಾನತೆ ಇದನ್ನು ನಿರ್ಮೂಲನೆ ಮಾಡಬೇಕೆಂದು ಉತ್ತಮ ಶಿಕ್ಷಣವನ್ನು ಪಡೆದು ದೇಶಕ್ಕೆ ಉತ್ತಮವಾದ ಸಂವಿಧಾನವನ್ನು ರಚಿಸಿ ವಿಶ್ವ ಜ್ಞಾನಿಯಾದರು ಇವರೆ ನಮಗೆ ಸ್ಪೂರ್ತಿ ಇವರ ತತ್ವ ಸಿದ್ದಾಂತಗಳನ್ನು ನಾವುಗಳು ಮೈಗೂಡಿಸಿಕೊಳ್ಳಬೇಕು.

ವಿದ್ಯಾರ್ಥಿಗಳು ಸಮಾಜದಲ್ಲಿ ಮಾದರಿಯಾಗಿ  ಬದುಕಬೇಕು ಹಾಗೂ  ರಾಷ್ಟ್ರವನ್ನು ಮುನ್ನೇಡಿಸುವಂತಹ ಕಾರ್ಯದಲ್ಲಿ ತೊಡಗಬೇಕು ಎಂದರು.

ವಿದ್ಯಾರ್ಥಿಗಳನ್ನು ಗ್ರಾಮದ ಯಜಮಾನರು ಮುಖಂಡರು ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಉಮಾಶಂಕರ್,  ಗ್ರಾಮಪಂಚಾಯತಿ ಸದಸ್ಯರಾದ ಗುರುಲಿಂಗಯ್ಯ, ಮಹೇಂದ್ರ, ಪ್ರಸಾದ್, ವಿಚಾರವಾದಿ ಕೇಶವಮೂರ್ತಿ, ಯಜಮಾನರುಗಳಾದ ನಾಗರಾಜು, ದೊರೆಸ್ವಾಮಿ, ಜಯರಾಜು,   ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಸಚಿನ್. ಕಾರ್ಯದರ್ಶಿ ಮಹೇಂದ್ರ, ಕಿರಣ್  ಜೆ, ಸಂಜಯ್ ರಾಜ್, ಶಿವಕುಮಾರ್, ಸಾಗರ್ ಸಂದೀಪ್, ಶಿವು,
ಮುಖಂಡರಾದ ಸಿದ್ದರಾಜು, ರಾಜು, ಮಧು, ಚಿನ್ನಸ್ವಾಮಿ ಕೆ  ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು

_ ಪ್ರಸನ್ನಕುಮಾರ್ ಕಸ್ತೂರಿ

prajaprabhat

Recent Posts

ರೈಲ್ವೇ ನೇಮಕಾತಿ ಮಂಡಳಿಯಿಂದ 6,238 ಹುದ್ದೆಗಳ ಭರ್ತಿಗೆ ಅರ್ಜಿ

ಭಾರತಿಯ ರೈಲ್ವೆಯಲ್ಲಿ ನೇಮಕಾತಿ ಮಂಡಳಿ(RRB) ಭಾರತೀಯ ರೈಲ್ವೇಯಲ್ಲಿ 6,238 ವಿವಿಧ ತಾಂತ್ರಿಕ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಜೂನ್ 28 ರಿಂದ…

4 hours ago

‘SSC’ ಯಿಂದ 1075 ಹುದ್ದೆಗಳಿಗೆ ಅರ್ಜಿ ಆಹ್ವಾನ.

Staff Selection Commission ಬ್ಬಂದಿ ಆಯ್ಕೆ ಆಯೋಗ ವತಿಯಿಂದ ವಿವಿಧ, ಹುದ್ದೆಗಳು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ…

8 hours ago

ರಾಜ್ಯದಲ್ಲಿ ಮತ್ತೆ ಹೊಸ ಜಿಲ್ಲೆಗಳ ರಚನೆ?

ಬೆಂಗಳೂರು.30.ಜೂನ್.25:- ಕೇಂದ್ರ ಸರ್ಕಾರ ರಾಜ್ಯದಲ್ಲಿ ಹೊಸ ಜಿಲ್ಲೆ, ತಾಲೂಕು ರಚನೆಗೆ ಮಾಹಿತಿ ಕೇಳಿದಾರೆ. ಹೌದು, ಈಗಾಗಲೇ ತುಮಕೂರನ್ನು ಮೂರು ಭಾಗ…

12 hours ago

ವಾಹನ ಸವಾರರ ಗಮನಕ್ಕೆ: ಜುಲೈ 2ರ ವರೆಗೆ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ!

ಕದಿರೇನಹಳ್ಳಿ ಅಂಡರ್ ಪಾಸ್ ಬಳಿ ಸರ್ವಿಸ್ ರಸ್ತೆಯಲ್ಲಿ BWSSB ಕಾಮಗಾರಿ ನಡೆಯುತ್ತಿರುವುದರಿಂದ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದೆ, ಪರ್ಯಾಯ…

12 hours ago

CBSE National Teacher Award 2025: ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ  ಆರಂಭ.

ಹೊಸ ದೆಹಲಿ.30.ಜೂನ್.25:- ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಪ್ರಾರಂಭವಾಗಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕ…

13 hours ago

ರೈಲು ಹೊರಡುವ 8 ಗಂಟೆಗಳ ಮೊದಲು ರೈಲ್ವೆ ಇಲಾಖೆಯು ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸಲಿದೆ.

ಹೊಸ ದೆಹಲಿ.30.ಜೂನ್.25:- ರೈಲು ನಿರ್ಗಮನಕ್ಕೆ ಎಂಟು ಗಂಟೆಗಳ ಮೊದಲು ಮೀಸಲಾತಿ ಚಾರ್ಟ್‌ಗಳನ್ನು ಸಿದ್ಧಪಡಿಸುವ ಅನುಷ್ಠಾನವನ್ನು ಪ್ರಾರಂಭಿಸಲು ರೈಲ್ವೆ ಸಚಿವ ಅಶ್ವಿನಿ…

13 hours ago