ಕಲಬುರ್ಗಿ ಬೀದರ್ ಯಾದಗಿರಿ ಶಾಶ್ವತ ನೀರಾವರಿ ಹೋರಾಟ ಸಮಿತಿ

ಕಲಬುರ್ಗಿ ಬೀದರ್ ಯಾದಗಿರಿ ಶಾಶ್ವತ ನೀರಾವರಿ ಹೋರಾಟ ಸಮಿತಿ

ಆತ್ಮೀಯ ರೈತ ಬಾಂಧವರೇ,
            
         ಕಲ್ಬುರ್ಗಿ ಬೀದರ್ ಯಾದಗಿರ ಜಿಲ್ಲೆಗಳಲ್ಲಿ ಬರುವ ಮಧ್ಯಮ ನೀರಾವರಿ ಯೋಜನೆಗಳು ಭೀಮಾ ಏತ ನೀರಾವರಿ (ಆಫ್ಜಲ್ಪುರ) , ಅಮರ್ಜಾ(ಆಳಂದ್),ಚುಳುಕಿ ನಾಲಾ(ಬಸವಕಲ್ಯಾಣ್), ಕಾರಂಜಾ(ಬೀದರ್), ಚಂದ್ರಂಪಳ್ಳಿ(ಚಿಂಚೋಳಿ), ಲೋವರ್ ಮುಲ್ಲಾ ಮರಿ(ಚಿಂಚೋಳಿ), ಅಪ್ಪರ್ ಮುಲ್ಲಾ ಮರಿ(ಹುಮ್ನಾಬಾದ್), ಗಂಡೋರಿನಾಲಾ(ಕಮಲಪುರ್), ಬೆಣ್ಣೆ ತೊರ(ಚಿತಾಪುರ್), ಹತ್ತಿಕುಣಿ(ಯಾದಗಿರಿ), ಸೌದಾಗರ್ (ಯಾದಗಿರ) 
   
ಕರ್ನಾಟಕ ನೀರಾವರಿ ನಿಗಮ ವೃತ್ತ ಕಛೇರಿ 01, 06 ವಿಭಾಗ ಕಚೇರಿಗಳನ್ನು ಒಳಗೊಂಡಿರುತ್ತದೆ.  ಕಲ್ಬುರ್ಗಿ ವ್ಯಾಪ್ತಿಗೆ 03 ಜಿಲ್ಲೆಗಳು 18 ತಾಲೂಕ, 14 ವಿಧಾನಸಭಾ ಕ್ಷೇತ್ರಗಳು, 02 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುತ್ತವೆ.
        
        1972-73 ರಿಂದ 2024-25 ವರೆಗೆ ಜಲ ಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮದಿಂದ ಯೋಜನೆಗಳನ್ನು ರೂಪಿಸಲಾಯಿತು 03 ಜಿಲ್ಲೆಗಳಲ್ಲಿ 75 ಸಾವಿರ ಹೆಕ್ಟಾರ್ ಜಮೀನುಗಳಿಗೆ ನೀರು ಒದಗಿಸಲು ಮಧ್ಯಮ ಕೆರೆ (ಡ್ಯಾಮ್ ) ನಿರ್ಮಾಣ ಮಾಡಲಾಯಿತು,       ಕೆರೆ ಇದೆ, ನೀರಿದೆ, ಕಾಲುವೆಗಳಿವೆ, ರೈತರ ಹೊಲಗಳಿಗೆ ನೀರು ಮುಟ್ಟಿಲ್ಲಾ ಏಕೆ? ?         

                 ನೀರಾವರಿ ಸೌಲಭ್ಯ ಓದಗಿಸುವಲ್ಲಿ ಕರ್ನಾಟಕ ರಾಜ್ಯ ಸರ್ಕಾರ ವಿಫಲವಾಗಿದೆ…..  ವಿತರಣಾ ಕಾಲುವೆ, ಮರಿ ಕಾಲುವೆಯಿಂದ ನೀರನ್ನು ಸದುಪಯೋಗ ಪಡೆಸಿಕೊಳ್ಳುವ ಸಲುವಾಗಿ ಜಾಗೃತಿಯ ಕೊರತೆ ಕಂಡು ಬರುತ್ತದೆ ಮತ್ತು ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ಸಂಪೂರ್ಣವಾಗಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ರೈತರು ಎಚ್ಚೆತ್ತುಕೊಂಡು ಸಂಗ್ರಹವಾಗಿಟ್ಟ ನೀರನ್ನು ಬಳಸಿಕೊಳ್ಳಲು ಸನ್ನದ್ಧರಾಗಬೇಕಿದೆ.   

             ನಾವು ಎಚ್ಚರಗೊಳ್ಳುವುದಲ್ಲದೆ ಜವಾಬ್ದಾರಿಯುತ ಅಧಿಕಾರ ಹೊಂದಿದವರನ್ನು ಎಚ್ಚರಿಸಬೇಕಾಗಿದೆ. ಯಾವುದೇ ಪಕ್ಷಗಳ ಸರ್ಕಾರಗಳು ಆಡಳಿತಕ್ಕೆ ಬಂದರೂ ನೀರಾವರಿ ಕುರಿತು ಗಮನಹರಿಸದೆ… ಇರುವುದು ರೈತರ ದುರದೃಷ್ಟಕರ ಸಂಗತಿಯಾಗಿದೆ.

ನೀರು ಬಳಕೆದಾರರ ಸಂಘಗಳು, ಕಾಡ ಕಛೇರಿ, ಶಾಸಕರು, ಲೋಕಸಭೆ ಸದಸ್ಯರುಗಳು, ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಹಾಗೂ ಗ್ರಾಮದ ಪ್ರಮುಖರು ನೀರಾವರಿ ಸೌಲಭ್ಯ ಪಡೆಯಲು ಅವಿರತ ಹೋರಾಟ ಮಾಡುವುದು ಅವಶ್ಯಕವಾಗಿದೆ. ನದಿಗಳ ನೀರನ್ನು ಬಳಸಿಕೊಳ್ಳುವಲ್ಲಿ ರಾಜ್ಯ ರಾಜ್ಯಗಳ ಮಧ್ಯ ಸಂಘರ್ಷ ನಡೆಯುತ್ತಿದೆ,  ಆದರೆ ನಾವುಗಳು ಸಂಗ್ರಹವಾಗಿದ್ದ ನೀರನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ  ದಯಮಾಡಿ ಕರ್ನಾಟಕ ಸರ್ಕಾರವೂ  ಕಾಲುವೆ, ವಿತರಣಾ ಕಾಲುವೆ, ಸಣ್ಣ ಸಣ್ಣ ಕಾಮಗಾರಿಗಳನ್ನು ಸರಿಪಡಿಸಿ ಮೇಲೆ ತಿಳಿಸಿದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳ್ಳುವಂತೆ ಕರ್ನಾಟಕ ನೀರಾವರಿ ನಿಗಮ ಮಂಡಳಿಯವರು ಒಳ್ಳೆಯ ರೀತಿಯಿಂದ ಕೆಲಸ ಮಾಡಿದ್ದೆ ಆದರೆ ಕಡಿಮೆ ನೀರು ಅಧಿಕ ಇಳುವರಿ, ಒಳ್ಳೆಯ ಬೆಳೆ, ಪ್ರಾಣಿ,ಪಕ್ಷಿ,ಪರಿಸರ ಹಾಗೂ “ಹಸಿರು ನಾಡು“ಎಂದು  ಘೋಷಿಸುವಂತೆ ತಾವೆಲ್ಲರೂ ಆಗ್ರಹಿಸಬೇಕೆಂದು ವಿನಂತಿ..
        
   _ಭೀಮಶೆಟ್ಟಿ  ಮುಕ್ಕಾ

prajaprabhat

Recent Posts

ಭೂಕುಸಿತದಿಂದ ಹಾನಿಗೊಳಗಾದ ಚಾಟೆನ್‌ನಿಂದ ಸಿಕ್ಕಿಬಿದ್ದ ಸ್ಥಳೀಯರು ಮತ್ತು ಟ್ಯಾಕ್ಸಿ ಚಾಲಕರನ್ನು ಸಿಕ್ಕಿಂ ಸರ್ಕಾರ ವಿಶೇಷ ಹೆಲಿಕಾಪ್ಟರ್ ಮೂಲಕ ರಕ್ಷಿಸಿದೆ

ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್‌ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…

6 minutes ago

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಣೆ; ಪ್ರತ್ಯೇಕ ಸ್ಥಳಗಳಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯನ್ನು ಐಎಂಡಿ ಮುನ್ಸೂಚನೆ ನೀಡಿದೆ.

ಸಿಕ್ಕಿಂ ಸರ್ಕಾರವು ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ ಸಿಲುಕಿರುವ ಸ್ಥಳೀಯರು, ಪ್ರವಾಸಿ ಟ್ಯಾಕ್ಸಿ ಚಾಲಕರು ಮತ್ತು ಕೆಲವು ಸರ್ಕಾರಿ ಅಧಿಕಾರಿಗಳನ್ನು ವಾಯು…

9 minutes ago

ಎನ್‌ಡಿಎಯ 11 ವರ್ಷಗಳ ಪ್ರಯಾಣದ ಪ್ರಮುಖ ಆಧಾರಸ್ತಂಭ ಮಹಿಳಾ ನೇತೃತ್ವದ ಅಭಿವೃದ್ಧಿ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

ಹೊಸ ದೆಹಲಿ.08.ಜೂನ್.25:-ಅಭಿವೃದ್ಧಿ ಹೊಂದಿದ ಭಾರತದತ್ತ ಮಹಿಳೆಯರು ವಹಿಸಿರುವ ಪರಿವರ್ತನಾತ್ಮಕ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಎತ್ತಿ ತೋರಿಸಿದರು, ಕಳೆದ…

5 hours ago

ರಾಜ್ಯ ‘ಸರ್ಕಾರಿ ನೌಕರರಿಗೆ ‘ಆರೋಗ್ಯ ಸಂಜೀವಿನಿ ಯೋಜನೆ’ ಲಾಭ ಪಡೆಯಲು ಈ ದಾಖಲೆಗಳು ಕಡ್ಡಾಯ |

ಬೆಂಗಳೂರು.08.ಜೂನ್.25:- ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಕುಟುಂಬದವರಿಗೂ ಉಚಿತ ಆರೋಗ್ಯ ವಿಮಾ'ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದೆ.ಎಂಬುದಾಗಿ ಕರೆಯುವಂತ ಯೋಜನೆಯಡಿ…

7 hours ago

ಕರ್ಣಾಟಕ ರಾಜ್ಯದ ಈ 7 ಜಿಲ್ಲೆಗಳಲ್ಲಿ ಜನನಕ್ಕಿಂತ ಮರಣ ಪ್ರಮಾಣ ಭಾರಿ ಏರಿಕೆ! ಕೇಂದ್ರದಿಂದ ಆತಂಕಕಾರಿ ವರದಿ!

ಹೊಸ ದೆಹಲಿ.08.ಜೂನ್.25:-ದೇಶದಲ್ಲಿ 49 ಜಿಲ್ಲೆಗಳಲ್ಲಿ ಜನಿಸಿದ ಮಕ್ಕಳ ಸಂಖ್ಯೆಗಿಂತ ಸಾವಿನ ಸಂಖ್ಯೆ ಹೆಚ್ಚಾಗಿದೆ. 2021 ರ ಭಾರತದ ನಾಗರಿಕ ನೋಂದಣಿ…

11 hours ago

ತೋಟಗಾರಿಕೆ ವಿಶ್ವವಿದ್ಯಾಲಯ ಘಟಿಕೋತ್ಸವ ಜೂನ್ 10ರಂದು ನಡೆಯಲಿದೆ.

ಬಾಗಲಕೋಟೆ.07.ಜೂನ್.25:- ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬಾಗಲಕೋಟ  ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭ ಇದೇ ತಿಂಗಳು ಜೂನ್ 10 ರಂದು ಬೆಳಿಗ್ಗೆ…

19 hours ago