ಕಲಬುರಗಿ.04.ಮೇ.25:- ವಿದ್ಯಾರ್ಥಿನಿ ವಿದ್ಯಾಶ್ರೀ ನಾಯಕ್ ತಂದೆ ಅಗಲಿಕೆ ದುಃಖದಲ್ಲಿ SSLC ಪರೀಕ್ಷೆ ಬರೆದ ವಿದ್ಯಾಶ್ರೀಗೆ ಶೇ 95 ಅಂಕ ಕಲಬುರಗಿ: ಪರೀಕ್ಷೆ ಮಧ್ಯೆಯೇ ತಂದೆಯ ಅಗಲಿಕೆಯ ದುಃಖವನ್ನು ಸಹಿಸಿಕೊಂಡು SSLC ಪರೀಕ್ಷೆ ಬರೆದ ನಗರದ ಎಸ್ಆರ್ಎನ್ ಮೆಹತಾ ಶಾಲೆಯ ವಿದ್ಯಾರ್ಥಿನಿ ವಿದ್ಯಾಶ್ರೀ ನಾಯಕ್ ಶೇ 95.36 ಅಂಕ ಗಳಿಸಿದ್ದಾಳೆ.
ನಗರದ ಬಂಬೂ ಬಜಾರ್ ಸಮೀಪದ ಗೋಕುಲ ನಗರದ ನಿವಾಸಿ ಪ್ರಕಾಶ್ ನಾಯಕ್ ಅವರು ಮಾರ್ಚ್ 26ರಂದು ಹೃದಯಾಘಾತದಿಂದ ನಿಧನರಾಗಿದ್ದರು.
ಅದೇ ದಿನ ಪ್ರಕಾಶ್ ಅವರ ಮಗಳು ವಿದ್ಯಾಶ್ರೀಯ ಕನ್ನಡ ಭಾಷಾ ಪರೀಕ್ಷೆ ಇತ್ತು. ತಂದೆಯ ಸಾವಿನ ಸುದ್ದಿಯ ಮಧ್ಯೆಯೇ ಪರೀಕ್ಷೆ ಬರೆದು ವಾಪಸಾದ ವಿದ್ಯಾಶ್ರೀ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಳು. ನಂತರದ ಮೂರು ಪರೀಕ್ಷೆಗಳನ್ನು ಬರೆಯುತ್ತಾಳೋ ಇಲ್ಲವೋ ಎಂಬ ಆತಂಕದಲ್ಲಿಯೇ ವಿದ್ಯಾರ್ಥಿನಿಯ ತಾಯಿ ಸಂಗೀತಾ ನಾಯಕ್, ಚಿಕ್ಕಪ್ಪ ಸುನಿಲ್ ನಾಯಕ್ ಅವರು ಪರೀಕ್ಷೆ ಬರೆಯುತ್ತೀಯಾ ಎಂದು ಕೇಳಿದ್ದಾರೆ. ಇದಕ್ಕೆ ಒಪ್ಪಿಗೆ ಸೂಚಿಸಿದ ವಿದ್ಯಾಶ್ರೀ ಉಳಿದ ಮೂರು ಪರೀಕ್ಷೆಗಳನ್ನೂ ಬರೆದಿದ್ದಾಳೆ.
ಶುಕ್ರವಾರ ಪ್ರಕಟವಾದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಶೇ 95.36 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ. ‘ನನ್ನ ಅಣ್ಣ ಪ್ರಕಾಶ್ ನಾಯಕ್ ಇಟ್ಟಿಗೆ ಭಟ್ಟಿ ಉದ್ಯಮ ನಡೆಸುತ್ತಿದ್ದರು. ಅತ್ತಿಗೆ ಸಂಗೀತಾ ಅವರು ಗೃಹಿಣಿಯಾಗಿದ್ದಾರೆ.
ಒಟ್ಟು ನಾಲ್ವರು ಮಕ್ಕಳ ಪೈಕಿ ವಿದ್ಯಾಶ್ರೀ ಎರಡನೆಯವಳು. ತಂದೆಯ ಅಗಲಿಕೆಯ ದುಃಖವನ್ನು ಸಹಿಸಿಕೊಂಡೂ ಪರೀಕ್ಷೆ ಬರೆದಿದ್ದು ನಮಗೆ ಅಚ್ಚರಿ ಎನಿಸಿತ್ತು. ಛಲ ಬಿಡದೇ ಪರೀಕ್ಷೆ ಬರೆದು ಉತ್ತಮ ಸಾಧನೆ ಮಾಡಿದ್ದಾಳೆ’ ಎಂದು ವಿದ್ಯಾರ್ಥಿನಿಯ ಚಿಕ್ಕಪ್ಪ ಸಂತೋಷ ನಾಯಕ ಪ್ರಜಾಪ್ರಭಾತ ಕನ್ನಡ ಸುದ್ದಿ 24X7 ಗೆ ಮಾಹಿತಿ ನೀಡಿದರು. ಸುನೀಲ್ ಅವರ ಪುತ್ರಿ ವಾಣಿಶ್ರೀ ನಾಯಕ್ ಸಹ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 81ರಷ್ಟು ಅಂಕ ಪಡೆದಿದ್ದಾಳೆ.
ಬೆಂಗಳೂರು.10.ಜೂನ್.25:-ರಾಜ್ಯಾದ್ಯಂತ ಶಾಲೆಗಳು ಪುನಾರಂಭವಾಗಿದ್ದು, ಪ್ರಾಥಮಿಕ ಹಾಗೂ ಪ್ರೌಢ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಸಂಬಂಧಿಸಿದ ಪೋಸ್ಟರ್ ಗಳನ್ನು ಪ್ರದರ್ಶಿಸುವ ಬಗ್ಗೆ…
ವಿಜಯಪುರ.10.ಜೂನ್.25:-ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮಹಿಳಾ ಸಬಲೀಕರಣಕ್ಕಾಗಿ ಹತ್ತು ಹಲವು ವಿನೂತನ ಮಹಿಳೆಯರಿಗೆ ಉನ್ನತ ಶಿಕ್ಷಣದ ಅವಕಾಶಗಳ ಹೆಬ್ಬಾಗಿಲನ್ನು ತೆರೆದಿರುವ ಶೈಕ್ಷಣಿಕ…
ಜೂನ್ 9 ರಂದು 14,582 ಹುದ್ದೆಗಳಿಗೆ SSC CGL 2025 ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು…
ಶ್ರೀಲಂಕಾ ಇಂದು ಪವಿತ್ರ ಪೋಸನ್ ಪೋಯ ಹಬ್ಬವನ್ನು ಆಚರಿಸುತ್ತಿದೆ, ಇದು 2,000 ವರ್ಷಗಳ ಹಿಂದೆ ಬೌದ್ಧಧರ್ಮದ ಐತಿಹಾಸಿಕ ಆಗಮನವನ್ನು ಸೂಚಿಸುತ್ತದೆ.…
ಹೊಸ ದೆಹಲಿ.10.ಜೂನ್.25:- ಕರಾವಳಿ ಕರ್ನಾಟಕ ಮತ್ತು ಕರ್ನಾಟಕದ ಒಳನಾಡು, ಕೇರಳ, ಮಾಹೆ, ಒಡಿಶಾ, ರಾಯಲಸೀಮಾ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್…
ಹೊಸ ದೆಹಲಿ.10.ಜೂನ್.25:- ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ…