ಕರ್ನಾಟಕ ಹೊಲೆಯ-ಮಹರ್ ಒಳಮೀಸಲಾತಿ ತಾಲೂಕಾ ಸಮಿತಿ ಔರಾದ (ಬಾ) ಬೆಂಗಳೂರು ಚಲೋ!!

໖: 23-03-2025 ಈ ಮೂಲಕ ಆದರಣೀಯ ಡಾ. ಅಂಬೇಡ್ಕರ್ ಅಭಿಮಾನಿ ಹಾಗೂ ಪರಿಶಿಷ್ಟ ಜಾತಿಯ ಹೊಲೆಯ(ಬಲಗೈ) ಬಾಂಧವರಲ್ಲಿ ಅರಿಕೆ ಮಾಡಿಕೊಳ್ಳುವುದೇನಂದರೆ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕೊಡಲು ರಚಿಸಿದ ಸದಾಶಿವ ಆಯೋಗ ವರದಿ ಅವೈಜ್ಞಾನಿಕವಾಗಿದ್ದು ಅದನ್ನು ಸರಿಪಡಿಸಲು, ಪ್ರಸ್ತುತ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ರವರ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗ ರಚಿಸಿದೆ.ಸದರಿ ಆಯೋಗ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಬೇಕಾಗಿದೆ. ಈ ವರದಿಯಂತೆ ಪರಿಶಿಷ್ಟ ಜಾತಿಗಾಗಿ ನೀಡಿರುವ 15% ಮೀಸಲಾತಿಯನ್ನು 4 ವರ್ಗಗಳಲ್ಲಿ ವಿಂಗಡಿಸಿದೆ.

1) ಪರಿಶಿಷ್ಟ ಜಾತಿ ಎಡಗೈ ಗುಂಪಿಗೆ. 6%,

2) ಪರಿಶಿಷ್ಟ ಜಾತಿ ಬಲಗೈ ಗುಂಪಿಗೆ : 5%.

3) ಪರಿಶಿಷ್ಟ ಜಾತಿ ಸ್ಪರ್ಷ ಜಾತಿ ಗುಂಪಿಗೆ 3%.

4) ಪರಿಶಿಷ್ಟ ಜಾತಿ ಮುಂದುವರೆದ ಗುಂಪಿಗೆ 1% ಹೀಗೆ ಹಂಚಿಕೆ ಮಾಡಿ ಸರ್ಕಾರದ ಅನುಮೋದನೆಗಾಗಿ ರವಾನಿಸಲಿದೆ.

ಆದರೆ ಆತ್ಮೀಯರೇ, ಬೀದರ್, ಕಲಬುರ್ಗಿ ಜಿಲ್ಲೆಯಲ್ಲಿ ಹೆಚ್ಚಾಗಿ ಕರೆಯಲ್ಪಡುವ ಹೊಲೆಯ, ಹೊಲೇರ, ಹಾಗೂ ಹೊಲ್ಯಾ….. ಪರಿಶಿಷ್ಟ ಜಾತಿಯ ಬಲಗೈ ಗುಂಪನ್ನು ಪರಿಶಿಷ್ಟ ಜಾತಿ ಮುಂದುವರೆದ ಗುಂಪು ಎಂದು ಪರಿಗಣಿಸಿ IN ರಲ್ಲಿ ಸೇರಿಸಿದೆ.

ಆತ್ಮೀಯರೇ ಇದು ಈ ಭಾಗದ ಬಲಗೈ ಪ್ರಮುಖ ಜಾತಿಯ ಹೊಲೆಯ ಸಮುದಾಯಕ್ಕೆ ಚೇತರಿಸಿಕೊಂಡು ಮೇಲೆಳದಂತಹ ಬರೆ ಹಾಕಿದೆ. ಇದನ್ನು ಪ್ರಶ್ನಿಸದೆ ಸುಮ್ಮನೆ ಕುಳಿತರೆ, “ಮೌನಂ ಸಮ್ಮತಿ ಲಕ್ಷಣಂ” ಎಂದು ಭಾವಿಸಿ ಸದರಿ ವರದಿ ಅಂಗೀಕಾರಗೊಳಿಸಿದ್ದರೆ ನಮ್ಮ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸುವುದು.

ಸದರಿ ವರದಿಯ ಬಗ್ಗೆ ಆಕ್ಷೇಪಣೆಗಳೇನಾದೂರು ಇದ್ದರೆ ಲಿಖಿತ ರೂಪದಲ್ಲಿ ದೂರುಗಳನ್ನು ಸಲ್ಲಿಸಲು 30ನೇ ಜನವರಿ 2025 ಕೊನೆಯ ದಿನವಾಗಿತ್ತು. ಆದರೆ ಇದರ ಬಗ್ಗೆ ಸೂಕ್ತ ಮಾಹಿತಿ ಇಲ್ಲದಿರುವುದರಿಂದ ಬಹಳಷ್ಟು ಆಕ್ಷೇಪಣೆಗಳು ಸಲ್ಲಿಸಲು ಆಗಲಿಲ್ಲ.

ಕಲಬುರ್ಗಿಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಅಧ್ಯಕ್ಷರಾದ ಡಿ.ಜಿ.ಸಾಗರ ರವರು ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಿರುತ್ತಾರೆ. ಜೊತೆಗೆ ಬೀದರ್‌ನಿಂದಲೂ ನಮ್ಮ ಸಮಾಜದ ಮುಖಂಡರಾದ ಮಾರುತಿ ಬೌದ್ಧ ಹಾಗೂ ವಿಠಲ ದಾಸ ಪ್ಯಾಗೆ ರವರು ಹಾಗೂ ಔರಾದನಿಂದ ಶಿವಕುಮಾರ ಕಾಂಬಳೆ, ಪ್ರಕಾಶ ಭಂಗಾರೆ, ದಿನೇಶ ಶಿಂದೆ. ಆನಂದ ಕಾಂಬಳೆ, ವಿನೋದ ಡೋಳೆ, ರವಿ ಯರನಳೆ, ದೀಪಕ ಯರನಳೆ, ನೇತೃತ್ವದಲ್ಲಿ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಿರುತ್ತಾರೆ. ಆದಾಗ್ಯೂ ಈ ಚಳುವಳಿ ಇಷ್ಟಕ್ಕೆ ಬಿಟ್ಟರೆ ಬಾಬಾಸಾಹೇಬರು ಕೊಡಮಾಡಿ ಕೊಟ್ಟಿರುವ ಈ ಮೀಸಲಾತಿ ಸೌಲಭ್ಯ ನಮ್ಮ ಹಂತದ ವರೆಗೆ ಮಾತ್ರ ಸೀಮಿತವಾಗಿ ಮುಂಬರುವ ನಮ್ಮ ಮಕ್ಕಳು ಹಾಗೂ ಮುಂದಿನ ಪೀಳಿಗೆಗೆ ಇಲ್ಲದಂತ್ತಾಗುತ್ತದೆ.

ಸಹೋದರರ “ಕರ್ನಾಟಕ ಹೊಲೆಯ-ಮಹರ್ ಒಳಮೀಸಲಾತಿ ಸಮಿತಿ” ರಚಿಸಿಕೊಂಡು ಏಕಸದಸ್ಯ ಸಮಿತಿಯ ಅಧ್ಯಕ್ಷರಾದ ಎಚ್.ಎನ್. ನಾಗಮೋಹನದಾಸ ರವರಿಗೆ ಪರಿಶಿಷ್ಟ ಜಾತಿ ಹೊಲೆಯ ಜಾತಿಯು ಮುಂದುವರದ ಜಾತಿ ಅಲ್ಲ ಇದು ಪರಿಶಿಷ್ಟ ಜಾತಿ ಬಲಗೈ ಗುಂಪಿನ ಒಂದು ಭಾಗವೇ ಹೊರತು ಮುಂದುವರೆದ ಗುಂಪು ಅಲ್ಲ ಎಂದು ಮನವರಿಕೆ ಮಾಡಿಕೊಡಲು ದಿ.23-103-25 ರಂದು ಬೆಂಗಳೂರಿನ ವಸಂತ ನಗರದ ಅಂಬೇಡ್ಕರ ಭವನದಲ್ಲಿ ಬೃಹತ ಸಮಾವೇಶ ಏರ್ಪಡಿಸಲಾಗುತ್ತದೆ ಹೀಗಾಗಿ ಈ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಔರಾದ ತಾಲೂಕ್ಕಿನಿಂದ 300 ಜನರು ಹೋಗಲು ನಿರ್ಧರಿಸಿದವೆ.

ಹೀಗಾಗಿ ತಾವುಗಳು ಈ ಸ್ವಾಭಿಮಾನಿ ಚಳವಳಿಗೆ ಸಹಕರಿಸಬೇಕೆಂದು ವಿನಂತಿಸುತ್ತೆವೆ. ಜೈ ಭೀಮ.

prajaprabhat

Recent Posts

ಉತ್ತರಾಖಂಡದಲ್ಲಿ ಸೇನಾ ಸನ್ನದ್ಧತೆಯನ್ನು ಪರಿಶೀಲಿಸಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಐಬೆಕ್ಸ್ ತರಾನಾ 88.4 ಎಫ್‌ಎಂ ಅನ್ನು ಉದ್ಘಾಟಿಸಿದರು.

ಉತ್ತರಾಖಂಡದ ಗರ್ವಾಲ್‌ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…

51 minutes ago

ಮಿಥಿ ನದಿ ಹೂಳೆತ್ತುವ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ದಾಳಿ ನಡೆಸಿದೆ.

ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…

56 minutes ago

ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಉತ್ತರ ರೈಲ್ವೆ ಪ್ರಾರಂಭಿಸಿದೆ

ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…

1 hour ago

ಭೂಕುಸಿತದಿಂದ ಹಾನಿಗೊಳಗಾದ ಚಾಟೆನ್‌ನಿಂದ ಸಿಕ್ಕಿಬಿದ್ದ ಸ್ಥಳೀಯರು ಮತ್ತು ಟ್ಯಾಕ್ಸಿ ಚಾಲಕರನ್ನು ಸಿಕ್ಕಿಂ ಸರ್ಕಾರ ವಿಶೇಷ ಹೆಲಿಕಾಪ್ಟರ್ ಮೂಲಕ ರಕ್ಷಿಸಿದೆ

ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್‌ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…

1 hour ago

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಣೆ; ಪ್ರತ್ಯೇಕ ಸ್ಥಳಗಳಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯನ್ನು ಐಎಂಡಿ ಮುನ್ಸೂಚನೆ ನೀಡಿದೆ.

ಸಿಕ್ಕಿಂ ಸರ್ಕಾರವು ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ ಸಿಲುಕಿರುವ ಸ್ಥಳೀಯರು, ಪ್ರವಾಸಿ ಟ್ಯಾಕ್ಸಿ ಚಾಲಕರು ಮತ್ತು ಕೆಲವು ಸರ್ಕಾರಿ ಅಧಿಕಾರಿಗಳನ್ನು ವಾಯು…

1 hour ago

ಎನ್‌ಡಿಎಯ 11 ವರ್ಷಗಳ ಪ್ರಯಾಣದ ಪ್ರಮುಖ ಆಧಾರಸ್ತಂಭ ಮಹಿಳಾ ನೇತೃತ್ವದ ಅಭಿವೃದ್ಧಿ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

ಹೊಸ ದೆಹಲಿ.08.ಜೂನ್.25:-ಅಭಿವೃದ್ಧಿ ಹೊಂದಿದ ಭಾರತದತ್ತ ಮಹಿಳೆಯರು ವಹಿಸಿರುವ ಪರಿವರ್ತನಾತ್ಮಕ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಎತ್ತಿ ತೋರಿಸಿದರು, ಕಳೆದ…

6 hours ago