ಕರ್ನಾಟಕ ಹೊಲೆಯ-ಮಹರ್ ಒಳಮೀಸಲಾತಿ ತಾಲೂಕಾ ಸಮಿತಿ ಔರಾದ (ಬಾ) ಬೆಂಗಳೂರು ಚಲೋ ಬೆಂಗಳೂರು ಚಲೋ


ದಿನಾಂಕ: 23-03-2025 ಈ ಮೂಲಕ ಆದರಣೀಯ ಡಾ. ಅಂಬೇಡ್ಕರ್ ಅಭಿಮಾನಿ ಹಾಗೂ ಪರಿಶಿಷ್ಟ ಜಾತಿಯ ಹೊಲೆಯ(ಬಲಗೈ) ಬಾಂಧವರಲ್ಲಿ ಅರಿಕೆ ಮಾಡಿಕೊಳ್ಳುವುದೇನಂದರೆ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕೊಡಲು ರಚಿಸಿದ ಸದಾಶಿವ ಆಯೋಗ ವರದಿ ಅವೈಜ್ಞಾನಿಕ ವಾಗಿದ್ದು ಅದನ್ನು ಸರಿಪಡಿಸಲು, ಪ್ರಸ್ತುತ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ರವರ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗ ರಚಿಸಿದೆ.ಸದರಿ ಆಯೋಗ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಬೇಕಾಗಿದೆ.                     ಈ ವರದಿಯಂತೆ ಪರಿಶಿಷ್ಟ ಜಾತಿಗಾಗಿ ನೀಡಿರುವ 15% ಮೀಸಲಾತಿಯನ್ನು 4 ವರ್ಗಗಳಲ್ಲಿ ವಿಂಗಡಿಸಿದೆ.   

1) ಪರಿಶಿಷ್ಟ ಜಾತಿ ಎಡಗೈ ಗುಂಪಿಗೆ. 6%,                                                                                       2) ಪರಿಶಿಷ್ಟ ಜಾತಿ ಬಲಗೈ ಗುಂಪಿಗೆ:5%.                                                                                                                         3) ಪರಿಶಿಷ್ಟ ಜಾತಿ ಸ್ಪರ್ಷ ಜಾತಿಗುಂಪಿಗೆ3%.                                                                  4) ಪರಿಶಿಷ್ಟ ಜಾತಿ ಮುಂದುವರೆದ ಗುಂಪಿಗೆ 1%   ಹೀಗೆ ಹಂಚಿಕೆ ಮಾಡಿ ಸರ್ಕಾರದ ಅನುಮೋದನೆಗಾಗಿ ರವಾನಿಸಲಿದೆ.ಆದರೆ ಆತ್ಮೀಯರೇ, ಬೀದರ್, ಕಲಬುರ್ಗಿ  ಜಿಲ್ಲೆಯಲ್ಲಿ ಹೆಚ್ಚಾಗಿ ಕರೆಯಲ್ಪಡುವ ಹೊಲೆಯ,ಹೊಲೇರ, ಹಾಗೂ ಹೊಲ್ಯಾ‌‌…… ಪರಿಶಿಷ್ಟ ಜಾತಿಯ ಬಲಗೈ ಗುಂಪನ್ನು ಪರಿಶಿಷ್ಟ ಜಾತಿ ಮುಂದುವರೆದ ಗುಂಪು ಎಂದು ಪರಿಗಣಿಸಿ 1% ರಲ್ಲಿ  ಸೇರಿಸಿದೆ.                                                                                   ಆತ್ಮೀಯರೇ ಇದು ಈ ಭಾಗದ ಬಲಗೈ ಪ್ರಮುಖ ಜಾತಿಯ ಹೊಲೆಯ ಸಮುದಾಯಕ್ಕೆ ಚೇತರಿಸಿಕೊಂಡು ಮೇಲೆಳದಂತಹ  ಬರೆ ಹಾಕಿದೆ.ಇದನ್ನು ಪ್ರಶ್ನಿಸದೆ  ಸುಮ್ಮನೆ ಕುಳಿತರೆ ,” ಮೌನಂ ಸಮ್ಮತಿ ಲಕ್ಷಣಂ”ಎಂದು ಭಾವಿಸಿ ಸದರಿ ವರದಿ ಅಂಗೀಕಾರ ಗೊಳಿಸಿದ್ದರೆ ನಮ್ಮ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸುವುದು. ಸದರಿ ವರದಿಯ ಬಗ್ಗೆ          ಆಕ್ಷೇಪಣೆಗಳೇನಾದೂರು ಇದ್ದರೆ ಲಿಖಿತ ರೂಪದಲ್ಲಿ ದೂರುಗಳನ್ನು ಸಲ್ಲಿಸಲು 30ನೇ ಜನೆವರಿ 2025 ಕೊನೆಯ ದಿನ ವಾಗಿತ್ತು.ಆದರೆ ಇದರ ಬಗ್ಗೆ ಸೂಕ್ತ ಮಾಹಿತಿ ಇಲ್ಲದಿರುವುದರಿಂದ ಬಹಳಷ್ಟು ಆಕ್ಷೇಪಣೆಗಳು ಸಲ್ಲಿಸಲು ಆಗಲಿಲ್ಲ..

ಕಲಬುರ್ಗಿಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಅಧ್ಯಕ್ಷರಾದ ಡಿ.ಜಿ.ಸಾಗರ ರವರು ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಿರುತ್ತಾರೆ.ಜೊತೆಗೆ ಬೀದರ್ ನಿಂದಲೂ ನಮ್ಮ ಸಮಾಜದ  ಮುಖಂಡರಾದ  ಮಾರುತಿ ಬೌದ್ದೆ ಹಾಗೂ ವಿಠಲ ದಾಸ ಪ್ಯಾಗೆ ರವರು ಹಾಗೂ ಔರಾದನಿಂದ  ಶಿವಕುಮಾರ ಕಾಂಬಳೆ, ಪ್ರಕಾಶ ಭಂಗಾರೆ, ದಿನೇಶ ಶಿಂದೆ, ಆನಂದ ಕಾಂಬಳೆ, ವಿನೋದ ಡೋಳೆ, ರವಿ ಯರನಳೆ, ದೀಪಕ ಯರನಳೆ,  ನೇತೃತ್ವದಲ್ಲಿ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಿರುತ್ತಾರೆ.


ಆದಾಗ್ಯೂ ಈ ಚಳುವಳಿ ಇಷ್ಟಕ್ಕೆ ಬಿಟ್ಟರೆ ಬಾಬಾಸಾಹೇಬರು ಕೊಡಮಾಡಿ ಕೊಟ್ಟಿರುವ ಈ ಮೀಸಲಾತಿ ಸೌಲಭ್ಯ ನಮ್ಮ ಹಂತದ ವರೆಗೆ ಮಾತ್ರ ಸೀಮಿತವಾಗಿ  ಮುಂಬರುವ ನಮ್ಮ ಮಕ್ಕಳು ಹಾಗೂ ಮುಂದಿನ ಪೀಳಿಗೆಗೆ ಇಲ್ಲದಂತ್ತಾಗುತದೆ.ಆದ್ದರಿಂದ ಸಹೋದರರೆ  ” ಕರ್ನಾಟಕ ಹೊಲೆಯ-ಮಹರ್ ಒಳಮೀಸಲಾತಿ ಸಮಿತಿ ”  ರಚಿಸಿಕೊಂಡು ಏಕಸದಸ್ಯ ಸಮಿತಿಯ ಅಧ್ಯಕ್ಷರಾದ ಎಚ್.ಎನ್. ನಾಗಮೋಹನದಾಸ  ರವರಿಗೆ ಪರಿಶಿಷ್ಟ ಜಾತಿ ಹೊಲೆಯ ಜಾತಿಯು ಮುಂದುವರೆದ ಜಾತಿ ಅಲ್ಲ ಇದು ಪರಿಶಿಷ್ಟ ಜಾತಿ ಬಲಗೈ ಗುಂಪಿನ ಒಂದು ಭಾಗವೇ ಹೊರತು ಮುಂದುವರೆದ ಗುಂಪು ಅಲ್ಲ ಎಂದು ಮನವರಿಕೆ ಮಾಡಿಕೊಡಲು ದಿನಾಂಕ 23-03-25 ರಂದು ಬೆಂಗಳೂರಿನ ವಸಂತ ನಗರದ ಅಂಬೇಡ್ಕರ ಭವನದಲ್ಲಿ ಬ್ರಹತ ಸಮಾವೇಶ ಏರ್ಪಡಿಸಲಾಗುತ್ತದೆ ಹೀಗಾಗಿ ಈ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಔರಾದ ತಾಲೂಕ್ಕಿನಿಂದ 300 ಜನರು ಹೋಗಲು ನಿರ್ಧರಿಸಿದೆವೆ. ಹೀಗಾಗಿ ತಾವುಗಳು ಈ ಸ್ವಾಭಿಮಾನಿ ಚಳವಳಿಗೆ ಸಹಕರಿಸಬೇಕೆಂದು ವಿನಂತಿಸುತ್ತೆವೆ.          

                                                     ಜೈಭೀಮ.                                                                           

ಗೌರವ ಅಧ್ಯಕ್ಷರು : ಝರೇಪ್ಪಾ ವರ್ಮಾ
ಅಧ್ಯಕ್ಷರು : ಶಿವಕುಮಾರ ಕಾಂಬಳೆ
ಕಾರ್ಯಧ್ಯಕ್ಷರು : ಪ್ರಕಾಶ ಭಂಗಾರೆ
ಪ್ರಧಾನ ಕಾರ್ಯದರ್ಶಿ ಗಳು: ಪ್ರವೀಣ ಕಾರಂಜೆ
ವಿಶಾಲ ಶೇಳಕೆ
ಖಜಾಂಚಿ : ಸೋಪಾನರಾವ ಡೋಂಗರೆ

ಉಪಾಧ್ಯಕ್ಷರು : ಮಾರುತಿ ಜಗದಾಳೆ ತುಳಜಾಪೂರ, ಧನಾಜಿ ಕಾಂಬಳೆ ಖೇರ್ಡಾ, ಕಂಟೆಪ್ಪಾ ಡೋಂಗರೆ ಚಿಂತಾಕಿ, ಸಂತೋಷ ಕಾಂಬಳೆ ಡೋಂಗರಗಾಂವ, ತುಕರಾಮ ಹಸನಮೂಖಿ
ಕಾರ್ಯದರ್ಶಿಗಳು : ದಿನೇಶ ಶಿಂದೆ, ಆನಂದ ಕಾಂಬಳೆ, ಸುಂದರ ಮೇತ್ರ, ಉತ್ತಮ ಗಾಯಕವಾಡ, ವಿನೋದ ಡೊಳೆ,
ಸಲಹೆಗಾರರು: ದಯಾಸಾಗರ ಭೆಂಡೆ, ಉತ್ತಮ ಮಾಂಜ್ರೇಕರ್, ರಾಜಕುಮಾರ ಮೈಲಾರೆ, ಆನಂದ ಗಲಗಲೆ, ರಾಹುಲ ಖಂದಾರೆ, ಸುನೀಲ ಮಿತ್ರಾ, ರತ್ನದೀಪ ಕಸ್ತೂರೆ,ಕಾಂತೇಶ ಭಾಲ್ಕೆ, ಸಂತೋಷ ಸೂರ್ಯವಂಶಿ, ಶಾಂತಕುಮಾರ ಭಾವಿಕಟ್ಟೆ, ಪಂಡರಿ ಕಸ್ತೂರೆ, ದಿಲೀಪ ಸೂನೆ, ಆಕಾಶ ಕಾಂಬಳೆ ತೆಗಂಪೂರ,

prajaprabhat

Recent Posts

ಅಥಿತಿ ಉಪನ್ಯಾಸಕರ ಆಯ್ಕೆಗೆ ಅನಧಿಕೃತ PH.D ಪ್ರಮಾಣಪತ್ರ

ರಾಯಚೂರು.12.ಆಗಸ್ಟ್.25:- ಅಥಿತಿ ಉಪನ್ಯಾಸಕರ ಆಯ್ಕೆಗೆ ಅನಧಿಕೃತ ಪ್ರಮಾಣಪತ್ರ ಹೊಂದಿರುವ ಅಭ್ಯಾರ್ಥಿಗಳ ತಡಿಯುವ ಕುರಿತು. ಮಾನ್ಯರೇ, ಈ ಮೇಲ್ಕಾಣಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ…

1 hour ago

ವಿಶೇಷಚೇತನ ಅತಿಥಿ ಉಪನ್ಯಾಸಕರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳ ಸರ್ಕಾರ ಗಮನ ಸೆಳೆಲೀ..

ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ವಿಶೇಷ ಚೇತನ ಬದುಕು ಸ್ಥಿತಿ ? ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ…

2 hours ago

Free ಉಚಿತ ‘ಮೊಬೈಲ್ ರಿಪೇರಿ’ ತರಬೇತಿಗಾಗಿ ಅರ್ಜಿ ಆಹ್ವಾನ

ರಾಜ್ಯದ ಯುವಕರಿಂದ ಶುಭ ಸುಧಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್‌…

3 hours ago

ಯುವತಿಗೆ ಚುಡಾಯಿಸಿದ ಆರೋಪ, ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿಸಿದ ದುಷ್ಕರ್ಮಿಗಳು!

ಬೆಳಗಾವಿ.12.ಆಗಸ್ಟ್.25:- ಬೆಳಗಾವಿ ಜಿಲ್ಲೆ ರಾಮದುರ್ಗ  ತಾಲ್ಲೂಕಿನಲ್ಲಿ ಗೊಡಚಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಈ ಇಬ್ಬರು ಯುವಕರನ್ನು  ಪರಿಶಿಷ್ಟ ಪಂಗಡಕ್ಕೆ…

5 hours ago

ಸಾರಿಗೆ ಇಲಾಖೆಯಲ್ಲಿ 1,000 ಚಾಲಕ ಕಂ-ನಿರ್ವಾಹಕ ಹುದ್ದೆಗಳ ಭರ್ತಿ.ಸಚಿವ ರಾಮಲಿಂಗ ರೆಡ್ಡಿ

ಬೆಂಗಳೂರು.12.ಆಗಸ್ಟ್.25:- ರಾಜ್ಯ ವಾಯವ್ಯ ಕರ್ನಾಟಕ ಸಾರಿಗೆ ನಿಗಮದ 1,000 ಚಾಲಕ ಕಂ-ನಿರ್ವಾಹಕ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ಸಚಿವ ರಾಮಲಿಂಗ…

6 hours ago

ರಾಜ್ಯ ಸರ್ಕಾರಿ ಕಾಲೇಜು’ಗಳಲ್ಲಿ  ಅರ್ಹ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ.!

ರಾಜ್ಯದ ಸರ್ಕಾರಿ ಕಾಲೇಜು'ಗಳಲ್ಲಿ ಅರ್ಹ ಅತಿಥಿ ಉಪನ್ಯಾಸಕರನ್ನು ಗೌರವಧನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.…

8 hours ago