Categories: ಬೀದರ

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ: ರೈತರು ಬೆಳೆ ವಿಮೆಗೆ ನೋಂದಾಯಿಸಿ

ಬೀದರ.22.ಜೂನ್.25:- 2025-26 ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮೋದನೆಯನ್ನು ನೀಡಲಾಗಿರುವುದರಿಂದ ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿದ್ದು, ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ತಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ವಿಮೆ ಯೋಜನೆ ಜಾರಿಗೆ ತರಲಾಗಿದೆ ಎಂದು ಬೀದರ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕರ್ನಾಟಕರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ತಾಲ್ಲೂಕಿನ ಮುಂಗಾರು ಹಂಗಾಮಿನಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆ ಮಟ್ಟದಲ್ಲಿತೊಗರಿ(ಮ.ಆ)ಹಾಗೂ ಸೋಯಾಅವರೆ (ನೀ&ಮ.ಆ)ಬೆಳೆಗಳು ಮತ್ತು ಇತರೆ ಬೆಳೆಗಳಾದ ಹೆಸರು (ಮ.ಆ), ಉದ್ದು (ಮ.ಆ), ಮುಸುಕಿನ ಜೋಳ (ಮ.ಆ), ಜೋಳ (ಮ.ಆ), ಎಳ್ಳು (ಮ.ಆ),ಭತ್ತ (ನೀ&ಮ.ಆ),ಹತ್ತಿ (ಮ.ಆ) ಬೆಳೆಗಳನ್ನು ನಿಗದಿಪಡಿಸಲಾಗಿದ್ದು, “ಯೂನಿವರ್ಸಲ್ ಸೋಂಪೊ ಜನರಲ್ ಇನ್‍ಶ್ಯೂರೆನ್ಸ್ ಕಂಪನಿ ಲಿಮಿಟೆಡ್” ವಿಮಾ ಸಂಸ್ಥೆಯನ್ನು ಅನುಷ್ಠಾನ ಸಂಸ್ಥೆಯನ್ನಾಗಿ ನಿಗದಿಪಡಿಸಲಾಗಿದೆ.


ಈ ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದರೈತರು ಪಾಲ್ಗೊಳ್ಳಲು ಕೊನೆಯ ದಿನಾಂಕ: 31-07-2025 ಆಗಿರುತ್ತದೆ. ಸೂರ್ಯಕಾಂತಿ ಮಳೆಯಾಶ್ರಿತ ಬೆಳೆಗೆ ಅಗಸ್ಟ-16-2025 ಕೊನೆಯ ದಿನಾಂಕ ಆಗಿರುತ್ತದೆ.


ಬೆಳೆ ವಿಮೆ ನೋಂದಣಿಗಾಗಿ ರೈತರು FRUITS ತಂತ್ರಾಂಶದಲ್ಲಿಕಡ್ಡಾಯವಾಗಿ ನೊಂದಣಿ ಮಾಡಿಕೊಂಡಿರಬೇಕು ಹಾಗೂ FRUITS ID  ಪಡೆದುಕೊಂಡಿರಬೇಕು. FRUITS ತಂತ್ರಾಂಶದಲ್ಲಿ ದಾಖಲಾದ ಸರ್ವೇ ನಂಬರ್‍ಗಳಿಗೆ ಮಾತ್ರ ಬೆಳೆ ವಿಮೆ ನೊಂದಣಿ ಮಾಡಲು ಅವಕಾಶವಿರುತ್ತದೆ. ಜಂಟಿ ಖಾತೆದಾರರು FRUITS ತಂತ್ರಾಂಶದಲ್ಲಿ ದಾಖಲಾದ ವಿಸ್ತೀರ್ಣಕ್ಕನುಗುಣವಾಗಿ ಬೆಳೆ ವಿಮೆ ನೊಂದಣಿ ಮಾಡಲು ಅವಕಾಶವಿರುತ್ತದೆ.

FRUITS ID  ದಾಖಲಿಸಲು ಅಥವಾ ಯಾವದೇ ಮಾರ್ಪಾಡಿಗಾಗಿತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬೇಕು. ಬೆಳೆವಾರು ನಿಗದಿಪಡಿಸಿರುವ ಅಂತಿಮ ದಿನಾಂಕದೊಳಗಾಗಿ ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ ವಿಮೆಯೋಜನೆಯಲ್ಲಿ ಭಾಗವಹಿಸಿ ಲಾಭ ಪಡೆಯಬೇಕು.

ರೈತರು ನೊಂದಣಿಗಾಗಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ ಜೊತೆಗೆ ಆಧಾರ ಕಾರ್ಡ ಮತ್ತು ಆಧಾರ ಸಂಖ್ಯೆ ಜೊಡಿಸಿದ ಬ್ಯಾಂಕ್ ಖಾತೆ/ಪಾಸ್ ಪುಸ್ತಕದೊಂದಿಗೆಡಿ. ಸಿ.ಸಿ/ಇತರೆ ಬ್ಯಾಂಕ್, ಗ್ರಾಮ-ಒನ್, ಕರ್ನಾಟಕಒನ್‍ಮತ್ತು ಸಿ.ಎಸ್.ಸಿ ಕೇಂದ್ರಗಳಿಗೆ ಸಂಪರ್ಕಿಸಬೆಕು.ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳಿಗೆ ಸಂಪರ್ಕಿಸಬಹುದೆಂದು ಅವರು ತಿಳಿಸಿದ್ದಾರೆ.

prajaprabhat

Share
Published by
prajaprabhat

Recent Posts

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಭಾಗಿಯಾಗುವ ಬಗ್ಗೆ ಅಮೆರಿಕ ನಿರ್ಧಾರ ವಿಳಂಬ ಮಾಡಿದ ನಂತರ ಕಚ್ಚಾ ತೈಲ ಬೆಲೆಗಳು ಕಡಿಮೆಯಾಗುತ್ತವೆ

ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಅಮೆರಿಕದ ಪಾಲ್ಗೊಳ್ಳುವಿಕೆಯ ಬಗ್ಗೆ ನಿರ್ಧಾರವನ್ನು ಶ್ವೇತಭವನ ವಿಳಂಬ ಮಾಡಿದ ನಂತರ ಇಂದು ಕಚ್ಚಾ ತೈಲ ಬೆಲೆಗಳು ಕಡಿಮೆಯಾದವು.…

2 hours ago

ಮೇ 2025 ರಲ್ಲಿ ಪ್ರಮುಖ ವಲಯಗಳು ದಾಖಲೆಯ ವಿಸ್ತರಣೆಯನ್ನು ಕಂಡಿವೆ.

ದೇಶದ ಕೈಗಾರಿಕಾ ಉತ್ಪಾದನೆಯ ಸುಮಾರು ಐದನೇ ಎರಡರಷ್ಟು ಪಾಲನ್ನು ಹೊಂದಿರುವ ಭಾರತದ ಮೂಲಸೌಕರ್ಯ ಉತ್ಪಾದನೆಯು, ಒಂದು ವರ್ಷದ ಹಿಂದಿನ ಇದೇ…

2 hours ago

ಭಾರತದ ವಿದೇಶಿ ವಿನಿಮಯ ಸಂಗ್ರಹವು 2.2 ಬಿಲಿಯನ್ ಡಾಲರ್‌ಗಳಿಗೂ ಹೆಚ್ಚಾಗಿದೆ

ಜೂನ್ 13 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 2.2 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚಾಗಿ, 698 ಶತಕೋಟಿ…

2 hours ago

ಆರ್ಥಿಕ ವಲಯದ ಜಂಟಿ ಕಣ್ಗಾವಲುಗಾಗಿ ಐಎನ್ಎಸ್ ಟೆಗ್ ಮಾರಿಷಸ್‌ಗೆ ಆಗಮಿಸಿದೆ

ಮಾರಿಷಸ್ ರಾಷ್ಟ್ರೀಯ ಕರಾವಳಿ ಕಾವಲು ಪಡೆಯ (NCG) ಹಡಗುಗಳು ಮತ್ತು ವಿಮಾನಗಳೊಂದಿಗೆ ಮಾರಿಷಸ್ ವಿಶೇಷ ಆರ್ಥಿಕ ವಲಯದ ಜಂಟಿ ಕಣ್ಗಾವಲು…

2 hours ago

ಭಾರತದ 2036 ರ ಒಲಿಂಪಿಕ್ ಬಿಡ್ ಜಾಗತಿಕ ಪರಿಣಾಮ, ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಗುರಿಯಾಗಿರಿಸಿಕೊಂಡಿದೆ: ಕೇಂದ್ರ ಸಚಿವೆ ರಕ್ಷಾ ಖಾಡ್ಸೆ

2036 ರ ಒಲಿಂಪಿಕ್ಸ್ ಅನ್ನು ಆಯೋಜಿಸುವ ಭಾರತದ ಪ್ರಯತ್ನವು ಕೇವಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೇಳಿಕೆ ನೀಡುವ ಪ್ರಯತ್ನವಲ್ಲ, ಬದಲಾಗಿ ವಿಶ್ವ…

2 hours ago

ಮೇಲ್ಛಾವಣಿ ಸೌರ ಮತ್ತು ನವೀಕರಿಸಬಹುದಾದ ನಾವೀನ್ಯತೆಗಳನ್ನು ಹೆಚ್ಚಿಸಲು ಸರ್ಕಾರ ಸ್ಟಾರ್ಟ್-ಅಪ್ ಸವಾಲನ್ನು ಪ್ರಾರಂಭಿಸಿದೆ

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ರೂಫ್‌ಟಾಪ್ ಸೌರ ಮತ್ತು ವಿತರಣಾ ನವೀಕರಿಸಬಹುದಾದ ಇಂಧನ ನಾವೀನ್ಯತೆಗಳನ್ನು ವೇಗಗೊಳಿಸಲು ನವೀನ ಯೋಜನೆಗಳ…

2 hours ago