ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಸಭೆ:

ಸಂಘಟನೆ ಬಲಪಡಿಸುವಿಕೆ, ಪತ್ರಿಕಾ ದಿನಾಚರಣೆ, ಸದಸ್ಯತ್ವ ಅಭಿಯಾನಕ್ಕೆ ಚಾಲನೆ


ಬೀದರ್,ಜೂ.೧೧:- ಬುಧವಾರ ಬೀದರ್ ಜಿಲ್ಲಾ ಘಟಕದ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಪತ್ರಿಕಾ ಭವನದಲ್ಲಿ ಇಂದು ನಡೆದು ಸದಸ್ಯತ್ವ ನವೀಕರಣ ಮತ್ತು ಸಂಘಟನೆ ಬಗ್ಗೆ ಚರ್ಚಿಸಲಾಯಿತು.
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಇದುವರೆಗೆ ಕೈಗೊಂಡಿರುವ ಕೆಲಸ ಕಾರ್ಯಗಳ ಬಗ್ಗೆ ಸಭೆಯಲ್ಲಿ ಸಂಘದ ಅಧ್ಯಕ್ಷ ವಿಜಯಕುಮಾರ ಪಾಟೀಲ ಅವರು ಸುದೀರ್ಘವಾಗಿ ವಿವರಿಸಿದರು.

ಕೆಕೆಆರ್‌ಡಿಬಿಯಿಂದ ಪತ್ರಿಕೆಗಳಿಗೆ ಜಾಹೀರಾತು ಪಡೆಯಲು ಮಾಡಿರುವ ಪ್ರಯತ್ನ ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ಒದಗಿಸಿರುವ ಬಗ್ಗೆ. ಟೆಂಡರ್ ಜಾಹೀರಾತುಗಳನ್ನು ವಾರ್ತಾ ಇಲಾಖೆ ಮೂಲಕ ನೀಡಬೇಕೆಂಬ ಸಿಇಒ ಆದೇಶ ಮತ್ತು ಎಲ್ಲಾ ತಾಲೂಕ ಪಂಚಾಯತ್ ಪಿಡಿಓಗಳ ಆದೇಶ, ಭೂ ಸ್ವಾಧೀನ ಪೆಂಡಿAಗ್ ಬಿಲ್ಲುಗಳು ಇಲಿಯವರಿಗೆ ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮ ನಿಯಮಿತ ಎಂಡಿ ಅವರಿಂದ ಹೊಸ ಆದೇಶ ಹೊರಡಿಸಲು ಸಿದ್ಧವಾಗಿದೆ ಎಂಬ ಮಾಹಿತಿ ಸಭೆಗೆ ತಿಳಿಸಲಾಯಿತು.


ನಮ್ಮ ಸಂಘದ ಮನವಿ ಪತ್ರದ ಮೇಲೆ ಪೊಲೀಸ ವರಿಷ್ಠಾಧಿಕಾರಿಗಳು ಇತ್ತೀಚಿಗೆ ನೀಡಿರುವ ಐಡಿ ಕಾರ್ಡ್ಗಳ ವಿತರಣೆ ನಮ್ಮ ಸಂಘದ ಹೆಮ್ಮೆಯ ಕೆಲಸಗಳಲ್ಲಿ ಒಂದಾಗಿದೆ.
ಬೇರೆ ಸಂಘಟನೆಯಿAದ ನಮ್ಮ ಸಂಘದ ಸದಸ್ಯರುಗಳಿಗೆ, ಪದಾಧಿಕಾರಿಗಳಿಗೆ ಬೆದರಿಕೆ ಹಾಗೂ ಸದಸ್ಯತ್ವ ಗೊಂದಲದ ಬಗ್ಗೆ ಮಾಡುತ್ತಿರುವ ವಿಚಾರ ಸಭೆಯಲ್ಲಿ ವ್ಯಾಪಕವಾಗಿ ಚರ್ಚಿಸಲಾಯಿತು. ಇದಕ್ಕೆ ಸಭೆಯಲ್ಲಿ ಉಪಸ್ಥಿತರಿದ್ದ ಪ್ರಾದೇಶಿಕ ಪತ್ರಿಕೆಗಳ ಅಧ್ಯಕ್ಷ ಬಾಬು ವಾಲಿಯವರು ಮಾತನಾಡಿ ಈ ಸಮಸ್ಯೆ ಬಗೆಹರಿಸೋಣ ಎಲ್ಲರೂ ಕೂಡಿ ಹೋಗೋಣ ಎಂಬ ವಿಚಾರ ವ್ಯಕ್ತಪಡಿಸಿದರು.


ಇದಕ್ಕೆ ಇನ್ನೊಬ್ಬರು ಹಿರಿಯ ಪತ್ರಕರ್ತರಾದ ಮಾಳಪ್ಪ ಅಡಸಾರೆ ಸಹ ಈ ಸಮಸ್ಯೆ ದೊಡ್ಡದಲ್ಲ ಈ ತರಹ ಯಾರೇ ಮಾಡಿದರು ಅದು ಒಪ್ಪುವಂತದ್ದಲ್ಲ ಇದನ್ನು ಖಂಡಿಸಿ ಸರಿ ಮಾಡಿಸೋಣ ಎಂದು ತಿಳಿಸಿದರು.


ಇಂಥ ಕೆಲಸ ಆ ಸಂಘದ ಕಾರ್ಯದರ್ಶಿಗಳಿಂದ ನಡೆಯುತ್ತಿದೆ ಇದು ನಿಲ್ಲಬೇಕೆಂದು ಮತ್ತೊಬ್ಬ ಹಿರಿಯ ಹಾಗೂ ಕೆಡಬ್ಲ್ಯೂಜೆ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್ ಕರಂಜಿ ತಿಳಿಸಿದರು.


ಸಂಘಟನೆ ಬಲವಾಗಿ ಬೆಳೆಯಬೇಕು ಸಂಪಾದಕರ ಸಂಘ ಬಲಿಷ್ಠಗೊಳಿಸಬೇಕು ಇದರಲ್ಲಿ ಎರಡು ಮಾತಿಲ್ಲ ಎಂದು ಸಂಘಟನಾ ಕಾರ್ಯದರ್ಶಿ ರಮೇಶ್ ರೆಡ್ಡಿ, ಸುನಿಲ್ ಕುಲಕರ್ಣಿ, ಪ್ರದೀಪ ಬಿರಾದಾರ, ಬಸವರಾಜ ಪವಾರ, ಅಜಯ್ ಭೋಸ್ಲೆ, ನಂದಕುಮಾರ, ಅಬ್ದುಲ್ ಖದೀರ್ ಅವರುಗಳು ಸಭೆಯಲ್ಲಿ ಎಲ್ಲರೂ ಒಕ್ಕುರಲಿನಿಂದ ತಿಳಿಸಿದರು.
ಪತ್ರಿಕಾ ದಿನಾಚರಣೆ ಬಗ್ಗೆ ಚರ್ಚೆಯಾಗಿ ಸಂಪಾದಕರ ಸಂಘದಿoದ ನಡೆಸುವ ಬಗ್ಗೆ ಹಾಗೂ ಮೂರು ಸಂಘಗಳಿoದ ಒಟ್ಟಿಗೆ ನಡೆಸುವ ಬಗ್ಗೆ ಕೆಲವರು ಸಭೆಯಲ್ಲಿ ಸಲಹೆ ನೀಡಿದರು. ಹೀಗಾಗಿ ಮುಂದಿನ ಸಭೆಯಲ್ಲಿ ತೀರ್ಮಾನಿಸಲು ನಿರ್ಧರಿಸಲಾಯಿತು. ಮೂರು ಸಂಘದ ಜಂಟಿಯಾಗಿ ಹಾಗೂ ಮೂರು ಅಧ್ಯಕ್ಷರು ಒಗ್ಗಟ್ಟಾಗಿ ದಿನಾಚರಣೆ ಆಚರಿಸಬೇಕು ತಿಳಿಸಿದರು.ಯಾವುದಕ್ಕೂ ಇನ್ನೊಂದು ಸಭೆಯಲ್ಲಿ ನಿರ್ಧಾರ ಮಾಡೋಣ ಎಂದು ಸಭೆಗೆ ತಿಳಿಸಲಾಯಿತು.


ಮಾಧ್ಯಮ ಪಟ್ಟಿಯಲ್ಲಿರುವ ಹಾಗೂ ಮಾನ್ಯತೆ ಪಡೆದ ಪತ್ರಿಕರ್ತರ ಕಷ್ಟ ಸುಖ ಹಾಗೂ ಜಾಹಿರಾತು ಬಗ್ಗೆ ನಮ್ಮ ಸಂಘ ಸದಾ ಹೋರಾಡಲಿದೆ ಹಾಗೂ ಈ ಸವಲತ್ತಿಗಾಗಿ ನಮ್ಮ ಸಂಘ ಏಕಾಂಗಿಯಾಗಿ ಮನವಿ ಪತ್ರಗಳನ್ನು ಮುಂದುವರಿಯುತ್ತದೆ ಎಂಬ ವಿಚಾರ ಸಂಘದ ಸಭೆಯಲ್ಲಿ ಚರ್ಚೆಗೆ ಬಂತು ಎಲ್ಲರೂ ಒಪ್ಪಿಗೆಯು ದೊರೆಯಿತು.


ಪ್ರಮುಖ ವಿಷಯವಾಗಿ ಸಂಘಕ್ಕೆ ಸದಸ್ಯರಾಗಲು ಮೊದಲು ಬಾಬು ವಾಲಿಯವರು ಸದಸ್ಯತ್ವ ಪಡೆದುಕೊಂಡರು. ನಂತರ ಸಂಘದ ರಾಜ್ಯ ನಾಮ ನಿರ್ದೇಶಿತ ಸದಸ್ಯರಾದ ಮಾಜಿ ಕೆಡಬ್ಲ್ಯೂಜೆ ಬೀದರ್ ಅಧ್ಯಕ್ಷ  ಅಶೋಕ್ ಕುಮಾರ್ ಕರಂಜಿ, ಮಾಜಿ ಕೆಡಬ್ಲೂಜೆ ಅಧ್ಯಕ್ಷರಾದ ಮಾಳಪ್ಪ ಅಡಸಾರೆ ಹಾಗೂ ಬೀದರ್ ಟೈಮ್ಸ್ ಪತ್ರಿಕೆ ಸಂಪಾದಕರಾದ ಜಾರ್ಜ್ ಫರ್ನಾಂಡಿಸ್ ಅವರುಗಳು ಸಾಂಕೇತಿಕವಾಗಿ ಇಂದು ಸದಸ್ಯತ್ವ ಪಡೆಯುವುದರ ಮೂಲಕ ಸದಸ್ಯತ್ವ ಅಭಿಯಾನ ಮತ್ತು ನವೀಕರಣಕ್ಕೆ ಚಾಲನೆ ದೊರೆಯಿತು. 


ಇಂದಿನ ಸಭೆಗೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ್  ಪಾಟೀಲ, ಪ್ರಾದೇಶಿಕ ಪತ್ರಿಕೆಗಳ ಅಧ್ಯಕ್ಷ ಬಾಬು ವಾಲಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್ ರೆಡ್ಡಿ, ರಾಜ್ಯ ಪ್ರತಿನಿಧಿ ಹಾಗೂ ಕೆಡಬ್ಲ್ಯೂಜಿೆ ಮಾಜಿ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕರಂಜಿ, ರಾಜ್ಯ ಪ್ರತಿನಿಧಿಗಳಾಗಿರುವ ಮಾಳಪ್ಪ ಅಡಸಾರೆ, ಅಜಯ್ ಬೋಸ್ಲೆ, ಬಸವರಾಜ್ ಪವಾರ್, ಉಪಾಧ್ಯಕ್ಷರಾದ ರಾಮಚಂದ್ರ ಬೋಸ್ಲೆ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಚೌದರಿ, ಕಾರ್ಯದರ್ಶಿ ಪ್ರದೀಪ್ ಬಿರಾದರ್, ಜಂಟಿ ಕಾರ್ಯದರ್ಶಿ ಅಬ್ದುಲ್ ಖದೀರ್, ಶರತ್‌ಕುಮಾರ್ ಘಂಟೆ, ಸಹ ಕಾರ್ಯದರ್ಶಿಗಳಾದ ಸುನಿಲ್ ಕುಲಕರ್ಣಿ, ಅಮರೇಶ್ ಚಿದ್ರೆ, ಸ್ವಾಮಿದಾಸ್, ಕಾರ್ಯಕಾರಿ ಸಮಿತಿ ಸದಸ್ಯ ಜೈ ಕುಮಾರ್ ಮತ್ತು ಸಂಪಾದಕರಾದ ನಂದಕುಮಾರ್, ಜಾರ್ಜ್ ಫರ್ನಾಂಡಿಸ್, ಉದಯಕುಮಾರ ಸೋನಿ ಇವರುಗಳು ಸಭೆಯಲ್ಲಿ ಭಾಗವಹಿಸಿದರು.

prajaprabhat

Recent Posts

ಬೇಡಿಕೆಯಂತೆ ಸೋಯಾಬೀನ್ ಬಿತ್ತನೆ ಬೀಜ, ಆತಂಕ ಬೇಡ-ಈಶ್ವರ ಖಂಡ್ರೆ

ಬೀದರ.15.ಜೂನ್.25:- ಬೀದರ್ ಜಿಲ್ಲೆಯ ರೈತರ ಬೇಡಿಕೆಗೆ ಅನುಗುಣವಾಗಿ ಸೋಯಾಬೀನ್ ಬಿತ್ತನೆ ಬೀಜ ಪೂರೈಕೆ ಮಾಡಲು ಕ್ರಮ ವಹಿಸಲಾಗಿದ್ದು, ರೈತರು ಆತಂಕ…

2 minutes ago

ಉತ್ತರಾಖಂಡ್: ಕೇದಾರನಾಥ ಬಳಿ ಹೆಲಿಕಾಪ್ಟರ್ ಪತನ, ಅದರಲ್ಲಿದ್ದ ಏಳು ಮಂದಿ ಸಾವು

ಉತ್ತರಾಖಂಡದ ಕೇದಾರನಾಥ ಪ್ರದೇಶದ ಗೌರಿಕುಂಡ್ ಖಾರ್ಕ್ ಬೆಟ್ಟ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಆರು ಯಾತ್ರಿಕರು ಮತ್ತು ಪೈಲಟ್…

7 minutes ago

ಪ್ರಜಾ ಪ್ರಭಾತ ಕನ್ನಡ ನ್ಯೂಸ್’ಗೆ ಜಿಲ್ಲಾ, ತಾಲ್ಲೂಕು ವರದಿಗಾರರ ಬರ್ಕಾಗಿದರೆ. | Wanted News Reporter’s

ಪ್ರಜಾ ಪ್ರಭಾತ ಡಿಜಿಟಲ್ ಡೆಸ್ಕ್: ಪ್ರಜಾ ಪ್ರಭಾತ ಕನ್ನಡ ಡಿಜಿಟಲ್ ನ್ಯೂಸ್ 24X4 ವೆಬ್ ಸೈಟ್ ಗೆ ಜಿಲ್ಲಾ ಹಾಗೂ…

3 hours ago

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ : 2025-26ನೇ ಸಾಲಿನ ‘NMMSS’ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

2025-26 ನೇ ಶೈಕ್ಷಣಿಕ ಸಾಲಿಗೆ NMMS ವಿದ್ಯಾರ್ಥಿ ವೇತನಕ್ಕಾಗಿ, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP)…

6 hours ago

ಸರಕಾರಿ ಪದವಿ ಕಾಲೇಜುಗು ಈಗ ಖಾಸಗಿ ಕಾಲೇಜುಗಳಂತೆ : ಡಾ.ಎಂ.ಸಿ.ಸುಧಾಕರ್

ಚಿಕ್ಕಮಗಳೂರು.15.ಜೂನ್.25:- ರಾಜ್ಯ ಸರಕಾರ ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಖಾಸಗಿ ಕಾಲೇಜುಗಳಂತೆ…

6 hours ago

ಜೂ.16 ರಂದು ಎನ್‌ಎಬಿಎಲ್ ಮಾನ್ಯತೆ,<br>ಅದರ ಲಾಭಗಳು ಕುರಿತು ಜಾಗೃತಿ ಕಾರ್ಯಕ್ರಮ

ಬೀದರ.14.ಜೂನ್.25:- ಬೀದರ ತೋಟಗಾರಿಕೆ ಮಹಾವಿದ್ಯಾಲಯ, ರಿವರ್ಡ ಯೋಜನೆ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ಬೀದರ, ರಾಷ್ಟ್ರೀಯ ಪರೀಕ್ಷೆ ಮತ್ತು ಅಂಶಶೋಧನಾ ಪ್ರಯೋಗಾಲಯಗಳ…

14 hours ago