ಕರ್ನಾಟಕದ ಅತೀ ಚಿಕ್ಕ ತಾಲ್ಲೂಕು ಯಳಂದೂರಿನಲ್ಲಿ ಪ್ರಭಾರ ಅಧಿಕಾರಿಗಳೇ ಹೆಚ್ಚು.ಕೆಲಸಗಳು ವಿಳಂಬ.

ಯಳಂದೂರು: ಕರ್ನಾಟಕ ರಾಜ್ಯದಲ್ಲಿಯೇ ಅತೀ ಚಿಕ್ಕ ತಾಲ್ಲೂಕು ಎಂಬ ಹೆಸರುವಾಸಿಯಾಗಿರುವ ಯಳಂದೂರು ತಾಲ್ಲೂಕು ಅತೀ ಹಳೆಯ ತಾಲ್ಲೂಕು ಕೇಂದ್ರವು ಕೂಡವಾಗಿದೆ. ಚಾಮರಾಜನಗರ ಜಿಲ್ಲೆಯಾಗುವುದಕ್ಕಿಂತ ಮುಂಚೆಯೇ ಮೈಸೂರು ಜಿಲ್ಲೆಯಾಗಿದ್ದಾಗ ಯಳಂದೂರು ತಾಲ್ಲೂಕು ಕೇಂದ್ರವಾಗಿತ್ತು.  ಹಾಗೇಯೆ ಯಳಂದೂರು ವಿಧಾನಸಭಾ ಕ್ಷೇತ್ರ ಕೂಡವಾಗಿತ್ತು ಅವಾಗ ಮಾಜಿ ರಾಜ್ಯಪಾಲರಾದ ದಿವಂಗತ ಬಿ ರಾಚಯ್ಯನವರಿಗೆ ರಾಜಕೀಯ ಪ್ರವೇಶಕ್ಕೆ ವೇದಿಕೆಯಾದ ಕೇಂದ್ರವಾಗಿದೆ. ಆದರೆ ಇಂದು ಈ ತಾಲ್ಲೂಕಿನ ಕೇಂದ್ರ ಕಛೇರಿಗಳಲ್ಲಿ ಬಹುತೇಕ ಪ್ರಭಾರ ಅಧಿಕಾರಿಗಳಿರುವುದರಿಂದ ಸಾರ್ವಜನಿಕ ಕಾರ್ಯಗಳಿಗೆ ಅಡಚಣೆಯಾಗಿದೆ ಕೂಡಲೇ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರೇ,ಸಂಸದರೇ ದಯವಿಟ್ಟು ಇತ್ತ ಗಮನಿಸಿ ಸಾರ್ವಜನಿಕ ಆಡಳಿತವನ್ನು ಚುರುಕುಗೊಳಿಸಬೇಕಾಗಿದೆ.

ತಹಶೀಲ್ದಾರ್ ಕಛೇರಿ, ತಾಲ್ಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಉಪ ನೋಂದಣಿ ಕಛೇರಿ, ರೇಷ್ಮೆ ಇಲಾಖೆ, ಪಶು ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪಟ್ಟಣ ಪಂಚಾಯತಿ ಹಾಗೂ ಇತರೆ ಇಲಾಖೆಗಳಲ್ಲಿರುವ ಮುಖ್ಯ ಅಧಿಕಾರಿಗಳು ಪ್ರಭಾರವಾಗಿದ್ದಾರೆ.

ಯಳಂದೂರು ತಾಲ್ಲೂಕು ಕೇಂದ್ರದೊಳಗೆ ಇರುವ ಬಹುತೇಕ ಇಲಾಖೆಗಳಲ್ಲಿ ಸುಮಾರು ವರುಷಗಳಿಂದ ಪ್ರಭಾರ ಅಧಿಕಾರಿಗಳೆ ಹೆಚ್ಚಾಗಿದ್ದಾರೆ.
ಇವಾಗ ಇರುವ ಪ್ರಭಾರ ತಹಶೀಲ್ದಾರ್  ಬಸವರಾಜ್ ರವರು ಚಾಮರಾಜನಗರ ದಿಂದ  ಕೊಳ್ಳೇಗಾಲ ತಾಲ್ಲೂಕಿಗೆ ತಹಶೀಲ್ದಾರ್ ರಾಗಿ  ವರ್ಗಾವಣೆಯಾಗಿದ್ದಾರೆ. ಅದರ ಜೊತೆಗೆ ಯಳಂದೂರು ತಾಲ್ಲೂಕಿಗೆ ಪ್ರಭಾರ ತಹಶೀಲ್ದಾರ್ ರಾಗಿ ಕಾರ್ಯನಿರ್ವಹಿಸುತ್ತಾರೆ.
ತಾಲ್ಲೂಕು ಕಛೇರಿಯ ಕಂದಾಯಕ್ಕೆ ಸಂಬಂಧಪಟ್ಟ ಕಾರ್ಯಗಳಿಗೆ ತಹಶೀಲ್ದಾರ್ ರವರ ಸಹಿ ಅವಶ್ಯಕವಾಗಿದೆ ಪ್ರಭಾರವಾಗಿರುವುದರಿಂದ ಹಾಗೂ ಹೆಚ್ಚುವರಿ ಅಧಿಕಾರವನ್ನು ನೀಡಿರುವುದರಿಂದ ಸಾರ್ವಜನಿಕ ಕೆಲಸಗಳು ವಿಳಂಬ ವಾಗುತ್ತದೆ.

ಯಳಂದೂರು ತಾಲ್ಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ  ಹನೂರು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ  ಉಮೇಶ್ ರವರು ಸುಮಾರು ವರ್ಷಗಳಿಂದ  ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪಂಚಾಯತ್ ಹಾಗೂ ನರೇಗಕ್ಕೆ ಸಂಬಂಧಪಟ್ಟ ಕಾರ್ಯಗಳಿಗೆ ಕಾರ್ಯ ನಿರ್ವಾಹಕ ಅಧಿಕಾರಿಯ ಸಹಿ ಅಗತ್ಯವಾಗಿರುತ್ತದೆ  ಹನೂರು ಮತ್ತು ಯಳಂದೂರು ಎರಡು ಕಡೆ ನಿರ್ವಹಿಸುವುದರಿಂದ ಸಾರ್ವಜನಿಕ ಕೆಲಸಕ್ಕೆ ವಿಳಂಬವಾಗಿದೆ.

ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿಯಾಗಿ ಕೇಶವಮೂರ್ತಿ ರವರು ಕಾರ್ಯನಿರ್ವಹಿಸುತ್ತಿದ್ದಾರೆ ಇವರ ಮೂಲ ಅಧಿಕಾರ ಕೊಳ್ಳೇಗಾಲ ತಾಲ್ಲೂಕು ಸಮಾಜ ಕಲ್ಯಾಣಧಿಕಾರಿಯಾಗಿರುತ್ತಾರೆ.
ಯಳಂದೂರಿಗೆ ಸಾಯಂಕಾಲ ಸಮಯದಲ್ಲಿ ಬಂದು ಕೂತಿದು ಮನೆಗೆ ಹೋಗುತ್ತಾರೆ.

ಉಪನೋಂದಣಿ ಅಧಿಕಾರಿ ಹುದ್ದೆಯಲ್ಲಿಯೂ ಪ್ರಭಾರ ಮಹಿಳಾ ಅಧಿಕಾರಿಯೊಬ್ಬರಿದ್ದಾರೆ.

ಯಳಂದೂರು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾಗಿ  ಸರಿತಾ ಕಾರ್ಯ ನಿರ್ವಹಿಸುವುದರ ಜೊತೆಗೆ  ವಿವಿಧ ತಾಲ್ಲೂಕಿಗೆ ಪ್ರಭಾರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಛೇರಿಗಳಲ್ಲಿ ಲಭ್ಯವಿರುವುದಿಲ್ಲ.

ಪಶು ಇಲಾಖೆಗೆ ಡಾ ಶಿವರಾಜ್ ರವರ ಮೂಲ ಕೆಸ್ತೂರು ಪಶು ವೈದ್ಯಾಧಿಕಾರಿ ಆದರೆ ತಾಲ್ಲೂಕಿನ ಪಶು ವೈದ್ಯಾಧಿಕಾರಿ ಹುದ್ದೆ ಖಾಲಿ ಇರುವುದರಿಂದ ಇಲ್ಲಿಗೆ ಅಧಿಕಾರಿಯಾಗಿರುತ್ತಾರೆ ಯಳಂದೂರು ಅಲ್ಲದೇ ಕೆಲವು ತಾಲ್ಲೂಕಿಗೂ ಕೂಡ ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಹೇಶ್ ರವರೆಗೆ ಹನೂರು ಪಟ್ಟಣ ಪಂಚಾಯತಿಯಲ್ಲಿ ಪ್ರಭಾರ  ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎರಡು ಕಡೆ ಕಾರ್ಯನಿರ್ವಹಿಸುವುದರಿಂದ ಅನೇಕ ಸಮಸ್ಯೆಗಳು ಉದ್ಬವಗೊಳ್ಳುತ್ತದೆ ಉದಾಹರಣೆಗೆ ಹನೂರಿನಲ್ಲಿ ಡಾ ಬಾಬು ಜಗಜೀವನ್ ರಾವ್ ರವರ ಜಯಂತಿಯನ್ನು ತಡವಾಗಿ ಮಾಡಿದರಿಂದ ಸಾರ್ವಜನಿಕರು ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಅಧಿಕಾರಿ ಯಳಂದೂರಿನಲ್ಲಿ ಜಯಂತಿ ಮುಗಿಸಿ ಹನೂರಿಗೆ ತೆರಳುವತನಕ ಗಲಾಟೆಯಾಗಿದೆ.

ಇನ್ನೇಷ್ಟು ಅಧಿಕಾರಿಗಳು ಮೀಟಿಂಗ್ ಅಂತ ಹೋಗಿರುತ್ತಾರೆ ಸಾರ್ವಜನಿಕರಿಗೆ ಅಧಿಕಾರಿಗಳೇ ಸಿಗುವುದಿಲ್ಲ.
ಕೂಡಲೇ ಶಾಸಕರಾದ ಎ ಆರ್ ಕೃಷ್ಣಮೂರ್ತಿ ರವರು ಇದನ್ನು ಗಮನಿಸಿ ಸಾರ್ವಜನಿಕ ಆಡಳಿತವನ್ನು ಚುರುಕುಗೊಳಿಸಬೇಕೆಂದು ಸಾರ್ವಜನಿಕರು ತಿಳಿಸಿದರು.
ವರದಿ.ಪ್ರಸನ್ನಕುಮಾರ್ ಕೆಸ್ತೂರು

prajaprabhat

Recent Posts

ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೇರಿಗೆ ಮಾಡಿ ಜನ ಸಾಮಾನ್ಯರಿಂದ ಹಣ ವಸೂಲಿ

ಬೀದರ.11.ಆಗಸ್ಟ್.25:- ಬೀದರ್ ಜಿಲ್ಲೆಯ ಔರಾದ ಬಾ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೇರಿಗೆ ಮಾಡಿ ಜನ ಸಾಮಾನ್ಯರಿಂದ ಹಣ ವಸೂಲಿ…

8 minutes ago

ಒಳಮೀಸಲಾತಿ ತೀರ್ಮಾನ ನಂತರ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ  ಮಾಡಲಾಗುವುದು.

ಬೆಂಗಳೂರು.11.ಆಗಸ್ಟ್.25:- ರಾಜ್ಯದಲ್ಲಿ ಒಳಮೀಸಲಾತಿ ಸಂಬಂಧ ರಾಜ್ಯಸರ್ಕಾರ ಸ್ಪಷ್ಟವಾದ ತೀರ್ಮಾನ ತೆಗೆದುಕೊಂಡ ಮೇಲೆ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಖಾಲಿಯಿರುವ ಗುಡ್ಡೆಗಳು ಭರ್ತಿ ಮಾಡಲಾಗುವುದು…

39 minutes ago

ರಾಜ್ಯ ಸರ್ಕಾರದಿಂದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ’ಕ್ಕೆ ಅರ್ಜಿ ಆಹ್ವಾನ

ಬೆಂಗಳೂರು.11.ಆಗಸ್ಟ್.25:- ರಾಜ್ಯ ಕಾರ್ಮಿಕ ಇಲಾಖೆ ಮಂಡಳಿಯು ವತಿಯಿಂದ ಕಾರ್ಮಿಕರ ಮಕ್ಕಳಿಗೆ 2025-26 ನೇ ಸಾಲಿನ  ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನ…

1 hour ago

ಭಾರತೀಯ ರೈಲ್ವೆಯಲ್ಲಿ 3,115 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು.11.ಆಗಸ್ಟ್.25:- ಪೂರ್ವ ರೈಲ್ವೆಯಲ್ಲಿ 3,115 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 14 ರಿಂದ ಸೆಪ್ಟೆಂಬರ್ 13,…

1 hour ago

ರಾಜ್ಯ ಶಿಕ್ಷಣ ನೀತಿ ಆಯೋಗವು ರಾಜ್ಯ ಸರ್ಕಾರಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ. ಸಿಎಂ,ಡಿಸಿಎಂ, ಹಾಗೂ ಉನ್ನತ ಶಿಕ್ಷಣ ಸಚಿವರು ವರದಿ ಸ್ವೀಕರಿಸಿದ್ದಾರೆ.

ಬೆಂಗಳೂರು.11.ಆಗಸ್ಟ್.25:- ರಾಜ್ಯ ಶಿಕ್ಷಣ ನೀತಿ ಆಯೋಗವು ರಾಜ್ಯ ಸರ್ಕಾರಕೆ ವರದಿಯ (ಎಸ್‌ಇಪಿ) ಶಿಫಾರಸುಗಳ ಪರಿಶೀಲನೆಗೆ ಉನ್ನತ ಶಿಕ್ಷಣ, ಶಾಲಾ ಶಿಕ್ಷಣ…

7 hours ago

ಸಕ್ರಿಯ ರಾಜಕಾರಣಕ್ಕೆ ಬಂದು ನನ್ನ ವಿರುದ್ಧ ಆರೋಪ ಮಾಡಿ : ಡಾ.ಎಂ.ಸಿ.ಸುಧಾಕರ್ ಕಿಡಿ

ಸ್ಟೀಸ್ ಗೋಪಾಲಗೌಡರು ಈ ತಲೆಮಾರಿನವರಲ್ಲ. ಹಿಂದಿನ ತಲೆ ಮಾರಿನವರು. ಅವರು ಹಿರಿಯರಿದ್ದಾರೆ.ಸುಪ್ರಿಂಕೋರ್ಟಿನ ವಿಶ್ರಾಂತ ನ್ಯಾಯಾಧೀಶರಿದ್ದಾರೆ.ಬಹಳ ಗೌರದಿಂದಲೇ ಹೇಳುತ್ತಿದ್ದೇನೆ.ರಾಜಕಾರಣ ಮಾಡುವಂತಿದ್ದರೆ ನೇರವಾಗಿ…

10 hours ago