ಔರಾದ.21.ಜೂನ್.25:- ಸರಕಾರಿ ಪ್ರಥಮ ದರ್ಜೆ ಕಾಲೇಜು ಔರಾದ್ ನಲ್ಲಿ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ದಿನಾಂಕ: 21.06.2025 ರಂದು ಬೆಳಗ್ಗೆ ಏಳು ಗಂಟೆಗೆ ಹಮ್ಮಿಕೊಳ್ಳಲಾಯಿತು. ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದಂತಹ ಶ್ರೀಮತಿ ಅಂಬಿಕಾದೇವಿ ಕೊತುಮೀರ್ ಅವರು ಉದ್ಘಾಟಿಸಿದರು.
ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಒಂದು ಭೂಮಿ ಒಂದು ಆರೋಗ್ಯ ಎನ್ನುವಂತಹ ಧ್ಯೇಯ ವಾಕ್ಯವನ್ನು ಘೋಷಿಸುತ್ತಾ, ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ. ಆದ್ದರಿಂದ ದೇಹದ ಸದೃಢತೆಗೋಸ್ಕರ ಹಾಗೂ ಮನಸ್ಸಿನ ಸದೃಢತೆಗೋಸ್ಕರ ಯೋಗವು ಅತಿ ಅವಶ್ಯಕವಾಗಿದೆ ಎನ್ನುವುದನ್ನು ತಿಳಿಸಿದರು.
ನಂತರ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಉರ್ವಶಿ ಕೋಡ್ಲಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಪ್ರಾಧ್ಯಾಪಕರು ಯೋಗ ಅಭ್ಯಾಸವನ್ನು ಮಾಡಿದರು. ಶ್ರೀಮತಿ. ಕೆ. ಅಂಬಿಕಾ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಶ್ರೀ ವಿನಾಯಕ ಕೊತ್ಮಿರ್ ಗಣಕ ವಿಜ್ಞಾನ ಸಹ ಪ್ರಾಧ್ಯಾಪಕರು ಸ್ವಾಗತವನ್ನು ಕೋರಿದರು ಮತ್ತು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಊರ್ವಶಿ ಕೋಡ್ಲಿ ಅವರು ಒಂದಿಸಿದರು. ಕಾಲೇಜಿನ ಉಳಿದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಮೈಸೂರು.21.ಜೂನ್.25:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಯುಜಿಸಿ-ನೆಟ್ ಮತ್ತು ಕೆ-ಸೆಟ್ ಪರೀಕ್ಷೆಗಳಿಗೆ ತರಬೇತಿ…
ಬೆಂಗಳೂರು.21.ಜೂನ್.25:- ಖೇಲೋ ಇಂಡಿಯಾ ಯೋಜನೆಯಡಿ ರಾಜ್ಯದಲ್ಲಿ 31 ಜಿಲ್ಲೆಗಳಲ್ಲಿ ಸಣ್ಣ ಖೇಲೋ ಇಂಡಿಯಾ ಕೇಂದ್ರಗಳನ್ನು ಪ್ರಾರಂಭಿಸಲು ಆಡಳಿತಾತ್ಮಕ ಮಂಜೂರಾತಿಯನ್ನು ನೀಡಿದ್ದು…
ಬೀದರ.21.ಜೂನ್.25:- ಗುರುನಾನಕ್ ಪ್ರಥಮ ದರ್ಜೆ ಕಾಲೇಜು ಬೀದರ್ ನ ರಜತ ಮಹೋತ್ಸವದ ಅಂಗವಾಗಿ ಜಿಲ್ಲಾಮಟ್ಟದ ಅಂತರ ಕಾಲೇಜು ವಿವಿಧ ಕ್ರೀಡಾ…
ಬೆಂಗಳೂರು.21.ಜೂನ್.25:- ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯಕ್ಕಾಗಿ ಸೇವಾ ಸಿಂಧು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ…
ತಾತ್ಕಾಲಿಕ ಉದ್ಯೋಗಿ ಎಂದರೆ ಶಾಶ್ವತ ಹುದ್ದೆಗೆ ಬದಲಾಗಿ ನಿರ್ದಿಷ್ಟ, ಸಾಮಾನ್ಯವಾಗಿ ಅಲ್ಪಾವಧಿಯ, ಉದ್ದೇಶ ಅಥವಾ ಯೋಜನೆಗಾಗಿ ನೇಮಕಗೊಂಡ ತಾತ್ಕಾಲಿಕ ಕೆಲಸಗಾರ.…
ರಾಜ್ಯದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್…