ಕಲಬುರಗಿ.19.ಮೇ.25:- ಉನ್ನತ ಶಿಕ್ಷಣ ಎಲಾಖೆಯೆಲ್ಲಿ ವಿವಿಧ ಪ್ರಕರಣಗಳು ಬೆಳಕಿಗೆ ಬಂದಿದೆ.
ಒಂದೇ ವರ್ಷದಲ್ಲಿ ಪಿಎಚ್ಡಿ! 3 ಯುಜಿಸಿ ನಿಯಮಾವಳಿ ಪ್ರಕಾರ ಸ್ನಾತಕೋತ್ತರ ಪದವಿ ಪೂರ್ಣಗೊಂಡ ಬಳಿಕ ಯಾವುದೇ ವಿದ್ಯಾರ್ಥಿ ಪಿಎಚ್ ಡಿ ಪದವಿ ಪಡೆಯಬೇಕೆಂದು ಇಚ್ಚಿಸಿದರೆ ಆತ ಯುಜಿಸಿ ಅನುಮೋದಿತ ವಿಶ್ವವಿದ್ಯಾಲಯದಿಂದಲೇ ಪಿಎಚ್ಡಿ ಪದವಿ ಮಾಡಬೇಕೆಂಬ ಮೂಲನಿಯಮವಿದೆ, ಜೊತೆಗೆ, ಮಾಸ್ಟರ್ ಡಿಗ್ರಿ ಪಡೆದ ಬಳಿಕ ಯಾವುದೇ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಪ್ರವೇಶಾತಿಗೆ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಬಳಿಕ ಮುಂದಿನ ಮೂರು ವರ್ಷಗಳವರೆಗೆ ಸಂಶೋಧನಾ ಅಧ್ಯಯನ ಕೈಗೊಳ್ಳಬೇಕಾಗುತ್ತದೆ.
ಈ ಮೂರು ವರ್ಷದೊಳಗೆ ಎಂಥದ್ದೇ ಪರಿಸ್ಥಿತಿ ಎದುರಾದರೂ ಆ ವಿದ್ಯಾರ್ಥಿ ಪಿಎಚ್ಡಿ ಪದವಿ ಅರ್ಹತೆ ಪಡೆಯುವುದಿಲ್ಲ. ವಾಸ್ತವಾಂಶದ ಜೊತೆಗೆ ಇಂಥದ್ದೊಂದು ನಿಯಮಾವಳಿ ಇದ್ದಾಗ್ಯೂ, ಆಶಿಶ್ ದಯಾನಂದ 2018ರಲ್ಲಿ ಸಿಯುಕೆಯಿಂದ ಸ್ನಾತಕೋತ್ತರ ಪಡೆದ ತಕ್ಷಣ 2019ರಲ್ಲಿ ಅದ್ದೇಗೆ ಪಿಎಚ್ಡಿ ಪಡೆಯಲು ಸಾಧ್ಯವಿದೆ ಹೇಳಿ!
ಈ ಕುರಿತಾದ ಕಾನೂನು ಅಥವಾ ನಿರ್ಬಂಧನೆಗಳನ್ನು ಸಿಯುಕೆ ಆಯ್ಕೆ ಸಮಿತಿಯಲ್ಲಿದ್ದ ಪುಣ್ಯಾತ್ಮರು ಯಾರಾದರೂ ಅರ್ಥ ಮಾಡಿಸಬೇಕಾದಷ್ಟು ಮೂರ್ಖರಾಗಿದ್ದರಾ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಹಾಗಾಗಿ, ತಕ್ಷಣ ಆಶಿಶ್ ದಯಾನಂದ ಅವರನ್ನು ಸಿಯುಕೆ ಹುದ್ದೆಯಿಂದ ಬಿಡುಗಡೆಗೊಳಿಸಿ ಕಾನೂನಾತ್ಮಕ ಶಿಕ್ಷೆಗೆ ಶಿಫಾರಸು ಮಾಡಿದರೆ ತನ್ನ ಘನತೆ ಮತ್ತು ಗೌರವ ಉಳಿಸಿಕೊಳ್ಳಲು ಸಾಧ್ಯವಿದೆ.
ಎಲ್ಲಕ್ಕಿಂತಲೂ ಮುಖ್ಯವಾದ ಒಂದು ಪಾಯಿಂಟ್ ಏನೆಂದರೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಆಶಿಶ್ ದಯಾನಂದ ಅಗಸರ್ ನೇಮಕಾತಿ ಆದ ಆರೇಳು ತಿಂಗಳಲ್ಲಿ ಆತನಿಗೆ ಪಿಎಚ್ ಡಿ ಪದವಿ ನೀಡಿದ್ದ ಒಪಿಜೆಎಸ್ ವಿಶ್ವವಿದ್ಯಾಲಯ ಯುಜಿಸಿ ಅನುಮತಿಯೇ ಇಲ್ಲದೆ ಬೇಕಾಬಿಟ್ಟಿಯಾಗಿ ಪಿಎಚ್ಡಿಗಳನ್ನು ನೀಡುತ್ತಿದೆ ಎಂದು ಸ್ವತಃ ಮತ್ತೊಮ್ಮೆ ಯುಜಿಸಿ ಈ ವಿಶ್ವವಿದ್ಯಾಲಯವನ್ನು ಬ್ಲಾಕ್ಲಿಸ್ಟ್ಗೆ ಸೇರಿಸಿ ಪ್ರಕಟಣೆಯೊಂದನ್ನು ಹೊರಡಿಸಿದೆ.
ಪರಮಾಶ್ಚರ್ಯವೆಂದರೆ, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಕೇಂದ್ರ ಶಿಕ್ಷಣ ಇಲಾಖೆಯೊಂದಿಗೆ ಅತ್ಯಂತ ನಿಕಟವಾಗಿ ಕಾರ್ಯನಿರ್ವಹಿಸುವ ಸಿಯುಕೆ ವೈಸ್ ಚಾನ್ಸ ಲರ್ ಬಟ್ಟು ಸತ್ಯನಾರಾಯಣ ಅವರಿಗಾಗಲಿ, ಮಗನ ನೇಮಕಾತಿಯಲ್ಲಿ ಸಿಕ್ಕಾಪಟ್ಟೆ ಮುತುವರ್ಜಿ ವಹಿಸಿರುವ ಪ್ರೊ.ದಯಾನಂದ ಅಗಸರ್ ಅವರಿಗಾಗಲಿ ಈ ಕುರಿತು ಒಂದಿಷ್ಟೂ ಆತ್ಮ ಸಾಕ್ಷಿ ಕಾಡಿದಂತೆ ಕಾಣುತ್ತಿಲ್ಲ. ಹೀಗಾಗಿ, ಇಂದಿಗೂ ನಕಲಿ ಪಿಎಚ್ಡಿ ಸರ್ಟಿಫಿಕೆಟ್ ಮೇಲೆ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ ಗಳಿಸಿರುವ ಆಶಿಶ್ ದಯಾನಂದ ಅಗಸರ್ ಮಾತ್ರ ಇನ್ನೂ ಅದೇ ಹುದ್ದೆಯಲ್ಲಿ ಮುಂದುವರೆದಿರುವುದು ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಪಿಎಚ್ ಡಿ ಪದವಿ ಪಡೆದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಅಳಿಸಲಾಗದ ಗಾಯ ಉಂಟು ಮಾಡಿದೆ.
ದುರಂತವೆಂದರೆ, ಇದ್ಯಾವುದೂ ತಮಗ್ಯಾರಿಗೂ ಗೊತ್ತೇ ಇಲ್ಲ ಎನ್ನುವಂತೆ ಈ ಅಕ್ರಮದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರೂ ನೆಮ್ಮದಿಯಾಗಿ ಬದುಕು ಸಾಗಿಸುತ್ತಿದ್ದಾರೆ.
ಮಿರೇ ಅಸೆಟ್ ಫೌಂಡೇಷನ್ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…
ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…
ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್ನಲ್ಲಿ…
ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…
ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…
ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…
View Comments
Ugc qualification declaration eligibility pls give phd seat