ಐದು ವರ್ಷಗಳ ಮೇಲ್ಪಟ್ಟು ಸಂಘ-ಸoಸ್ಥೆಗಳನವೀಕರಣ ಮಾಡಲು ಅವಕಾಶ.!

ಬೀದರ.15.ಮಾರ್ಚ.25:-ಬೀದರ ಜಿಲ್ಲೆಯಲ್ಲಿ ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960 ರಡಿಯಲ್ಲಿ ನೊಂದಣಿಯಾಗಿರುವ ಸೂಸೈಟಿಗಳು/ಸಂಘ-ಸAಸ್ಥೆಗಳು 05 ವರ್ಷಗಳಿಗೆ ಮೇಲ್ಪಟ್ಟು ಫೈಲಿಂಗ್ ಮಾಡಿಕೊಳ್ಳದೇ ಬಾಕಿ ಇರುವ ಸಂಘ-ಸoಸ್ಥೆಗಳು ಪ್ರತಿ ವರ್ಷಕ್ಕೆ ರೂ.3000 ಹೆಚ್ಚುವರಿ ದಂಡ ಪಾವತಿಸಿ ಫೈಲಿಂಗ್ ಮಾಡಿಕೊಳ್ಳತಕ್ಕದ್ದು.

ಈ ಅವಕಾಶವು ದಿನಾಂಕಃ 31-12-2025 ರ ಅಂತ್ಯದವರೆಗೆ ಜಾರಿಯಲ್ಲಿರುತ್ತದೆ ಬೀದರ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಜಿಲ್ಲಾ ನೊಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960 ರಡಿ ನೊಂದಣಿಯಾದ ಪ್ರತಿಯೊಂದು ಸಂಘವು ಪ್ರತಿ ವರ್ಷ ನವೀಕರಣಗೊಳ್ಳಬೇಕಾಗಿರುತ್ತದೆ. 05 ವರ್ಷಗಳಿಗೂ ಮೇಲ್ಪಟ್ಟು ನವೀಕರಿಸದೇ/ಫೈಲಿಂಗ್ ಮಾಡದೇ ಬಾಕಿ ಇರುವ ಸಂಘ-ಸoಸ್ಥೆಗಳ ನೊಂದಣಿಯನ್ನು ಕಲಂ 13 ರಂತೆ ರದ್ದುಗೊಳಿಸಲು ಕಾಯ್ದೆಯಲ್ಲಿ ಅವಕಾಶ ಇರುತ್ತದೆ.

ಸಂಘ-ಸoಸ್ಥೆಗಳ ಸದಸ್ಯರ ಹಿತದೃಷ್ಟಿಯಿಂದ ಮತ್ತೊಂದು ಬಾರಿದಂಡ ವಿಧಿಸಿ ದಿ: 31-12-2025 ರವರೆಗೆ ನವೀಕರಿಸಲು/ಫೈಲಿಂಗ್ ಮಾಡಲು ಅನುಮತಿಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಐದು ವರ್ಷಗಳಿಗೆ ಮೇಲ್ಪಟ್ಟು ನವೀಕರಣಕ್ಕಾಗಿ ಬಂದ ಸಂಘ-ಸoಸ್ಥೆಗಳ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಎಲ್ಲಾ ದಾಖಲಾತಿಗಳನ್ನು ಮುದ್ದಾಂ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘ-ಸoಸ್ಥೆಗಳ ಜಿಲ್ಲಾ ನೊಂದಣಾಧಿಕಾರಿಗಳು, ಬೀದರ ಈ ಕಚೇರಿಗೆ ಸಲ್ಲಿಸತಕ್ಕದ್ದು.

ಇಲ್ಲದಿದ್ದರೆ ದಿನಾಂಕಃ31-12-2025 ರ ನಂತರ ಫೈಲಿಂಗ್ ಮಾಡಿಕೊಳ್ಳದೆ ಬಾಕಿ ಇರುವ 05 ವರ್ಷ ಮೇಲ್ಪಟ್ಟ ಸಂಘ-ಸoಸ್ಥೆಗಳ ರದ್ದತಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘ-ಸAಸ್ಥೆಗಳ ಜಿಲ್ಲಾ ನೊಂದಣಾಧಿಕಾರಿಗಳು, ಬೀದರ ಇವರಿಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

prajaprabhat

View Comments

Recent Posts

ಸರ್ಕಾರಿ ಕಾಲೇಜುಗಳಲ್ಲಿ ನೇಮಕಾತಿಗಾಗಿ ಯುಜಿಸಿ ನಿರ್ದಿಷ್ಟಪಡಿಸಿದ ಅರ್ಹತೆಗಳನ್ನು ಪೂರೈಸಬೇಕು ಎಂದು ತೀರ್ಪು ನೀಡಿದೆ.

ಬೆಂಗಳೂರು.ಯುಜಿಸಿ ಅತಿಥಿ ಅಧ್ಯಾಪಕರ ಕುರಿತಾದ ಇತ್ತೀಚಿನ ಸುತ್ತೋಲೆಗಳು ಸಾಮಾನ್ಯವಾಗಿ ಅವರ ನೇಮಕಾತಿ, ಅರ್ಹತೆಗಳು ಮತ್ತು ಗೌರವ ಧನಕ್ಕೆ ಸಂಬಂಧಿಸಿದ ವಿಷಯಗಳನ್ನು…

28 minutes ago

ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸಿದೆ; ಯುಜಿಸಿ ಅರ್ಹರಿಗೆ ದಿನಕ್ಕೆ 2,200 ವೇತನ ಕಾಲೇಜು ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ.

ಅತಿಥಿ ಉಪನ್ಯಾಸಕರ ವೇತನವನ್ನು UGC Eligibility ಯುಜಿಸಿ ಅರ್ಹತೆ ಹೊಂದಿರುವವರಿಗೆ ದಿನಕ್ಕೆ ರೂ. 1750/- ದರದಲ್ಲಿ ತಿಂಗಳಿಗೆ ಗರಿಷ್ಠ ರೂ.…

40 minutes ago

UGC ನಿಯಮವು ಏಕಕಾಲದಲ್ಲಿ ಎರಡು ಪದವಿಗಳನ್ನು ಪಡೆಯಲು ಅವಕಾಶ ನೀಡುತ್ತದೆ – 2025

ಹೊಸ UGC ನಿಯಮವು ಏಕಕಾಲದಲ್ಲಿ ಎರಡು ಪದವಿಗಳನ್ನು ಪಡೆಯಲು ಅವಕಾಶ ನೀಡುತ್ತದೆ - 2025 ಶೈಕ್ಷಣಿಕ ವರ್ಷಕ್ಕೆ ಪೂರ್ಣ ಮಾರ್ಗಸೂಚಿಗಳು…

1 hour ago

ಭಾಲ್ಕಿ ತಾಲೂಕನ್ನು ಗುಡಿಸಲು ಮುಕ್ತ* <br>ಮಾಡುವುದೇ ಮುಖ್ಯ ಗುರಿ-ಸಚಿವ ಈಶ್ವರ ಖಂಡ್ರೆ

ಬೀದರ.12.ಜೂನ್.25:- ಭಾಲ್ಕಿ ತಾಲೂಕನ್ನು ಗುಡಿಸಲು ಮುಕ್ತನಾಗಿ ಮಾಡುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವರಾದ…

2 hours ago

ರೋಹಿಣಿ ಸಿಂಧೂರಿ ಸಹಿತ ಮೂವರು IAS ಅಧಿಕಾರಿಗಳು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು.12.ಜೂನ್.25:- ರಜ್ಯದಲ್ಲಿ IAS ಮತ್ತು IPS ಮೂರು ಅಧಿಕಾರಿಗಳ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ರೋಹಿಣಿ ಸಿಂಧೂರಿ ಸಹಿತ…

2 hours ago

ಮೌಂಟ್ ಎವರೆಸ್ಟ್ ಶಿಖರವನ್ನೇರಿದ ಎನ್‌ಸಿಸಿ ಕೆಡೆಟ್‌ಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸನ್ಮಾನಿಸಿದರು.

ಹೊಸ ದೆಹಲಿ.12.ಜೂನ್.25:- ಇತ್ತೀಚೆಗೆ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಕೆಡೆಟ್‌ಗಳನ್ನು ನವದೆಹಲಿಯಲ್ಲಿ ರಕ್ಷಣಾ ಸಚಿವ…

3 hours ago