2009ರಲ್ಲಿ ನೇಮಕವಾದ ಸಹಾಯಕ ಪ್ರಾಧ್ಯಾಪಕರಿಗೆ ಆತಂಕ
ಪ್ರಮಾಣಪತ್ರಗಳು ನಕಲಿಯಾಗಿ ದ್ದಲ್ಲಿ ಅಥವಾ ನ್ಯೂನತೆ ಕಂಡು ಬಂದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿ ಸಬೇಕು. ಈ ಬಗ್ಗೆಸೆ. 30ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ತುಕಾರಾಮ ಕಲ್ಯಾಣಕರ, ಅಧೀನ ಕಾರ್ಯದರ್ಶಿ ……. .. ಕಾಲೇಜು ಶಿಕ್ಷಣ ಇಲಾಖೆ
ನಮ್ಮಲ್ಲಿ 2009ರಲ್ಲಿ ನೇಮಕವಾದ ಸಹಾಯಕ ಪ್ರಾಧ್ಯಾಪಕರು ಹೊರ ರಾಜ್ಯದ ಎಂ.ಫಿಲ್, ಪಿಎಚ್.ಡಿ ಪ್ರಮಾಣಪತ್ರ ನೀಡಿದ್ದಲ್ಲಿ ಸಿಂಧುತ್ವ ಪರಿಶೀಲಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು……… ಹೆಸರು ಹೇಳಲಿಚ್ಛಿಸದ ಪ್ರಾಂಶುಪಾಲರು, ಮೈಸೂರು
ಮೈಸೂರು:
ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2009ರಲ್ಲಿ ಪ್ರಥಮ ದರ್ಜೆ ಕಾಲೇಜುಗಳಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕವಾಗುವಾಗ ಹೊರ ರಾಜ್ಯದ ಎಂ.ಫಿಲ್ ಪ್ರಮಾಣಪತ್ರ ನೀಡಿರುವವರು ತೊಂದರೆಗೆ ಸಿಲುಕಿಗೊಳ್ಳುವ ಸಾಧ್ಯತೆ ಇದೆ. ಆ ವರ್ಷ ರಾಜ್ಯ ಸರ್ಕಾರ ಕೆಪಿಎಸ್ಸಿ ಮೂಲಕ 2,250 ಮಂದಿಯನ್ನು ಸಹಾಯಕ ಪ್ರಾಧ್ಯಾಪ ಕರಾಗಿ ನೇಮಕ ಮಾಡಿಕೊಂಡಿತ್ತು. ಇವರೆಲ್ಲ 2007ರಲ್ಲಿ ಅರ್ಜಿ ಸಲ್ಲಿಸಿದ್ದವರು.
ನೇಮಕವಾ ದವರು ರಾಷ್ಟ್ರೀಯ ಅರ್ಹತಾ ಪರೀಕ್ಷೆ, ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ಪಾಸಾಗಿರು ವುದು ಕಡ್ಡಾಯವಾಗಿತ್ತು. ಪಿಎಚ್.ಡಿ ಮತ್ತು ಎಂ.ಫಿಲ್ ಆದವರಿಗೆ ವಿನಾಯ್ತಿ ನೀಡಲಾಗಿತ್ತು. ಆಗ ನೇಮಕವಾದವರಲ್ಲಿ 1,718 ಮಂದಿ ಎಂ.ಫಿಲ್ ಪ್ರಮಾಣಪತ್ರ ಸಲ್ಲಿಸಿದ್ದರು. ಅವರ ಲ್ಲಿ 1,500 ಮಂದಿ ಭಾರತೀದಾಸನ್, ಅಳಗ ಪ್ಪನ್, ಆಣ್ಣಾಮಲೈ ವಿವಿಗಳಿಂದ ದೂರ ಶಿಕ್ಷಣ ದ ಮೂಲಕ ಎಂ.ಫಿಲ್ ಪಡೆದವರು.
ರಾಜ್ಯದ ಸಾಂಪ್ರದಾಯಿಕ ವಿವಿಗಳಲ್ಲಿ ಎಂ.ಫಿಲ್ ಪಡೆಯಲು ಎರಡು ವರ್ಷ ಅಧ್ಯಯನ ಮಾಡಬೇಕು. ಆದರೆ, ದೂರ
ಶಿಕ್ಷಣದಲ್ಲಿ ನೋಂದಾಯಿಸಿಕೊಂಡು ಎರಡು- ಮೂರು ತಿಂಗಳಿಗೆಲ್ಲ ಎಂ.ಫಿಲ್ ಪಡೆದಿದ್ದಾರೆ. ಇವೆಲ್ಲ ನಕಲಿ, ಅವುಗಳ ನೈಜತೆಯನ್ನು ದೃಢೀಕರಿಸಿಕೊಂಡಿಲ್ಲ. ಆದ್ದರಿಂದ ನೇಮಕಾತಿ ತಡೆದು, ನಮಗೆ ಅವಕಾಶ ನೀಡಬೇಕು ಎಂದು ಸಹಾಯಕ ಪ್ರಾಧ್ಯಾಪಕ ಹುದ್ದೆ ಸಿಗದ ನೊಂದ ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು.
ಅಲ್ಲಿ ನ್ಯಾಯ ಸಿಗದಿದ್ದಾಗ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲಿಂದ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು. ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು. ಆದರೆ, ಅಂದಿನ ಶಿಕ್ಷಣ ಸಚಿವರು ಯಾವುದೇ ಕ್ರಮ
ಕೈಗೊಳ್ಳಲಿಲ್ಲ. ಇವರಿಗೆಲ್ಲ 2010ರಲ್ಲಿ ಪ್ರೊಬೆಷನರಿ ಅವಧಿಕೂಡಘೋಷಣೆಯಾಗಿದೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕವಾದ ವರ ಎಂ.ಫಿಲ್ ಪ್ರಮಾಣಪತ್ರ ಪರಿಶೀಲಿಸು ವಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅದರಂತೆ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಜೂ. 9ರಂದು ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ವೃಂದದವರು ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಿಂದ ಪಡೆದ ఎం.ఫిలా, ಪ್ರಮಾಣಪತ್ರಗಳ ಸಿಂಧುತ್ವ ಪರಿಶೀಲಿಸುವಂತೆ ಸುತ್ತೋಲೆ ಕಳುಹಿಸಿದ್ದಾರೆ.
ಶಿಕ್ಷಣ ವ್ಯವಸ್ಥೆಯ ಬದಲಾವಣೆಯು ಗುಣಮಟ್ಟವನ್ನು ದುರ್ಬಲಗೊಳಿಸಬಾರದು. ಆದ್ದರಿಂದ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ತನ್ನ ಕರಡು ನಿಯಮಾವಳಿಗಳನ್ನು ಪುನರ್ ಪರಿಶೀಲಿಸಬೇಕು'…
ಅಭಿ ಪಿಕ್ಚರ್ ಬಾಕಿ ಹೈ; ಅಣು ಬಾಂಬ್ ಬೆನ್ನಲ್ಲೇ ಕುತೂಹಲ ಮೂಡಿಸಿದ ರಾಹುಲ್ ಹೇಳಿಕೆ ಚುನಾವಣಾ ಆಯೋಗವು 'ಒಬ್ಬ ವ್ಯಕ್ತಿ,…
ಹೊಸ ದೆಹಲಿ.12.ಆಗಸ್ಟ್.25:- ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಇಂದು ನವದೆಹಲಿಯಲ್ಲಿ ತನ್ನ ಎರಡು ವಾರಗಳ ಆನ್ಲೈನ್ ಅಲ್ಪಾವಧಿಯ ಇಂಟರ್ನ್ಶಿಪ್…
ಹೊಸ ದೆಹಲಿ.12.ಆಗಸ್ಟ್.25:- ಲೋಕಸಭೆಯು ಭಾರತೀಯ ಬಂದರುಗಳ ಮಸೂದೆ, 2025 ಅನ್ನು ಅಂಗೀಕರಿಸಿದೆ. ಈ ಮಸೂದೆಯು ಬಂದರುಗಳಿಗೆ ಸಂಬಂಧಿಸಿದ ಕಾನೂನನ್ನು ಕ್ರೋಢೀಕರಿಸಲು,…
ಹೊಸ ದೆಹಲಿ.12.ಆಗಸ್ಟ್.25:- ಒಡಿಶಾ, ಪಂಜಾಬ್ ಮತ್ತು ಆಂಧ್ರಪ್ರದೇಶದಲ್ಲಿ ಅಂದಾಜು ನಾಲ್ಕು ಸಾವಿರದ 594 ಕೋಟಿ ರೂಪಾಯಿಗಳ ನಾಲ್ಕು ಹೊಸ ಸೆಮಿಕಂಡಕ್ಟರ್…
ಹೊಸ ದೆಹಲಿ.12.ಆಗಸ್ಟ್.25:- ಕಚ್ಚಾ ತೈಲ ಬೆಲೆ ಇಂದು ಕುಸಿದಿದೆ. ಕೊನೆಯದಾಗಿ ವರದಿಗಳು ಬಂದಾಗ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್ಗೆ 66…