ಉತ್ತರ ಪ್ರದೇಶದಲ್ಲಿ.ಅಂಬೇಡ್ಕರ್, ಬುದ್ಧನ ಪ್ರತಿಮೆ ತೆರವು, ಉದ್ವಿಗ್ನತೆ, 8 ಪೊಲೀಸರಿಗೆ ಗಾಯ

ಸೀತಾಪುರ.06.ಏಪ್ರಿಲ್.25:-  ಅಧಿಕಾರಿಗಳ ಪ್ರಕಾರ, ಮಾರ್ಚ್ 11 ರಂದು ಪಂಚಾಯತ್ ಭವನದ ಮುಂಭಾಗದಲ್ಲಿ ಗ್ರಾಮಸ್ಥರು ಪ್ರತಿಮೆ ಪ್ರತಿಷ್ಠಾಪಿಸಿದ್ದರು. ದೂರಿನ ಮೇರೆಗೆ ತಹಸಿಲ್ ಆಡಳಿತ ಮಾರ್ಚ್ 12 ರಂದು ಪ್ರತಿಮೆಗೆ ತೆರವಿಗೆ ನೋಟಿಸ್ ನೀಡಿತ್ತು.ಆದರೆ, ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರತಿಮೆಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು.

ಬಳಿಕ ಹೊಸ ಸೂಚನೆಗಳ ಮೇರೆಗೆ ತಂಡವೊಂದು ಬುಲ್ಡೋಜರ್‌ನೊಂದಿಗೆ ಪ್ರತಿಮೆಗಳನ್ನು ತೆರವುಗೊಳಿಸಿದೆ. ಪೊಲೀಸರು ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಪ್ರತಿಮೆ ತೆರವಿಗೆ ಸಜ್ಜಾಗುತ್ತಿದ್ದಂತೇಅವರತ್ತ ಗ್ರಾಮಸ್ಥರ ಗುಂಪೊಂದು ಕಲ್ಲು ತೂರಾಟಕ್ಕೆ ಮುಂದಾಗಿದೆ.ಘಟನೆಯಲ್ಲಿ ಎಂಟು ಪೊಲೀಸರಿಗೆ ಗಾಯವಾಗಿದ್ದು, ಸರ್ಕಲ್ ಅಧಿಕಾರಿಯ ವಾಹನಕ್ಕೆ ಹಾನಿಯಾಗಿದೆ. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ಗಲಾಟೆ ವೇಳೆ ಕೆಲ ಗ್ರಾಮಸ್ಥರು ಕೂಡಾ ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ರಂಜನ್ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಭಗವನ್ ಬುದ್ಧನ ಪ್ರತಿಮೆ ತೆರವು ವಿಚಾರದಲ್ಲಿ ಗ್ರಾಮಸ್ಥರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ ನಂತರ ಉತ್ತರ ಪ್ರದೇಶ ಜಿಲ್ಲೆಯ ವಿಭಾರಾಪುರ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಗ್ರಾಮಸ್ಥರು ಕಲ್ಲು ತೂರಾಟ ನಡೆಸಿ ಘರ್ಷಣೆ ನಡೆಸಿದ್ದರಿಂದ ಕನಿಷ್ಠ ಎಂಟು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳ ಪ್ರಕಾರ, ಮಾರ್ಚ್ 11 ರಂದು ಪಂಚಾಯತ್ ಭವನದ ಮುಂಭಾಗದಲ್ಲಿ ಗ್ರಾಮಸ್ಥರು ಪ್ರತಿಮೆ ಪ್ರತಿಷ್ಠಾಪಿಸಿದ್ದರು. ದೂರಿನ ಮೇರೆಗೆ ತಹಸಿಲ್ ಆಡಳಿತ ಮಾರ್ಚ್ 12 ರಂದು ಪ್ರತಿಮೆಗೆ ತೆರವಿಗೆ ನೋಟಿಸ್ ನೀಡಿತ್ತು.

ಆದರೆ, ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರತಿಮೆಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು. ಶನಿವಾರ ಮಹೋಲಿಯಲ್ಲಿ ನಡೆದ ಕುಂದುಕೊರತೆ ನಿವಾರಣಾ ಕಾರ್ಯಕ್ರಮದಲ್ಲಿ ಈ ವಿಷಯ ಮರುಕಳಿಸಿದೆ.

ಹೊಸ ಸೂಚನೆಗಳ ಮೇರೆಗೆ ತಂಡವೊಂದು ಬುಲ್ಡೋಜರ್‌ನೊಂದಿಗೆ ವಿವಾದಿತ ಸ್ಥಳದಿಂದ ಪ್ರತಿಮೆಗಳನ್ನು ತೆರವುಗೊಳಿಸಿದೆ. ಪೊಲೀಸರು ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಪ್ರತಿಮೆ ತೆರವಿಗೆ ಸಜ್ಜಾಗುತ್ತಿದ್ದಂತೆೇ ಅವರತ್ತ ಗ್ರಾಮಸ್ಥರ ಗುಂಪೊಂದು ಕಲ್ಲು ತೂರಾಟಕ್ಕೆ ಮುಂದಾಗಿದೆ.

ಘಟನೆಯಲ್ಲಿ ಎಂಟು ಪೊಲೀಸರಿಗೆ ಗಾಯವಾಗಿದ್ದು, ಸರ್ಕಲ್ ಅಧಿಕಾರಿಯ ವಾಹನಕ್ಕೆ ಹಾನಿಯಾಗಿದೆ. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ಗಲಾಟೆ ವೇಳೆ ಕೆಲ ಗ್ರಾಮಸ್ಥರು ಕೂಡಾ ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ರಂಜನ್ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ತೊಡಗಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇತರ ಆರೋಪಿಗಳ ಬಂಧನಕ್ಕಾಗಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

prajaprabhat

Recent Posts

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ : 2025-26ನೇ ಸಾಲಿನ ‘NMMSS’ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

2025-26 ನೇ ಶೈಕ್ಷಣಿಕ ಸಾಲಿಗೆ NMMS ವಿದ್ಯಾರ್ಥಿ ವೇತನಕ್ಕಾಗಿ, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP)…

5 hours ago

ಸರಕಾರಿ ಪದವಿ ಕಾಲೇಜುಗು ಈಗ ಖಾಸಗಿ ಕಾಲೇಜುಗಳಂತೆ : ಡಾ.ಎಂ.ಸಿ.ಸುಧಾಕರ್

ಚಿಕ್ಕಮಗಳೂರು.15.ಜೂನ್.25:- ರಾಜ್ಯ ಸರಕಾರ ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಖಾಸಗಿ ಕಾಲೇಜುಗಳಂತೆ…

6 hours ago

ಜೂ.16 ರಂದು ಎನ್‌ಎಬಿಎಲ್ ಮಾನ್ಯತೆ,<br>ಅದರ ಲಾಭಗಳು ಕುರಿತು ಜಾಗೃತಿ ಕಾರ್ಯಕ್ರಮ

ಬೀದರ.14.ಜೂನ್.25:- ಬೀದರ ತೋಟಗಾರಿಕೆ ಮಹಾವಿದ್ಯಾಲಯ, ರಿವರ್ಡ ಯೋಜನೆ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ಬೀದರ, ರಾಷ್ಟ್ರೀಯ ಪರೀಕ್ಷೆ ಮತ್ತು ಅಂಶಶೋಧನಾ ಪ್ರಯೋಗಾಲಯಗಳ…

13 hours ago

ಜೂ.15 ರಿಂದ 17 ರವರೆಗೆ ವಿವಿಧ ಲಿಖಿತ ಪರೀಕ್ಷೆ: ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ

ಬೀದರ.14.ಜೂನ್.25:-ದಿನಾಂಕ: 15-06-2025 ರಿಂದ 17-06-2025 ರವರೆಗೆ ಸಿ.ಆರ್.ಪಿ/ಬಿ.ಆರ್.ಪಿ/ಇ.ಸಿ.ಓ/ತಾಂತ್ರಿಕ ಸಹಾಯಕರು ಪ್ರಾಥಮಿಕ ಮತ್ತು ಪ್ರೌಢ ವಿಭಾಗಗಳಿಗೆ ಹಾಗೂ ಗ್ರೂಪ್-ಬಿ ವೃಂದದ ಸಮನಾಂತರ…

13 hours ago

UGC NET 2025 ಪರೀಕ್ಷಾ ಪ್ರವೇಶ ಪತ್ರ  ಡೌನ್‌ಲೋಡ್ ಬಗ್ಗೆ ಮಾಹಿತಿ..

ಹೊಸ ದೆಹಲಿ.14.ಜೂನ್.25:- UGC NET 2025 ಪರೀಕ್ಷೆಯನ್ನು ಜೂನ್ 25 ರಿಂದ ಜೂನ್ 29, 2025 ರವರೆಗೆ ದೇಶಾದ್ಯಂತ ವಿವಿಧ…

17 hours ago

ಜೂನ್. 16 ರಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರ ಕೊಪ್ಪಳ ಜಿಲ್ಲಾ ಪ್ರವಾಸ

ಕೊಪ್ಪಳ. ಜೂನ್. 14.( ಕರ್ನಾಟಕ ವಾರ್ತೆ):- ಕಾನೂನು. ನ್ಯಾಯ. ಮಾನವ ಹಕ್ಕುಗಳು. ಸಂಸದೀಯ ವ್ಯವಹಾರ. ಶಾಸನ ರಚನೆ ಹಾಗೂ ಪ್ರವಾಸೋದ್ಯಮ…

17 hours ago