ಉ.ಪ್ರ.ಬೀದರ ಯಾತ್ರಿಕರ ದುರ್ಮರಣ ಮೃತರ ಶವಗಳು ಸ್ವಗ್ರಾಮಕ್ಕೆ ತಲುಪಲಿವೆ.

ಬೀದರ.23.ಫೆಬ್ರುವರಿ.25:- ಬೀದರ ನಗರದ ಲಾಡಗೇರಿ ಬಡಾವಣೆಯ 14 ನಿವಾಸಿಗಳು ಪ್ರಯಾಗರಾಜಿಗೆ ಪ್ರಯಾಣ ಕೈಗೊಂಡಿರುತ್ತಾರೆ, ದಿನಾಂಕ 21.02.2025 ರಂದು ಸದರಿ ಪ್ರವಾಸಿಗಳು ಕ್ರೊಸರ್ ಮೂಲಕ ಕಾಶಿ (ವಾರಣಾಸಿ) ಯಿಂದ ಪ್ರಯಾಗರಾಜಿಗೆ ಪ್ರಯಾಣಿಸಿತ್ತಿರುವ ಸಂದರ್ಭದಲ್ಲಿ ಮಿರ್ಜಾಮುರಾದ್ ಹತ್ತಿರ ಲಾರಿ ಮತ್ತು ಕ್ರೂಸರ್ ಮಧ್ಯದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 14 ಜನ ಪ್ರಯಾಣಿಕರ ಪೈಕಿ (1) ಸಂತೋಷ ತಂದೆ ಗೋವಿಂದ (2) ಸುನೀತಾ ಗಂಡ ಸಂತೋಷ (3) ನಿಲಮ್ಮಾ ಗಂಡ ಗೋವಿಂದ (4) ಲಕ್ಷ್ಮೀಬಾಯಿ ಗಂಡ ಸುರೇಶ (5) ಕಲಾವತಿ ಗಂಡ ವೈದ್ಯರಾಜ ಇವರುಗಳು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಹಾಗೂ ಒಬ್ಬರು ಸುಲೋಚನಾ ಗಂಡ ಚಂದ್ರಕಾಂತ ಇವರು ಚಿಕಿತ್ಸೆ ಪಡೆಯುವಾಗ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

ಈ ಮೃತಪಟ್ಟವರ ಶವಗಳನ್ನು ಫ್ರೀಜರ್ ವಾಹನದ ಮೂಲಕ ದಿನಾಂಕ: 22-02-2025 ರಾತ್ರಿ 11:40 ಗಂಟೆಗೆ BHU Trauma Centre    ವಾರಣಾಸಿ ಆಸ್ಪತ್ರೆಯಿಂದ ಬೀದರಗೆ ಹೊರಡಿರುತ್ತವೆ. ದಿನಾಂಕ 24.02.2025 ರಂದು ಮಧ್ಯಾಹ್ನ 2:00 ಗಂಟೆಯವರೆಗೆ ಬೀದರಗೆ ತಲುಪಲ್ಲಿದಾರೆ. ಬೀದರ ಜಿಲ್ಲಾಡಳಿತವು ವಾರಣಾಸಿ ಜಿಲ್ಲಾಡಳಿತದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತದೆ ಹಾಗೂ ವಾರಾಣಾಸಿ ಜಿಲ್ಲಾಡಳಿತದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


08 ಜನ ಗಾಯಾಳುಗಳ ಪೈಕಿ ಒಬ್ಬ ಗಾಯಾಳು (ಭಗವಂತ ತಂದೆ ನಂದಕುಮಾರ) ವ್ಯಕ್ತಿಯು ದಿಕ್ಕಿನ ಪ್ರಜ್ಞೆಯನ್ನು ಕಳೆದುಕೊಂಡಿರುತ್ತಾರೆ ಹಾಗೂ ಚಿಕಿತ್ಸೆಗೆ ಒಳಪಟ್ಟಿರುತ್ತಾರೆ, ಸದರಿ ವ್ಯಕ್ತಿಯ ಜೊತೆಯಲ್ಲಿ ಜಿಲ್ಲಾಡಳಿತ ವತಿಯಿಂದ ಎರಡು ಪೊಲೀಸ್ ಸಿಬ್ಬಂದಿಗಳನ್ನು ಇರಿಸಲಾಗಿರುತ್ತದೆ, ಸದರಿ ಗಾಯಾಳು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ ನಂತರ ಬೀದರಗೆ ಕರೆತರಲಾಗುವುದು, ಇನ್ನುಳಿದ 07 ಜನ ಗಾಯಾಳುಗಳಾದ (1) ಅನೀತಾ ಗಂಡ ಶಂಕರ (2) ಸಾಯಿ ತಂದೆ ಶ್ರೀನಿವಾಸ (3) ಶಿವಾ ತಂದೆ ಸಂತೋಷ (4) ಗಣೇಶ ತಂದೆ ಸಂತೋಷ (5) ಖುಷಿ ತಂದೆ ಶಂಕರ (6) ಸುಜಾತಾ (7) ಕವಿತಾ ವಿಮಾನದ ಮೂಲಕ ಹೈದ್ರಾಬಾದಗೆ ಕರೆತಂದು ಹೈದ್ರಾಬಾದಿನಿಂದ ಬೀದರಗೆ ಅಂಬುಲನ್ಸ್ ಮೂಲಕ  ಕರೆತರಲು ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

prajaprabhat

Recent Posts

ರಾಜ್ಯದಲ್ಲಿ ನಾಳೆಯಿಂದ ಭಾರೀ ಮಳೆ’ ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…

2 hours ago

ಪರಿಶಿಷ್ಟ ಜಾತಿ ಒಳ ಮೀಸಲಾತಿ’ ಸಮೀಕ್ಷಾ ಅವಧಿ ಜೂನ್ 22 ರವರೆಗೆ ವಿಸ್ತರಣೆ

ಬೆಂಗಳೂರು.09.ಜೂನ್.25:- ನ್ಯಾಯಮೂರ್ತಿ ಡಾ:ಹೆಚ್.ಎನ್.ನಾಗಮೋಹನ್ ದಾಸ್, ಏಕ ಸದಸ್ಯ ಆಯೋಗ ರಾಜ್ಯ ಸರ್ಕಾರದಿಂದ 'ಪರಿಶಿಷ್ಟ ಜಾತಿ ಒಳ ಮೀಸಲಾತಿ' ಸಮೀಕ್ಷಾ ಕಾರ್ಯ…

2 hours ago

ಗ್ರೇಟಾ ಥನ್‌ಬರ್ಗ್ ಅವರ ಸಹಾಯ ದೋಣಿ ಗಾಜಾ ಪ್ರವೇಶಿಸುವುದನ್ನು ತಡೆಯುವುದಾಗಿ ಇಸ್ರೇಲ್ ಭರವಸೆ ನೀಡಿದೆ 08 ಜೂನ್, 2025 ರಾಷ್ಟ್ರೀಯ<br>

ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಸೇರಿದಂತೆ ಅಂತರರಾಷ್ಟ್ರೀಯ ಕಾರ್ಯಕರ್ತರು ಮತ್ತು ಮಾನವೀಯ ನೆರವಿನೊಂದಿಗೆ ಗಾಜಾ ಪಟ್ಟಿಗೆ ಪ್ರವೇಶಿಸುವ ದತ್ತಿ…

3 hours ago

2025-26ನೇ ಸಾಲಿಗೆ ಪದವಿ ಪೂರ್ವ ಕಾಲೇಜುಗಳಲ್ಲಿ ವಿಷಯವಾರು ಹುದ್ದೆಗಳು ಖಾಲಿ ಇಂದೇ ಅರ್ಜಿ ಹಾಕಿ.

ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 2025-26ನೇ ಸಾಲಿಗೆ ವಿಷಯವಾರು ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳು ನೇಮಕ ಮಾಡಿಕೊಳ್ಳಲು…

3 hours ago

UGC-NET ಜೂನ್ 2025 ರ ಪರೀಕ್ಷಾ ವೇಳಾಪಟ್ಟಿ ಮತ್ತು  ನೋಂದಣಿ

ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…

9 hours ago

ಬೀದರ್‌’ನಲ್ಲಿ ಮೀನು ನುಂಗಿ ರೋಗ ಗುಣಮುಖ ವಿಶಿಷ್ಟ ಆಚರಣೆ

ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…

11 hours ago