ಆರೋಗ್ಯವೇ ಭಾಗ್ಯ : ಜನರ ಸೇವೆಯೆ ನಮ್ಮ ಮುಖ್ಯ ಉದ್ದೇಶ-ನಾಗರಾಜ ಸೊರಾಳೆ.!

ಹೈದರಾಬಾದ.10.ಫೆ.25:- ಮನುಷ್ಯ ಆರೋಗ್ಯವಾಗಿ ಬದುಕಬೇಕಾದರೆ ಸದೃಢವಾದ ಶರೀರ ಎಷ್ಟು ಅವಶ್ಯವೂ, ಆತನ ಆರೋಗ್ಯವು ಉತ್ತಮ ಸ್ಥಿತಿಯಲ್ಲಿರುವುದು ಅಷ್ಟೇ ಮುಖ್ಯವಾಗಿದೆ. ಅದಕ್ಕಾಗಿ ಆರೋಗ್ಯವೇ ಭಾಗ್ಯ ಎಂಬAತೆ ನಾವು ಜೀವನದಲ್ಲಿ ಇದನ್ನು ಅಳವಡಿಸಿಕೊಂಡು ಬಾಳಿ ಬದುಕಬೇಕಾಗಿದೆ ಎಂದು ಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷ ನಾಗರಾಜ ಸೊರಾಳೆ ಹೇಳಿದರು.


       ಅವರು ಭಾನುವಾರ ನಗರದ ಬಸವೇಶ್ವರ ಅನುಭವ ಮಂಟಪ ಅತ್ತಾಪುರ ಹಾಗೂ ನಗರದ ಜ್ವಾಯಿ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಬಿರವು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಲಾಯಿತು.


        ಜೀವನದಲ್ಲಿ ಎಲ್ಲಾ ಆಸ್ತಿಕ್ಕಿಂತಲೂ ಆರೋಗ್ಯ ಕಾಪಾಡಿಕೊಳ್ಳುವುದು ಬಹು ದೊಡ್ಡ ಆಸ್ತಿಯಾಗಿದೆ ಹೀಗಾಗಿ ಪ್ರತಿಯೊಬ್ಬರೂ ಇಂದು ಶಾಂತಿ ನೆಮ್ಮದಿ ಜೀವನ ನಡೆಸಬೇಕಾದರೆ ಮೊದಲು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ವಂತರಾಗಿ ಬಾಳಬೇಕಾಗಿದೆ ಎಂದು ಬಸವೇಶ್ವರ ಅನುಭವ ಮಂಟಪದ ಮಹಿಳಾ ಅಧ್ಯಕ್ಷೆ ಜಯಶ್ರೀ ಮಾಶೆಟ್ಟಿ ನುಡಿದರು.


      ನಾವು ಮಾಡುವೆ ಸೇವೆಯಲ್ಲಿ ಯಾವುದೇ ಸ್ವಾರ್ಥ ಇಲ್ಲ. ನಿರಂತರವಾಗಿ ನಮ್ಮ ಲಿಂಗಾಯತ ಸಮಾಜದ ಪ್ರತಿಯೊಬ್ಬರಿಗೂ ಸೇವೆ ಸಲ್ಲಿಸುವ ಮೂಲಕ ಸಮಾಜಿಕ ಸೇವೆಯಲ್ಲಿ ನಾವು ತೊಡಗಿಸಿಕೊಂಡು ನಮ್ಮಿಂದ ಆದ ಸೇವೆಯನ್ನು ನೀಡುತ್ತಲಿದೇವೆ ಹಾಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇವೆಯನ್ನು ಸಲ್ಲಿಸುತ್ತೇವೆ ಎಂದು ರವಿ ಪಾಟೀಲ್ ಹೇಳಿದರು.


           ಶಿಭಿರದ ವೈದ್ಯ ಡಾ  ಸತೀಶ  ಮಾತನಾಡಿ, ಖ್ಯಾತ  ರಾಜ್ಯಶಾಸ್ತ್ರಜ್ಞ ಅರಿಸ್ಟಾಟಲ್ ಹೇಳಿದಂತೆ ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಇರುತ್ತದೆ ಎಂಬoತೆ ಒಳ್ಳೆಯ ಮನಸ್ಸು ನಮ್ಮಲ್ಲಿರಬೇಕಾದರೆ ಮೊದಲು ನಾವು ಒಳ್ಳೆಯ ಆರೋಗ್ಯವಂತ ವ್ಯಕ್ತಿಯಾಗಿ ಬಾಳಬೇಕಾಗುತ್ತದೆ. ಅದಕ್ಕಾಗಿ ನಾವು ಪ್ರತಿನಿತ್ಯ ನಮ್ಮ ಆರೋಗ್ಯದ ಕುರಿತು ಜಾಗೃತಿ ವಹಿಸಿ, ಆಗಾಗ ತಪಾಸಣೆ ಮಾಡಿಸುತ್ತಿರಬೇಕು. ಅಂದಾಗ ಮಾತ್ರ ನಾವು ಬಹಳ ದಿನಗಳವರೆಗೆ ಬದುಕಬಹುದಾಗಿದೆ ಎಂದರು.


     ಕಾರ್ಯಕ್ರಮದಲ್ಲಿ ಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷ ಸಮಾಜ ಸೇವಕ ನಾಗರಾಜ ಸೊರಾಳೆ. ರವಿ ಪಾಟೀಲ್ ಶಿವಕಾಂತ ಸ್ವಾಮಿ. ಮನೋಹರ ಪಾಟೀಲ್. ಬಸವೇಶ್ವರ ಅನುಭವ ಮಂಟಪದ ಮಹಿಳಾ ಆದ್ಯಕ್ಷೆ ಜಯಶ್ರೀ ಮಾಶೆಟ್ಟಿ ಉಪಸ್ಥಿತರಿದ್ದರು.


     ನಗರದ ಬಸವ ಅನುಭವ ಮಂಟಪದಲ್ಲಿ ಆಯೋಜಿಸಿದ ಉಚಿತ ಆರೋಗ್ಯ ಶಿಬಿರವು ಜಿಯಾ ಆಸ್ಪತ್ರೆ ಮತ್ತು ಬಸವೇಶ್ವರ ಅನುಭವ ಮಂಟಪ ಏರ್ಪಡಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಸುಮಾರು ಮೂರು ನೂರಕ್ಕಿಂತ ಹೆಚ್ಚಿನ ಜನರು ಉಚಿತವಾಗಿ ಆರೋಗ್ಯ ತಪ್ಪಾಷಣೆಯ ಲಾಭ ಪಡೆದುಕೊಂಡರು.


    ಈ ಮೇಗಾ ಆರೋಗ್ಯ ಶಿಬಿರದಲ್ಲಿ ಜ್ವಾಯಿ ಆಸ್ಪತ್ರೆಯ ವೈದ್ಯರಾದ ಡಾಸತೀಶದೇವಭಕ್ತುನಿ, ಡಾನವೀನಚಂದ್ರ ತೇಜ, ಡಾ. ಸೌರಭರೆಡ್ಡಿ, ಡಾ. ಚರವಿತಾ ರೆಡ್ಡಿ, ಡಾ. ವರ್ಷಾ ತಪ್ಪಾಡಿಯಾ, ಡಾ. ಜಹಿದ ಅಲಿ, ಡಾ. ಶನಾಜ ಅಫಜಲ, ಡಾ. ಸುನಂದಿನಿ, ಭಾಗವಹಿಸಿ ವೈದ್ಯಕಿಯ ಸೇವೆ ಸಲ್ಲಿಸಿದರು.


     ಪ್ರತಿ ತಿಂಗಳು  ಉಚಿತ ಆರೋಗ್ಯ ತಪಾಸಣಾ ಶಿಬಿರ, ಅತ್ತಾಪುರ ಬಸವ ಅನುಭವ ಮಂಟಪಲ್ಲಿ  ಸೇವೆ, ಪ್ರತಿ  ಬಡ ಜನರು ಸೇರಿದಂತೆ,  ಇಂದಿನ ಶಿಬಿರದಲ್ಲಿ ೩೦೦ಕ್ಕೂ ಹೆಚ್ಚು ಜನರು ಆರೋಗ್ಯ ತಪ್ಪಾಷಣೆ ಮಾಡಿಕೊಂಡಿದ್ದಾರೆ. ನಗರದ ಅತ್ತಾಪುರ, ಪಾಂಡುರAಗನಗರ, ಕಿಸಾನಬಾಗ, ಶ್ರೀರಾಮನಗರ ಕಾಲೋನಿ, ದುರ್ಗಾನಗರ, ಜಿಯಾಗೂಡ, ಹೀಗೆ ಅನೇಕ ಭಾಗದಿಂದ ಜನರು ಈ ಶಿಬಿರದಲ್ಲಿ ಪಾಲ್ಗೊಂಡಿದರು.

ಇದರೊಂದಿಗೆ ವಿವಿಧ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ತಮ್ಮ ಸಮಾಜ ಸೇವೆಯನ್ನು ಮಾಡುತ್ತಿದೆ ಮಹಾತ್ಮ ಬಸವೇಶ್ವರ ಅನುಭವ ಮಂಟಪ ಅತ್ತಾಪುರ,

ಫೋಟೋ ಕ್ಯಾಪ್ಸಲ್ :


ಹೈದರಾಬಾದ ಭಾನುವಾರ ನಗರದ ಬಸವೇಶ್ವರ ಅನುಭವ ಮಂಟಪ ಅತ್ತಾಪುರ ಹಾಗೂ ಜಿಯಾ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಲಾಯಿತು. ನಾಗರಾಜ ಸೋರಾಳೆ, ರವಿ ಪಾಟೀಲ, ಜಯಶ್ರೀ ಮಾಶೆಟ್ಟಿ, ಮನೋಹರ ಪಾಟೀಲ, ಡಾ. ಸತೀಶ ಹಾಗೂ ಜ್ವಾಯಿ ಆಸ್ಪತ್ರೆಯ ವೈದ್ಯಕೀಯ ತಂಡ ಇದ್ದರು.

prajaprabhat

Recent Posts

UGC-NET ಜೂನ್ 2025 ರ ಪರೀಕ್ಷಾ ವೇಳಾಪಟ್ಟಿ ಮತ್ತು  ನೋಂದಣಿ

ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…

3 hours ago

ಬೀದರ್‌’ನಲ್ಲಿ ಮೀನು ನುಂಗಿ ರೋಗ ಗುಣಮುಖ ವಿಶಿಷ್ಟ ಆಚರಣೆ

ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…

4 hours ago

ಉತ್ತರಾಖಂಡದಲ್ಲಿ ಸೇನಾ ಸನ್ನದ್ಧತೆಯನ್ನು ಪರಿಶೀಲಿಸಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಐಬೆಕ್ಸ್ ತರಾನಾ 88.4 ಎಫ್‌ಎಂ ಅನ್ನು ಉದ್ಘಾಟಿಸಿದರು.

ಉತ್ತರಾಖಂಡದ ಗರ್ವಾಲ್‌ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…

7 hours ago

ಮಿಥಿ ನದಿ ಹೂಳೆತ್ತುವ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ದಾಳಿ ನಡೆಸಿದೆ.

ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…

7 hours ago

ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಉತ್ತರ ರೈಲ್ವೆ ಪ್ರಾರಂಭಿಸಿದೆ

ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…

7 hours ago

ಭೂಕುಸಿತದಿಂದ ಹಾನಿಗೊಳಗಾದ ಚಾಟೆನ್‌ನಿಂದ ಸಿಕ್ಕಿಬಿದ್ದ ಸ್ಥಳೀಯರು ಮತ್ತು ಟ್ಯಾಕ್ಸಿ ಚಾಲಕರನ್ನು ಸಿಕ್ಕಿಂ ಸರ್ಕಾರ ವಿಶೇಷ ಹೆಲಿಕಾಪ್ಟರ್ ಮೂಲಕ ರಕ್ಷಿಸಿದೆ

ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್‌ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…

7 hours ago