ಆನ್‌ಲೈನ್ ನಕಲಿ ನೀಟ್‌ ಅಂಕಪಟ್ಟಿ:  ಪ್ರಕರಣ ದಾಖಲು

ಉಡುಪಿ.21.ಜೂನ್.25:-ನೀಟ್‌ ನಕಲಿ ಅಂಕಪಟ್ಟಿಗೆ ಸಂಬಂಧಿಸಿದಂತೆ ಉಡುಪಿ ಸೆನ್‌ ಆನ್‌ಲೈನ್ ನಕಲಿ ನೀಟ್‌ ಅಂಕಪಟ್ಟಿ:  ಪ್ರಕರಣ ದಾಖಲು ಪೊಲೀಸ್‌ ಠಾಣೆಯಲ್ಲಿ ವಿದ್ಯಾರ್ಥಿಯ ತಂದೆ ರೋಶನ್‌ ಶೆಟ್ಟಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಸರಕಾರಿ ಅಧಿಕಾರಿ ರೋಶನ್‌ ಶೆಟ್ಟಿ ಎಂಬವರ ಪುತ್ರ ನೀಟ್‌ ಬರೆದಿದ್ದು, ಇದಕ್ಕೆ ತಯಾರಿ ನಡೆಸುವಾಗ ಎಡಿಟಿಂಗ್‌ ಮಾಸ್ಟರ್‌ ಯೂ ಟ್ಯೂಬ್‌ ಚಾನೆಲ್‌ನಲ್ಲಿ ಜೆಇಇ, ನೀಟ್‌ ಹಾಗೂ ಸಿಬಿಎಸ್‌ಇ ಪರೀಕ್ಷೆಯ ಅಂಕಪಟ್ಟಿಗಳನ್ನು ನಕಲಿ ಮಾಡುವುದು ಹೇಗೆ ಎಂದು ಇದ್ದು, ಎರಡು ಸಂಪರ್ಕ ಸಂಖ್ಯೆಗಳನ್ನು ನೀಡಲಾಗಿತ್ತು.

ಅವನು ವಾಟ್ಸಾಪ್‌ ಮೂಲಕ ಈ ಸಂಖ್ಯೆಗಳನ್ನು ಸಂಪರ್ಕಿಸಿದ್ದು, ಆರೋಪಿ ವಿಶು ಕುಮಾರ್‌ ಮತ್ತಿತರರು ನಕಲಿ ನೀಟ್‌ ಅಂಕಪಟ್ಟಿ ಹಾಗೂ ಒಎಂಆರ್‌ ಶೀಟ್‌ ಗಳನ್ನು ನೀಡುವುದಾಗಿ ತಿಳಿಸಿ ಹಣ ಪಡೆದು ವಾಟ್ಸಾಪ್‌ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಹಾಗಾಗಿ ಆರೋಪಿಗಳು ನನ್ನ ಮಗನಿಗೆ ವಂಚಿಸಿ, ಅಕ್ರಮವಾಗಿ ಹಣ ವರ್ಗಾಯಿಸಿಕೊಂಡಿದ್ದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಹಣ ವರ್ಗಾವಣೆ?
ಎಪ್ರಿಲ್‌ 28 ರಿಂದ ಜೂನ್‌ 18 ರವರೆಗೆ ರೋಷನ್‌ ಶೆಟ್ಟಿಯವರ ಪುತ್ರ ವಿಶುಕುಮಾರ್‌ ಗೆ ಫೋನ್‌ ಪೇ ಮೂಲಕ ನಿರಂತರವಾಗಿ ಒಟ್ಟು 17 ಸಾವಿರ ರೂ. ಗಳನ್ನು ಹಂತ ಹಂತವಾಗಿ ಕಳುಹಿಸಲಾಗಿದೆ. ಕೊನೆಯ 8 ಸಾವಿರ ರೂ.ಗಳನ್ನು ಸ್ವತಃ ರೋಶನ್‌ ಶೆಟ್ಟಿಯವರ ಪುತ್ರನೇ ಗೂಗಲ್‌ ಪೇ ಮೂಲಕ ವರ್ಗಾಯಿಸಿದ್ದಾನೆ.

ಸಿಕ್ಕಿದ ನಕಲಿ ಅಂಕಪಟ್ಟಿ
ಹಣಕಾಸು ವಹಿವಾಟು ನಡೆದ ಬಳಿಕ ಜೂ.16ರಂದು ಆರೋಪಿ ವಿಶು ಕುಮಾರ್‌ ಆನ್‌ಲೈನ್‌ನಲ್ಲಿ ನೀಟ್‌ ಅಂಕಪಟ್ಟಿ ಹಾಗೂ ಓಎಂಆರ್‌ ಶೀಟ್‌ಗಳನ್ನು ವಾಟ್ಸಾಪ್‌ ಮೂಲಕ ಕಳುಹಿಸಿದ್ದಾನೆ. ಆರೋಪಿಯು ನಕಲಿ ದಾಖಲೆ ಸೃಷ್ಟಿಸಿದ್ದಾನೆ. ಎನ್‌ಟಿಎ ಹಾಗೂ ಸರಕಾರಿ ಲೋಗೋವನ್ನು ಅನಧಿಕೃತವಾಗಿ ಬಳಸಿದ್ದಾನೆ. ಈ ಮೂಲಕ ವಿಶು ಕುಮಾರ್‌ ವಿದ್ಯಾರ್ಥಿಗಳನ್ನು ಬಳಸಿಕೊಂಡು ರಾಷ್ಟ್ರಮಟ್ಟದ ಪರೀಕ್ಷೆಗಳ ಅಂಕಪಟ್ಟಿಗಳಲ್ಲಿಯೂ ವಂಚನೆ ಎಸಗುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಮುಂದಿನ ತನಿಖೆಗಾಗಿ ಪ್ರಕರಣ ವನ್ನು ಕೈಗೆತ್ತಿಕೊಂಡಿದ್ದಾರೆ. ರೋಶನ್‌ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಯುವಜನ ಮತ್ತು ಕ್ರೀಡಾ ಇಲಾಖೆ ಅಧಿಕಾರಿಯಾಗಿದ್ದಾರೆ.

ಹತ್ತಾರು ಪ್ರಶ್ನೆಗಳಿಗೆ ಸಿಗಬೇಕಿದೆ ಪೊಲೀಸರಿಂದ ಉತ್ತರ
ಸೆನ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಪ್ರಕರಣಗಳು ಬಾಕಿಯಿವೆ. ನೀಟ್‌ನಂತಹ ಪರೀಕ್ಷೆಗಳಲ್ಲಿ ನಕಲಿ ಅಂಕಪಟ್ಟಿ ತಯಾರಿಸುವ ಈ ಜಾಲವನ್ನು ಭೇದಿಸುವ ಸವಾಲು ಪೊಲೀಸರ ಮುಂದಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಪ್ರಕರಣ ಆದಷ್ಟು ಬೇಗ ಪತ್ತೆಯಾಗಬೇಕಿದ್ದು ಇದರ ಹಿಂದೆ ಜಾಲ ಇದೆಯೇ ಅಥವಾ ವ್ಯಕ್ತಿಗಳು ಇದ್ದಾರೆಯೇ? ಅಥವಾ ದೂರುದಾರರ ಪಾತ್ರವೂ ಇದೆಯೇ ಎಂಬಿತ್ಯಾದಿ ಸಂಗತಿಗಳು ಬೆಳಕಿಗೆ ಬರಬೇಕಿದೆ.

prajaprabhat

Recent Posts

ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ಖರೀದಿಗೆ 3 ಲಕ್ಷ ಸಹಾಯಧನ, ಇಂದೆ ಅರ್ಜಿ ಸಲ್ಲಿಸಿ

ಬೆಂಗಳೂರು.21.ಜೂನ್.25:- ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯಕ್ಕಾಗಿ ಸೇವಾ ಸಿಂಧು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ…

1 hour ago

(Guest Faculty’s)”Ad-hoc” Employee”ತಾತ್ಕಾಲಿಕ” ಉದ್ಯೋಗಿ ಸೇವೆಯಲ್ಲಿ ಖಾಯಂ ಆಗಲು ಅವಕಾಶ ?

ತಾತ್ಕಾಲಿಕ ಉದ್ಯೋಗಿ ಎಂದರೆ ಶಾಶ್ವತ ಹುದ್ದೆಗೆ ಬದಲಾಗಿ ನಿರ್ದಿಷ್ಟ, ಸಾಮಾನ್ಯವಾಗಿ ಅಲ್ಪಾವಧಿಯ, ಉದ್ದೇಶ ಅಥವಾ ಯೋಜನೆಗಾಗಿ ನೇಮಕಗೊಂಡ ತಾತ್ಕಾಲಿಕ ಕೆಲಸಗಾರ.…

4 hours ago

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ರಾಜ್ಯದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್…

4 hours ago

ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿದ ಪ್ರಕರಣ : ಇಬ್ಬರ ಬಂಧನ

ಮೈಸೂರು.21.ಜೂನ್.25:- ತಾಲೂಕಿನ ವಾಜಮಂಗಲದಲ್ಲಿ ಎ.18ರಂದು ಅಂಬೇಡ್ಕರ್ ಭಾವಚಿತ್ರವಿರುವ ಬ್ಯಾನರ್ ಹಾಗೂ ನಾಮಫಲಕವನ್ನು ವಿರೂಪಗೊಳಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ…

4 hours ago

ಗ್ರಾಮ ಪಂಚಾಯತ್ ಸಭೆಯಲ್ಲಿ ‘ತುಳು’ ಭಾಷೆ ಬಳಸದಂತೆ ಸೂಚನೆ,

ದಕ್ಷಿಣ ಕನ್ನಡ.21.ಜೂನ್.25: ರಾಜ್ಯ ಸರ್ಕಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ದಕ್ಷಿಣ ಕನ್ನಡ. ಜಿಲ್ಲೆಯ ಗ್ರಾಮಪಂಚಾಯತ್ ಸಾಮಾನ್ಯ…

4 hours ago

ಅತಿಥಿ ಶಿಕ್ಷಕರ ನೇಮಕಾತಿ ಗೊಂದಲ ನಿವಾರಿಸಿ

ರಾಜ್ಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅತಿಥಿ ಶಿಕ್ಷಕರ. ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಅಂದು ಸಮಷ್ಯ ಎದುರಿಸುತ್ತಿರುವ ತಾಲೂಕಾ…

4 hours ago