ರಾಯಗಢ: 04.ಫೆ.25: ಭಯಾನಕ ಪರಿಣಾಮಕಾರಿ ವೈರಸ್ ಈಗ ಜಾಗ್ರತಿ ವಹಿಸಿ ವೈರಸ್ ವೋಡಿಸಿ.
ಹಕ್ಕಿ ಜ್ವರ ಹಿಂದೊಮ್ಮೆ ದೇಶದಾದ್ಯಂತ ಭಯಾನಕ ದುರಂತವನ್ನೇ ಸೃಷ್ಟಿಸಿತ್ತು. ಹಂದಿ, ಕುದುರೆ, ಕೋಳಿ, ಬೆಕ್ಕು, ನಾಯಿ ಹೀಗೆ ಎಲ್ಲಾ ಪ್ರಾಣಿಗಳಿಂದ ವಿವಿಧ ರೀತಿಯ ವೈರಸ್ ಹರಡುತ್ತಿತ್ತು. ಮಾನವರಿಗೂ ಈ ವೈರಸ್ ಕಂಟಕವಾಗಿ ಕಾಡಿದ್ದಲ್ಲದೆ ಹಲವರ ಪ್ರಾಣವನ್ನೇ ಕಸಿದಿತ್ತು
ಇದೀಗ ಹಕ್ಕಿ ಜ್ವರದ ವೈರಸ್ ಈಗ ಮತ್ತೆ ಹರಡಲು ಆರಂಭಗೊಂಡಿದ್ದು, ಛತ್ತೀಸಗಢದ ರಾಯಗಢದಲ್ಲಿ ಸರ್ಕಾರಿ ಪೌಲ್ಟಿ ಫಾರ್ಮ್ವೊಂದರಲ್ಲಿ ಹಕ್ಕಿ ಜ್ವರ ಪ್ರಕರಣ ಪತ್ತೆಯಾಗಿದ್ದರಿಂದ 17,000 ಕೋಳಿ ಹಾಗೂ ಗೌಜುಗಗಳನ್ನು ಹತ್ಯೆ ಮಾಡಲಾಗಿದೆ.
ಸಾವಿಗೀಡಾದ ಕೋಳಿಗಳಲ್ಲಿ ಎಚ್5ಎನ್1 ವೈರಸ್ ದೃಢಪಟ್ಟಿದೆ. ರೋಗ ಹರಡದಂತೆ ಹಕ್ಕಿ ಜ್ವರ ಕಾಣಿಸಿಕೊಂಡ ಪ್ರದೇಶದಿಂದ ಸುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಚಕ್ರಧರ ನಗರದಲ್ಲಿರುವ ಫಾರ್ಮ್ನಲ್ಲಿ ಇತ್ತೀಚೆಗೆ ಕೆಲ ಕೋಳಿಗಳು ಸಾವಿಗೀಡಾಗಿದ್ದವು. ಅವುಗಳ ಮಾದರಿಯನ್ನು ಪರೀಕ್ಷೆಗಾಗಿ ಭೋಪಾಲ್ನಲ್ಲಿರುವ ಪ್ರಾಣಿ ರೋಗಗಳ ರಾಷ್ಟ್ರೀಯ ಸಂಸ್ಥೆಗೆ ರವಾನಿಸಲಾಗಿತ್ತು.
ಒಟ್ಟು 5,000 ಕೋಳಿ, 12,000 ಗೌಜುಗಗಳು ಹತ್ಯೆ ಮಾಡಲಾಗಿದ್ದು, ಇದರೊಂದಿಗೆ 17,000 ಮೊಟ್ಟೆಗಳನ್ನು ನಾಶಪಡಿಸಲಾಗಿದೆ.
ಪರಿಣಾಮಕಾರಿ ಹಕ್ಕಿ ಜ್ವರ ಹಿಂದೊಮ್ಮೆ ದೇಶದಾದ್ಯಂತ ಭಯಾನಕ ದುರಂತವನ್ನೇ ಸೃಷ್ಟಿಸಿತ್ತು. ಹಂದಿ, ಕುದುರೆ, ಕೋಳಿ, ಬೆಕ್ಕು, ನಾಯಿ ಹೀಗೆ ಎಲ್ಲಾ ಪ್ರಾಣಿಗಳಿಂದ ವಿವಿಧ ರೀತಿಯ ವೈರಸ್ ಹರಡುತ್ತಿತ್ತು.
ಉತ್ತರಾಖಂಡದ ಗರ್ವಾಲ್ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…
ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…
ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…
ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…
ಸಿಕ್ಕಿಂ ಸರ್ಕಾರವು ಉತ್ತರ ಸಿಕ್ಕಿಂನ ಚಾಟೆನ್ನಲ್ಲಿ ಸಿಲುಕಿರುವ ಸ್ಥಳೀಯರು, ಪ್ರವಾಸಿ ಟ್ಯಾಕ್ಸಿ ಚಾಲಕರು ಮತ್ತು ಕೆಲವು ಸರ್ಕಾರಿ ಅಧಿಕಾರಿಗಳನ್ನು ವಾಯು…
ಹೊಸ ದೆಹಲಿ.08.ಜೂನ್.25:-ಅಭಿವೃದ್ಧಿ ಹೊಂದಿದ ಭಾರತದತ್ತ ಮಹಿಳೆಯರು ವಹಿಸಿರುವ ಪರಿವರ್ತನಾತ್ಮಕ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಎತ್ತಿ ತೋರಿಸಿದರು, ಕಳೆದ…