ಅಪರಿಚಿತ ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ

ಬೀದರ.21.ಜೂನ್.25:- ಬೀದರ ತಾಲ್ಲೂಕಿನ ನೇಮತಾಬಾದ ಗ್ರಾಮದ ಶಿವಾರದ ಜಮೀನಿನ ಹತ್ತಿರ ಮಾಂಜ್ರಾ ನದಿಯಲ್ಲಿ ಅಂದಾಜು 50 ರಿಂದ 55 ವರ್ಷ ವಯಸ್ಸಿನ ಒಬ್ಬ ಅಪರಿಚಿತ ಗಂಡು ವ್ಯಕ್ತಿಯ ಮೃತ ದೇಹವು ಕಂಡುಬಂದಿದ್ದು, ಇಲ್ಲಿವರೆಗೆ ಮೃತ ವ್ಯಕ್ತಿಯ ವಾರಸುದಾರರು ಯಾರೆಂದು ಪತ್ತೆಯಾಗಿರುವುದಿಲ್ಲವೆಂದು ಜನವಾಡಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನೇಮತಾಬಾದ ಗ್ರಾಮದ ಉತ್ತಮ ಅವರ ದೂರಿನ ಮೇರೆಗೆ ಯು.ಡಿ.ಆರ್.ಸಂಖ್ಯೆ: 11/2025 ಕಲಂ. 194 ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.


ಮೃತ ವ್ಯಕ್ತಿಯು 5 ಅಡಿ 2 ಇಂಚ್ ಎತ್ತರ ಇದ್ದು, ಬೋಳು ತಲೆ, ಮೈಮೇಲೆ ಒಂದು ಬಿಳಿ ಬಣ್ಣದ ಶರ್ಟ, ಒಂದು ಕಪ್ಪು ಬಣ್ಣದ ಪ್ಯಾಂಟ, ಒಂದು ಬಿಳಿ ಬನಿಯನ್, ಒಂದು ಚಾಕ್ಲೇಟ ಬಣ್ಣದ ಅಂಡರವಿಯರ್ ಧರಿಸಿರುತ್ತಾನೆ.

ಈ ಮೃತ ವ್ಯಕ್ತಿಯ ವಾರಸುದಾರರ ಯಾರಾದರೂ ಇದ್ದಲ್ಲಿ ಜನವಾಡಾ ಪೊಲೀಸ್ ಠಾಣೆ ಮೊಬೈಲ್ ಸಂಖ್ಯೆ: 9480803450, ಸಿಪಿಐ ಬೀದರ ಗ್ರಾಮೀಣ ವೃತ್ತ ಮೊಬೈಲ್ ಸಂಖ್ಯೆ: 9480803439, ಡಿಎಸ್‍ಪಿ, ಬೀದರ ಮೊಬೈಲ್ ಸಂಖ್ಯೆ: 9480803420 ಹಾಗೂ ಕಂಟ್ರೋಲ್ ರೂ. ನಂಬರ  ದೂರವಾಣಿ ಸಂಖ್ಯೆ: 08482-226700 ಗೆ ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

prajaprabhat

Recent Posts

ಎಪಿ: 25 ಸಾವಿರ ಬುಡಕಟ್ಟು ಮಕ್ಕಳು 108 ನಿಮಿಷಗಳಲ್ಲಿ 108 ಸೂರ್ಯ ನಮಸ್ಕಾರ ಮಾಡಿದ್ದಾರೆ.

ಹೊಸ ದೆಹಲಿ.21.ಜೂನ್.25:-11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ, ಇಂದು ವಿಶಾಖಪಟ್ಟಣಂನ ಆಂಧ್ರ ವಿಶ್ವವಿದ್ಯಾಲಯದಲ್ಲಿ ಗಮನಾರ್ಹವಾದ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು…

5 hours ago

ನಕಲಿ ವೈದರಿಗೆ ದಂಡ ವಿಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ

ಬೀದರ.21.ಜೂನ್.25:- ಔರಾದ (ಬಿ) ತಾಲ್ಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ನಕಲಿ ವೈದ್ಯರಾದ ನಾರಾಯಣರಾವ ಕುಲರ್ಕಣಿ, ಬಸವರಾಜ ಒಂಟೆ ಇವರಿಗೆ ತಲಾ…

5 hours ago

ಸರ್ಕಾರಿ ಆಸ್ಪತ್ರೆಗಳ ಕಡೆಗೆ ಜನರು ಮುಖ ಮಾಡುವಂತಾಗಲಿ – ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ.21.ಜೂನ್.25:- ಸರ್ಕಾರಿ ಆಸ್ಪತ್ರೆಗಳ ಕಡೆಗೆ ಜನರು ಮುಖ ಮಾಡುವಂತಾಗಲಿ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದರು. ಅವರು ಗುರುವಾರ…

5 hours ago

ಅನುಭವ ಮಂಟಪ 742 ಕೋಟಿ ರೂ.ಪರಿಷ್ಕೃತ ಅಂದಾಜಿಗೆ ಸಂಪುಟ ಅನುಮೋದನೆ

ಮುಖ್ಯಮಂತ್ರಿ, ಕಂದಾಯ ಇಲಾಖೆಗೆ ಧನ್ಯವಾದ ಅರ್ಪಿಸಿದ ಈಶ್ವರ ಖಂಡ್ರೆಬೀದರ.21. ಜೂನ್.25:-ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪದ 742 ಕೋಟಿ ರೂ.…

5 hours ago

ಜೂನ್.21 ರಂದು ಹನ್ನೊಂದನೇಯ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ

ಬೀದರ.21.ಜೂನ್.25:- ಜಿಲ್ಲಾಡಳಿತ ಬೀದರ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ್ ಇಲಾಖೆ, ಯುವ ಸಬಲೀಕರಣ ಕ್ರೀಡಾ ಇಲಾಖೆ ಬೀದರ ಹಾಗೂ ಇನ್ನಿತರ…

6 hours ago

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅರ್ಜಿ ಆಹ್ವಾನ

ಬೀದರ20.ಜೂನ್.25:- 2025-26 ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಘಟಕಗಳಿಗೆ ಸೌಲಭ್ಯ ಪಡೆಯಲು ಜಿಲ್ಲೆಯ ಆಸಕ್ತ ರೈತ…

6 hours ago