ಅನುಕಂಪ ಆಧಾರದಲ್ಲಿ ನೇಮಕಾತಿಸಂಬಂಧಿತ : ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.24.ಜೂನ್.25:- ಸೇವೆಯಲ್ಲಿದ್ದಾಗಲೇ ಮೃತಪಟ್ಟ ಸರ್ಕಾರಿ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ನೇಮಕಾತಿ ಮಾಡಲು ಕಛೇರಿ ಹಂಚಿಕೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪೊಲೀಸ್ ಇಲಾಖೆಯಲ್ಲಿ, ಸೇವೆಯಲ್ಲಿದ್ದಾಗಲೇ ಮೃತಪಟ್ಟ ಸರ್ಕಾರಿ ನೌಕರರ ಅವಲಂಬಿತರು ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಅವರುಗಳ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿರುತ್ತದೆ.

ಕರ್ನಾಟಕ ಸಿವಿಲ್ ಸೇವೆಗಳು(ಅನುಕಂಪ ಆಧಾರದ ಮೇಲೆ ನೇಮಕಾತಿ) 1996ರ ನಿಯಮಗಳಡಿ ಉಲ್ಲೇಖಿತ ಸರ್ಕಾರದ ಅಧಿಸೂಚನೆ ಮತ್ತು ನಿರ್ದೇಶನದನ್ವಯ ನೇಮಕಾತಿಗೆ ಅರ್ಹರಿರುವ ಈ ಕೆಳಕಂಡ ಅಭ್ಯರ್ಥಿಗಳನ್ನು ಅವರುಗಳ ಹೆಸರಿನ ಮುಂದೆ ನಮೂನೆಯ ಕಾಲಂ 04 ರಲ್ಲಿ ನಮೂದಿಸಲಾದ ಘಟಕಗಳಲ್ಲಿ ಲಭ್ಯವಿರುವ ದ್ವಿತೀಯ ದರ್ಜೆ ಸಹಾಯಕ ನೇರ ನೇಮಕಾತಿ ಹುದ್ದೆಗೆ ನೇಮಕಾತಿ ಮಾಡಲು ಸದರಿ ಕಛೇರಿ/ ಘಟಕಗಳಿಗೆ ಹಂಚಿಕೆ ಮಾಡಲಾಗಿದೆ.

ನೇಮಕಾತಿ ಮಾಡುವ ಪ್ರಾಧಿಕಾರಿ/ ಅಧಿಕಾರಿಗಳು ಈ ಕೆಳಕಂಡ ಅಂಶಗಳನ್ನು ಪರಿಶೀಲಿಸಿದ ನಂತರ ಸದರಿ ಅಭ್ಯರ್ಥಿಗಳಿಗೆ ತಮ್ಮ ಘಟಕದಲ್ಲಿ ಲಭ್ಯವಿರುವ ದ್ವಿತೀಯ ದರ್ಜೆ ಸಹಾಯಕ ನೇರ ನೇಮಕಾತಿ ಹುದ್ದೆಗೆ ನೇಮಕಾತಿ ಆದೇಶ ನೀಡುವುದು.

1) ಅರ್ಜಿದಾರರು ಸಂಬಂಧಿಸಿದ ಇಲಾಖೆಯ ನೇಮಕಾತಿ ನಿಯಮಗಳಿಗೆ ಅನುಸಾರವಾಗಿ ಅರ್ಹತೆ ಹೊಂದಿದ್ದು, ಅಗತ್ಯವಿರುವ ಎಲ್ಲಾ ಅಂಶಗಳನ್ನು ಪೂರೈಸಿರಬೇಕು.

2) ಅರ್ಜಿದಾರರು ನೇಮಕಾತಿ ನಿಯಮಗಳಾನುಸಾರ ವಿದ್ಯಾರ್ಹತೆ ಹೊಂದಿರತಕ್ಕದ್ದು ಮತ್ತು ವಯೋಮಿತಿಯೊಳಗೆ ಇರತಕ್ಕದ್ದು.

3) ಅರ್ಜಿದಾರರು ಉಲ್ಲೇಖದಲ್ಲಿ ನಮೂದಿಸಿದ ಸರ್ಕಾರದ ಅಧಿಸೂಚನೆಗಳ ಪ್ರಕಾರ ಎಲ್ಲಾ ಷರತ್ತುಗಳನ್ನು ನಿಖರವಾಗಿ ಪಾಲಿಸತಕ್ಕದ್ದು.

4) ಅರ್ಜಿದಾರರ ಶೈಕ್ಷಣಿಕ ದಾಖಲೆಗಳ ನೈಜತೆ ಕುರಿತು ಸಂಬಂಧಪಟ್ಟ ಮಂಡಳಿ ಅಥವಾ ಸೂಕ್ತ ಪ್ರಾಧಿಕಾರಗಳಿಂದ ದೃಢೀಕರಣ ಪಡೆದು ನೇಮಕಾತಿ ಆದೇಶವನ್ನು ನೀಡತಕ್ಕದ್ದು ಹಾಗೂ ಈಗಾಗಲೇ ಸಂಬಂಧಿಸಿದ ಘಟಕಾಧಿಕಾರಿಗಳು ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳ ನೈಜತೆ ಬಗ್ಗೆ ಸಕ್ಷಮ ಪ್ರಾಧಿಕಾರಿಗಳಿಂದ ವರದಿ ಪಡೆದು ಮೂಲಪ್ರತಿ ಸಲ್ಲಿಸಿದ್ದಲ್ಲಿ, ಪುನಃ ನೈಜತೆಯ ಕುರಿತು ವರದಿ ಪಡೆಯುವ ಅವಶ್ಯಕತೆ ಇರುವುದಿಲ್ಲ.

5) ಅರ್ಜಿದಾರರ ನಡತೆ ಮತ್ತು ಪೂರ್ವ ಚರಿತ್ರೆಗಳ ಬಗ್ಗೆಯೂ ಸಹ ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮುಂಚೆ ಪರಿಶೀಲನೆ ಮಾಡುವುದು. ಹಾಗೂ ಮೃತ ನೌಕರನ ಹೆಸರು ಸೇವಾ ಪುಸ್ತಕ ದಾಖಲೆಗಳನ್ವಯ ಹಾಗೂ ಅರ್ಜಿದಾರರ ಶೈಕ್ಷಣಿಕ ದಾಖಲೆಗಳನ್ವಯ ಹೆಸರಿನಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಖಚಿತ ಪಡಿಸಿಕೊಳ್ಳುವುದು.

6) ಭಾರತೀಯ ಸಂವಿಧಾನದ ಅನುಚ್ಚೇದ 371 ಜೆ ಅಭ್ಯರ್ಥಿಗಳಿಗೆ ಮೀಸಲಿರಿಸಿದ್ದ ಹುದ್ದೆಗಳಿಗೆ ಆಯ್ಕೆ ಮಾಡಲಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸುವ ಮುನ್ನ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಂಡು ಆದೇಶ ಹೊರಡಿಸುವುದು.

ಉಲ್ಲೇಖಿತ ಸರ್ಕಾರದ ಅಧಿಸೂಚನೆಗಳಲ್ಲಿನ ಅಂಶಗಳನ್ನು ಹಾಗೂ ಮಾರ್ಗಸೂಚಿಗಳನ್ನು ನೇಮಕಾತಿ ಆದೇಶಗಳಲ್ಲಿ ನಮೂದಿಸಿ ತಪ್ಪದೇ ಅನುಷ್ಠಾನಗೊಳಿಸತಕ್ಕದ್ದು. ಅರ್ಜಿದಾರರಿಗೆ ನೇಮಕಾತಿ ಸಂಬಂಧ, ವಿದ್ಯಾಭ್ಯಾಸದ ಮೂಲ ದಾಖಲೆಗಳು ಹಾಗೂ ಮೃತರ ಸೇವಾ ಪುಸ್ತಕವನ್ನು ಅಗತ್ಯ ಕ್ರಮಕ್ಕಾಗಿ ಆದೇಶದೊಂದಿಗೆ ಲಗತ್ತಿಸಿ ಕಳುಹಿಸಲಾಗಿದೆ.

ನೇಮಕಾತಿ ಆದೇಶ ನೀಡಿದ ನಂತರ ಅಭ್ಯರ್ಥಿಯು ನಿಗದಿತ ಅವಧಿಯೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಅವರ ನೇಮಕಾತಿಯನ್ನು ರದ್ದು ಪಡಿಸಲಾಗುವುದೆಂದು ಅಭ್ಯರ್ಥಿಗಳಿಗೆ ತಿಳುವಳಿಕೆ ನೀಡುವುದು.

prajaprabhat

Recent Posts

ರಾಜ್ಯ ಸರಕಾರಿ ಎಲಾಖೆಗಳಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ನಗದು ರಹಿತ ಆರೋಗ್ಯ ಯೋಜನೆ ಜಾರಿಗೊಳಿಸಿ ಸರ್ಕಾರ ಆದೇಶ.

ಬೆಂಗಳೂರು.24.ಜೂನ್‌.25:- ರಾಜ್ಯ ಸರಕಾರ 140  ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಹೊರಗುತ್ತಿಗೆ ಹಾಗೂ ಗೌರವಧನದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ 3…

9 hours ago

ಗುತ್ತಿಗೆ, ಹೊರ ಗುತ್ತಿಗೆ ನೌಕರರಿಗೆ, ಆರೋಗ್ಯ ಯೋಜನೆ. ರಾಜ್ಯ ಸರ್ಕಾರ ಆದೇಶ

ಬೆಂಗಳೂರು.24.ಜೂನ್.25:- ರಾಜ್ಯದ ಗುತ್ತಿಗೆ, ಹೊರ ಗುತ್ತಿಗೆ ನೌಕರರಿಗೆ ನಗದು ರಹಿತ ಆರೋಗ್ಯ ಯೋಜನೆ ಜಾರಿಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.…

11 hours ago

ರಾಜ್ಯ ಸರ್ಕಾರದಿಂದ ಉಚಿತ ಪ್ರವಾಸೋದ್ಯಮ ತರಬೇತಿಗೆ ಅರ್ಜಿ ಆಹ್ವಾನ

ರಾಜ್ಯ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಐ.ಹೆಚ್.ಎಮ್ ಮತ್ತು ಎಫ್.ಸಿ.ಐ ಸಂಸ್ಥೆಗಳ ಮೂಲಕ ಬೆಂಗಳೂರು ಹಾಗೂ ಮೈಸೂರು ಜಿಲ್ಲೆಗಳಲ್ಲಿ ತರಬೇತಿ…

12 hours ago

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶೂ, ಸಾಕ್ಸ್  ಭಾಗ್ಯ:ರಾಜ್ಯ ಸರ್ಕಾರ ಆದೇಶ.

ಬೆಂಗಳೂರು.24.ಜೂನ್.25:- 2025-26ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತವಾಗಿ…

14 hours ago

KPSC’ಯಿಂದ ಗ್ರೂಪ್-ಬಿ ಹುದ್ದೆ ಪರೀಕ್ಷೆಯ ಪರಿಷ್ಕೃತ Answer key ಪ್ರಕಟ

ಬೆಂಗಳೂರು.24.ಜೂನ್.25:- ಕರ್ಣಾಟಕ ಲೋಕ್ ಸೇವಾ ಅಯೋಗ್ ವಿವಿಧ ಗ್ರೂಪ್-ಬಿ ಹುದ್ದೆಗಳಿಗೆ ನಡೆಸಿದ ಪರೀಕ್ಷೆಗಳ ಪರಿಷ್ಕೃತಕೀ ಉತ್ತರ ಪ್ರಕಟಿಸಿದೆ. ದಿ:19-01-2025ರಂದು ನಡೆಸಿದ…

17 hours ago

BSI’ನಲ್ಲಿ 2964 ಹುದ್ದೆಗಳು: ಇಂದೆ ಅರ್ಜಿ ಸಲ್ಲಿಸಿ.

ಮುಂಬೈ.24.ಜೂನ್.25:-ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತೆ ಸರ್ಕಲ್ ಬೇಸ್ಡ್ ಆಫೀಸರ್ (CBO) ನೇಮಕಾತಿ 2025ರಡಿ 2,600 ಹುದ್ದೆಗಳಿಗೆ ಅರ್ಜಿ…

19 hours ago