ಬೀದರ.05.ಏಪ್ರಿಲ್.25:-ಬೀದರ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜೂಜಾಟ, ಮಟ್ಕಾ, ಕ್ರಿಕೇಟ್ ಬೆಟ್ಟಿಂಗ್, ಗಾಂಜಾ, ಅಕ್ರಮ ಅಕ್ಕಿ ಸಂಗ್ರಹಣೆ/ಸಾಗಣೆ, ಅಕ್ರಮ ಮಧ್ಯ ಮಾರಾಟ/ಸಾಗಾಣಿಕೆಯ ಕುರಿತು ದಾಖಲಾಗಿದ್ದ 189 ಪ್ರಕರಣಗಳನ್ನು ಬೇಧಿಸಿ ಒಟ್ಟು 431 ಜನ ಆರೋಪಿಗಳನ್ನು ಬಂಧಿಸಿ ಅವರಿಂದ 35,34,075 ರೂ. ಬೆಲೆವುಳ್ಳ ಮುದ್ದೆ ಮಾಲು ಜಪ್ತಿ ಮಾಡಿಕೊಂಡು ಆರೋಪಿತರನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ ಎಂದು ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ ಗುಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕರಣಗಳ ವಿವರ: ಜೂಜಾಟದ 22 ಪ್ರಕರಣಗಳಲ್ಲಿ 227 ಆರೋಪಿತರನ್ನು ಬಂಧಿಸಿ 303290 ರೂ., ಕ್ರಿಕೇಟ್ ಬೆಟ್ಟಿಂಗ್ 11 ಪ್ರಕರಣಗಳಲ್ಲಿ 19 ಆರೋಪಿಗಳನ್ನು ಬಂಧಿಸಿ 62700 ರೂ., ಮಟ್ಕಾದ 49 ಪ್ರಕರಣಗಳಲ್ಲಿ 65 ಆರೋಪಿಗಳನ್ನು ಬಂಧಿಸಿ 78340 ರೂ., ಇಸಿ ಆ್ಯಕ್ಟ್ನ 7 ಪ್ರಕರಣಗಳಲ್ಲಿ 11 ಆರೋಪಿತರನ್ನು ಬಂಧಿಸಿ 643224 ರೂ., ಎನ್.ಡಿ.ಪಿ.ಎಸ್. 3 ಪ್ರಕರಣಗಳಲ್ಲಿ 4 ಆರೋಪಿತರನ್ನು ಬಂಧಿಸಿ 2251500 ರೂ., ಹಾಗೂ ಅಬಕಾರಿ 97 ಪ್ರಕರಣಗಳಲ್ಲಿ 105 ಆರೋಪಿಗಳನ್ನು ಬಂಧಿಸಿ 195021 ರೂ.. ಬೆಲೆವುಳ್ಳ ಮುದ್ದೆ ಮಾಲು ಜಪ್ತಿ ಮಾಡಲಾಗಿದೆ.
ಆರೋಪಿಗಳು ಪದೇ ಪದೇ ಕಾನೂನು ವಿರುದ್ದ ಚಟುವಟಿಕೆಗಳಲ್ಲಿ ತೊಡಗಿದರೆ ಅಂತಹ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಗಡಿಪಾರು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹುಮನಾಬಾದ.17.ಜೂನ್.25:- ಹುಮನಾಬಾದ ತಾಲ್ಲೂಕಾ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷರಾಗಿ ಸರ್ವಾನುಮತದಿಂದ ಭೀಮರಾವ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ. …
ಇತ್ತೀಚಿಗೆ ಪ್ರಕಟಗೊಂಡ NEET-2025 ರ ಫಲಿತಾಂಶದಲ್ಲಿ ನಗರದ ಪ್ರತಿಷ್ಠಿತ ಜ್ಞಾನ ಸುಧಾ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ…
ಬೀದರ.17.ಜೂನ್.25:- ಬೀದರನ ಕಮಲನಗರ ವಸತಿ ಪೂರ್ವ ಬಾಲಕರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಭೇಟಿ ನೀಡಿ, ವಿದ್ಯಾರ್ಥಿಗಳಿಗೆ…
ಬೀದರ.17.ಜೂನ್.25:-ಯಕತ್ಪೂರ ಉಪ ಕೇಂದ್ರದಿAದ ಸರಬರಾಜು ಆಗುವ 110/11ಕೆವಿ ಯಕತ್ಪೂರ ಫೀಡರನ ಮೇಲೆ ತುರ್ತು ಕಾರ್ಯ ನಿಮಿತ್ಯ ದಿನಾಂಕ: 19-06-2025 ರಂದು…
ಬೀದರ.17.ಜೂನ್.25:- ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಜನವಾಡ ರಸ್ತೆ ಬೀದರದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ಬಿ.ಎ., ಬಿ.ಕಾಂ., ಹಾಗೂ…
ಬೀದರ.17.ಜೂನ್.25:-ಕಮಠಾಣ ಉಪ-ಕೇಂದ್ರದಿAದ ಸರಬರಾಜು ಆಗುವ 110/33-11ಕೆವಿ ಕಮಠಾಣ ಫೀಡರನ ಮೇಲೆ ತುರ್ತು ಕಾರ್ಯ ಇರುವುದರಿಂದ ದಿನಾಂಕ: 19-06-2025 ರಂದು ಬೆಳಿಗ್ಗೆ…