ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದೆ ಮಂಗಳೂರು ವಿಶ್ವವಿದ್ಯಾಲಯ.!

ಮಂಗಳೂರು.18.ಮಾರ್ಚ.25:- ಮಂಗಳೂರು ವಿಶ್ವವಿದ್ಯಾಲಯಗಳಲ್ಲಿ ಖಾಯಂ ಪ್ರಾಧ್ಯಾಪಕರು ಭೇಕು ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ಬೇಕೇ ಬೇಕು ಖಾಯಂ ಪ್ರಾಧ್ಯಾಪಕರು ಅಥವಾ ಪ್ರಾಧ್ಯಾಪಕರು ಖಾಯಂ ಬೇಕೇ ಬೇಕು’ ಎಂದು ಧರಣಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣ ವಾಗಿದೆ.

ಮಂಗಳೂರು ವಿಶ್ವವಿದ್ಯಾಲಯಲ್ಲಿ ಅದೆಷ್ಟೋ ಹೆಸರಾಂತ ಪ್ರೊಫೆಸರ್‌ಗಳು ಸೇವೆ ಸಲ್ಲಿಸಿದ್ದಾರೆ. ಆ ನಿರ್ದಿಷ್ಟ ಪ್ರೊಫೆಸರ್‌ಗಳಿದ್ದಾರೆ, ವಿಭಾಗದಲ್ಲಿದ್ದಾರೆ ಎಂಬ ಕಾರಣಕ್ಕೇ ವಿದ್ಯಾರ್ಥಿಗಳು ಹುಡುಕಿ ಕೊಂಡು ಬರುವ ಕಾಲವೂ ಇತ್ತು. ಆದರೆ ನಿಧಾನವಾಗಿ ಹಿರಿಯ ಪ್ರೊಫೆಸರ್‌ಗಳ ಸಂಖ್ಯೆ ಇಳಿಯತೊಡಗಿತು. ಅವರ ಸಮನಾಗಿ ಬೆಳೆಯಬಲ್ಲ ಸಹಾಯಕ ಪ್ರೊಫೆಸರ್‌ಗಳ ನೇಮಕವೂ ಆಗಲಿಲ್ಲ. ಹಾಗಾಗಿ ಅಲ್ಲೊಂದು ಅಂತರ ಸೃಷ್ಟಿಯಾಯಿತು.

ಇನ್ನು ಇದ್ದ ಕೆಲ ಖಾಯಂ ಉಪನ್ಯಾಸಕರೂ ಹಿಂದಿನವರಂತೆ ಆಸಕ್ತಿಯನ್ನೂ ಬೆಳೆಸಿಕೊಳ್ಳಲಿಲ್ಲ. ಒಟ್ಟಿನಲ್ಲಿ ವಿಭಾಗಗಳು ಕಳೆ ಕಳೆದುಕೊಂಡವು.

ಸರಕಾರ ಒಂದು ದಶಕಗಳಿಂದ ಹೊಸ ನೇಮಕಾತಿ ಮಾಡದ್ದರಿಂದ ಬಹುತೇಕ ವಿಭಾಗಗಳಲ್ಲಿ ಹಿರಿಯ ಪ್ರೊಫೆಸರ್‌ಗಳೇ ಇಲ್ಲ. ಕೆಲವು ವಿಭಾಗಗಳಲ್ಲಿ ಒಬ್ಬಿಬ್ಬರು. ಬಹುತೇಕ ಕಾರ್ಯಭಾರಗಳನ್ನು ಅತಿಥಿ ಉಪನ್ಯಾಸಕರೇ ನಿರ್ವಹಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ಆಡಳಿತದ ಪ್ರಕಾರ ಇದುವೇ.

ನೇಮಕಾತಿ ನಮ್ಮ ಕೈಲಿಲ್ಲ. ಈಗ ಬೋಧನೆ ಮಾತ್ರವಲ್ಲ, ಆಡಳಿತ ವಿಭಾಗಕ್ಕೂ ಗುತ್ತಿಗೆ ರೂಪದಲ್ಲೇ ನೇಮಕ ಆಗುತ್ತಿದೆ. ಅವರೂ ಉತ್ತಮ ಅರ್ಹರೇ ಇರುತ್ತಾರೆ, ಅಂತಹವರಿಗೆ ಸ್ಫೂರ್ತಿ, ಉತ್ಸಾಹ ತುಂಬಿ ವಿಶ್ವವಿದ್ಯಾಲಯ ಮುನ್ನಡೆಸುವುದು ಸವಾಲು ಎಂಬ ಲೆಕ್ಕದಲ್ಲಿದೆ ವಿಶ್ವವಿದ್ಯಾಲಯ ಆಡಳಿತ.

ಪ್ರತಿವರ್ಷ ಅತಿಥಿ ಉಪನ್ಯಾಸಕರ ಆಯ್ಕೆಯಲ್ಲೂ ಪ್ರತಿಭಾನ್ವಿತರಿಗೆ ಆದ್ಯತೆ ನೀಡಲಾಗುತ್ತಿದೆ. ವರ್ಷಕ್ಕೆ ಎರಡಾದರೂ ಸಂಶೋಧನಾ ಪ್ರಬಂಧಗಳನ್ನು ಅವರು ಪ್ರಕಟಿಸಬೇಕು, ಪಿಎಚ್‌ಡಿ ಪೂರ್ಣಗೊಳಿಸಬೇಕು, ಅಲ್ಲದೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್‌), ರಾಜ್ಯ ಮಟ್ಟದ ಎಸ್‌ಎಲ್‌ಇಟಿ ಪರೀಕ್ಷೆಗಳನ್ನು ಉತ್ತೀರ್ಣರಾಗುವುದಕ್ಕೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ. ಇವರಲ್ಲಿ ಅರ್ಹರನ್ನು ಖಾಯಂ ಹುದ್ದೆಗೆ ನೇಮಿಸಿಕೊಳ್ಳಬೇಕು ಅಥವಾ ಇವರಿಗೇ ಸೂಕ್ತ ರೀತಿ ಸಂಬಳ ನೀಡಿ ಖಾಯಂ ರೀತಿಯಲ್ಲಿ ಬಳಸಿಕೊಳ್ಳಬೇಕು. ಎರಡೂ ಸರಿಯಾಗಿ ಆಗದ ಕಾರಣ, ಅತಿಥಿ ಉಪನ್ಯಾಸಕರೂ ಪೂರ್ಣ ಚಿತ್ತ ಹಾಗೂ ಹೊಣೆಗಾರಿಕೆಯಿಂದ ಕೆಲಸ ಮಾಡಬೇಕೆಂದು
ನಿರೀಕ್ಷಿಸದಂತಾಗಿದೆ.

ಅತಿಥಿ ಉಪನ್ಯಾಸಕರೇ ಹೆಚ್ಚು


ಮಂಗಳೂರು ವಿಶ್ವವಿದ್ಯಾಲಯಗೆ ಮಂಜೂರಾದ ಬೋಧಕ ಹುದ್ದೆಗಳು 273. ಭರ್ತಿಯಾಗಿ
ರುವ ಹುದ್ದೆಗಳು 136. ಖಾಲಿ ಹುದ್ದೆ ಗಳು 137. ಸದ್ಯ ವಿವಿಯಲ್ಲಿರುವ ಅತಿಥಿ ಉಪನ್ಯಾಸಕರ ಸಂಖ್ಯೆ 270. ಪ್ರತಿ ವರ್ಷವೂ ಹೊಸಬರ ನೇಮಕಕ್ಕೆ ಪ್ರಸ್ತಾವನೆ ಯನ್ನೇನೋ ರಾಜ್ಯ ಸರಕಾರಕ್ಕೆ ಕಳುಹಿಸ ಲಾಗುತ್ತಿದೆ. ಆದರೆ ಅನುಮೋದನೆ ಆಗುವು ದಿಲ್ಲ. ಆಗ ಮತ್ತೆ ಅತಿಥಿ ಉಪನ್ಯಾಸಕರ ಮೊರೆ ಹೋಗುವುದು ಅನಿವಾರ್ಯ ಎಂಬಂತಾಗಿದೆ. ಸಮಾಧಾನಕರ ಸಂಗತಿಯೆಂದರೆ ವಿದ್ಯಾರ್ಥಿಗಳಿಲ್ಲದೇ ವಿಭಾಗ ಗಳನ್ನು ಮುಚ್ಚಿರಬಹುದು. ಆದರೆ ಕಾಯಂ ಪ್ರಾಧ್ಯಾಪಕರಿಲ್ಲದ ಕಾರಣಕ್ಕೆ ವಿಭಾಗಗಳನ್ನು ಇದುವರೆಗೆ ಮುಚ್ಚಿಲ್ಲ.

ಸಂಖ್ಯೆ ಹೆಚ್ಚಿಸುವ ಸವಾಲು
ಕುಸಿಯುತ್ತಿದ್ದ ಪ್ರವೇಶಾತಿಯನ್ನು ಏರಿಕೆ ಮಾಡಲು ವಿಶ್ವವಿದ್ಯಾಲಯ ಆಡಳಿತ ಎಲ್ಲ ವಿಭಾಗಗಳಿಗೂ ಒಂದು ಕಠಿನ ಸೂಚನೆ ರವಾನಿಸಿದೆ.

ಪ್ರತಿ ವಿಭಾಗಕ್ಕೆ ಕನಿಷ್ಠ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳ ಪ್ರವೇಶವಾಗದಿದ್ದರೆ ವಿಭಾಗ ಮುಚ್ಚಬೇಕಾಗುತ್ತದೆ. ಹಾಗಾಗಿ ಬಹುತೇಕ ವಿಭಾಗಗಳ ಉಪನ್ಯಾಸಕರೂ ಈಗ ಎಚ್ಚೆತ್ತುಕೊಂಡಂತಿದ್ದು, ಕೆಲವು ವಿಭಾಗಗಳ ಪ್ರವೇಶ ಸಂಖ್ಯೆ ಒಂದಂಕಿಯಲ್ಲಿದ್ದದ್ದು ಎರಡಂಕಿಗೆ ಏರಿದೆ. 5-8 ರ ಆಸುಪಾಸಿನಲ್ಲಿದ್ದ ಸಂಖ್ಯೆ 15-18 ಕ್ಕೆ ಏರಿಕೆಯಾಗಿದೆ.

ವಿಭಾಗಗಳ ಪ್ರಗತಿ ಪರಿಶೀಲನೆ
ಹಿಂದಿನಿಂದಲೂ ವಿಶ್ವವಿದ್ಯಾಲಯ ತಮ್ಮ ಪ್ರೊಫೆಸರ್‌ಗಳು ಏನೇನು ಮಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಲು ಹೋಗದಿರುವುದೂ ಶೈಕ್ಷಣಿಕ ಮಟ್ಟ ಕುಸಿಯಲು ಒಂದು ಕಾರಣ ಎಂಬುದನ್ನು ವಿವಿ ಮನಗಂಡಿದೆ. ಹಾಗಾಗಿ ಕುಲಪತಿಯವರೇ ನಿಯಮಿತವಾಗಿ ತಿಂಗಳಿಗೊಮ್ಮೆ ಎಲ್ಲ ವಿಭಾಗಗಳ ಪ್ರಗತಿ ಪರಿಶೀಲನೆ ಕೈಗೊಳ್ಳುತ್ತಿದ್ದಾರೆ. ಯಾವುದೇ ಸೂಚಿತ ಕೆಲಸವನ್ನು ಮಾಡಲಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇದರಿಂದ ವಿಭಾಗಗಳು ಚುರುಕುಗೊಳ್ಳುತ್ತವೆ ಎನ್ನುವುದು ವಿಶ್ವವಿದ್ಯಾಲಯ ಆಡಳಿತ ಲೆಕ್ಕಾಚಾರ.

prajaprabhat

Recent Posts

UGC-NET ಜೂನ್ 2025 ರ ಪರೀಕ್ಷಾ ವೇಳಾಪಟ್ಟಿ ಮತ್ತು  ನೋಂದಣಿ

ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…

3 hours ago

ಬೀದರ್‌’ನಲ್ಲಿ ಮೀನು ನುಂಗಿ ರೋಗ ಗುಣಮುಖ ವಿಶಿಷ್ಟ ಆಚರಣೆ

ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…

5 hours ago

ಉತ್ತರಾಖಂಡದಲ್ಲಿ ಸೇನಾ ಸನ್ನದ್ಧತೆಯನ್ನು ಪರಿಶೀಲಿಸಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಐಬೆಕ್ಸ್ ತರಾನಾ 88.4 ಎಫ್‌ಎಂ ಅನ್ನು ಉದ್ಘಾಟಿಸಿದರು.

ಉತ್ತರಾಖಂಡದ ಗರ್ವಾಲ್‌ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…

7 hours ago

ಮಿಥಿ ನದಿ ಹೂಳೆತ್ತುವ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ದಾಳಿ ನಡೆಸಿದೆ.

ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…

7 hours ago

ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಉತ್ತರ ರೈಲ್ವೆ ಪ್ರಾರಂಭಿಸಿದೆ

ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…

7 hours ago

ಭೂಕುಸಿತದಿಂದ ಹಾನಿಗೊಳಗಾದ ಚಾಟೆನ್‌ನಿಂದ ಸಿಕ್ಕಿಬಿದ್ದ ಸ್ಥಳೀಯರು ಮತ್ತು ಟ್ಯಾಕ್ಸಿ ಚಾಲಕರನ್ನು ಸಿಕ್ಕಿಂ ಸರ್ಕಾರ ವಿಶೇಷ ಹೆಲಿಕಾಪ್ಟರ್ ಮೂಲಕ ರಕ್ಷಿಸಿದೆ

ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್‌ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…

7 hours ago