ಗದಗ 28: ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನ ಖಾಯಂ ಗೊಳಿಸುವ ಭರವಸೆ ನೀಡಿ ಈಗ ಕಾನೂನು ತೊಡಕು ಎಂಬ ನೆಪ ಮುಂದಿಡುತ್ತಿದ್ದಾರೆ.
ಕಾನೂನು ತೊಡಕುಗಳಿಗೆ ಅವಕಾಶ ನೀಡದೆ ಎಲ್ಲ ಅತಿಥಿ ಉಪನ್ಯಾಸಕರನ್ನ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಬೇಕು. ಒಂದು ವಾರದಲ್ಲಿ ಸ್ಪಷ್ಟಪಡಿಸಬೇಕು. ಇಲ್ಲವಾದಲ್ಲಿ ಜುಲೈ- 10 ರಂದು ಗದಗ ನಗರದ ಮುನ್ಸಿಪಲ್ ಮೈದಾನ ದಿಂದ ಜಿಲ್ಲಾಡಳಿತ ಭವನದ ವರೆಗೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಹನುಮಂತಗೌಡ ಆರ್ ಕಲ್ಮನಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಸುಮಾರು 430 ಪ್ರಥಮ ದರ್ಜೆ ಕಾಲೇಜುಗಳಿದ್ದು, ಪ್ರಸಕ್ತ 2025- 26ನೇ ಶೈಕ್ಷಣಿಕ ಸಾಲಿಗೆ ಸರಕಾರಿ ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ಈಗಾಗಲೇ ಅರ್ಜಿ ಆಹ್ವಾನಿಸಿದ್ದು ಸ್ವಾಗತಾರ್ಹ, ಆದರೆ ಶೈಕ್ಷಣಿಕ ಅರ್ಹತೆ ಮತ್ತು ಸೇವಾನುಭವ ಇದ್ದವರನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿರುವುದು ಸಮಂಜಸವಲ್ಲ ಎಂದು ಡಾ.ಹನುಮಂತಗೌಡ ಆರ್.ಕಲ್ಮನಿ ಹೇಳಿದರು. ಈಗಾಗಲೇ 10-15 ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬೋಧನೆ ಮಾಡಿದ ಅನುಭವ ಇರುವ ಮತ್ತುಶೈಕ್ಷಣಿಕ ಅರ್ಹತೆ ಇಲ್ಲದ ಅನೇಕ ಅತಿಥಿ ಉಪನ್ಯಾಸಕರು ಸರಕಾರದ ಈ ಕ್ರಮದಿಂದ ಆತಂತ್ರರಾಗಿ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಚಿವರು ಮತ್ತು ಸರಕಾರವು ಅತಿಥಿ ಉಪನ್ಯಾಸಕರ ಪ ಉಪನ್ಯಾಸಕರ ಪರ ಇದ್ದರೂ ಇಲಾಖೆಯ ಆಯಕಟ್ಟಿನ ಹುದ್ದೆಗಳಲ್ಲಿರುವ ಕೆಲವು ಅಧಿಕಾರಿಗಳು ಸರಕಾರದ ಹಾದಿ ತಪ್ಪಿಸುವ ಮೂಲಕ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ಪದೇ ಪದೇ ಕಾನೂನು ತೊಡಕು ಉಂಟು ಮಾಡುವ ಮೂಲಕ ಅತಿಥಿ ಉಪನ್ಯಾಸಕರ ಬದುಕಿನ ಜೊತೆ ಆಡುತ್ತಿದ್ದಾರೆ ಇದು ಕೊನೆಗಾಣಬೇಕು.
ಚೆಲ್ಲಾಟ ಅತಿಥಿ ಉಪನ್ಯಾಸಕರ ಆಯ್ಕೆಗೆ ಎಂ.ಫಿಲ್ ಪತ್ರಿಕಾ ಭವನ ಗದಗ ಪದವಿಯನ್ನು ಶೈಕ್ಷಣಿಕ ಅರ್ಹತೆ ಎಂದು ಪರಿಗಣಿಸಬೇಕು. ಆ ಮೂಲಕ ನೂರಾರು ಜನ ಎಂ.ಫಿಲ್ ಪದವೀಧರರ ಆತಂಕಕ್ಕೆ ತೆರೆ ಎಳೆಯಬೇಕು. ಜೊತೆಗೆ ಶೈಕ್ಷಣಿಕ ಅರ್ಹತೆ ಗಳಿಸಲು ಮತ್ತಷ್ಟೂ ಕಾಲವಕಾಶನೀಡಬೇಕು.
ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಒಂದು ವಾರದೊಳಗೆ ಸ್ಪಷ್ಟ ಮಾಹಿತಿ ನೀಡಿ, ಕಾನೂನು ತೊಡಕುಗಳಿಗೆ ಎಡೆ ಮಾಡದೇ ಎಲ್ಲ ಅತಿಥಿ ಉಪನ್ಯಾಸಕರನ್ನು ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಬೇಕು.
ಇಲ್ಲದಿದ್ದರೆ ಕಾನೂನು ಸಚಿವರ ತವರು ಜಿಲ್ಲೆ ಗದಗದಲ್ಲಿ ರಾಜ್ಯದ ಎಲ್ಲ ಅತಿಥಿ ಉಪನ್ಯಾಸಕರು ಕರು ಅನಿರ್ದಿಷ್ಟಾವಧಿ ಹೋರಾಟ ನಡೆಸುವುದು ಅನಿವಾರ್ಯ ಮತ್ತು ಶತಃಸಿದ್ಧ ಎಂದು ಈ ಮೂಲಕ ಇಲಾಖೆಯ ಅಧಿಕಾರಿಗಳನ್ನ ಎಚ್ಚರಿಸಿದರು. ಕಾನೂನು ಸಚಿವರು 1 ವಾರದೊಳಗೆ ನಮ್ಮ ಸಮಸ್ಯೆ ಬಗೆ ಹರಿಸುತ್ತಾರೆ ఎంబ ಭರವಸೆ ಇಲ್ಲವಾದಲ್ಲಿ ಬಂಡಾಯ ಹೋರಾಟ ಹೇಳಿದರು.
ಇದ್ದು, ನರಗುಂದ ಮಾದರಿಯಲ್ಲಿ ಉಪನ್ಯಾಸಕರು ಮಾಡುವುದಾಗಿ ಉಪನ್ಯಾಸಕರನ್ನ ಅಸ್ಪೃಶ್ಯರಂತೆ ನೋಡುತ್ತಿದ್ದಾರೆ.
ಜುಲೈ-10 ರ ಪ್ರತಿಭಟನೆಯಲ್ಲಿ ರಾಜ್ಯದಿಂದ ಸುಮಾರು 2-3 విరా ಜನ ಅತಿಥಿ ಉಪನ್ಯಾಸಕರು ಭಾಗಿಯಾಗುತ್ತಾರೆ. ಕೇವಲ ಉಪನ್ಯಾಸಕರಿಗೆ ಮಾತ್ರ ಕಾನೂನು ತೊಡಕು ಹೇಳುವ ಸರಕಾರದ ವಿರುದ್ಧ ರಾಜ್ಯದ ಎಲ್ಲ ಅತಿಥಿ ಉಪನ್ಯಾಸಕರು ಈ ನಡೆಯನ್ನ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ಡಾ.ಹನುಮಂತಗೌಡ ಆರ್ ಕಲ್ಮನಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಎ ಎ ಸೊಪ್ಪಿಮಠ, ವಿರೇಶ ಬಡಿಗೇರ, ಸುಭಾಷ ಜಾಲಿಹಾಳ, ವಿಜಯಕುಮಾರ ದೇಸಾಯಿಗೌಡ್ರ, ಭಗತಸಿಂಗ್ ನವಲೂರಕರ, ಶರಣು ಮರಿಗುಪ್ಪಿ, ನಾಗರತ್ನ ಬಳ್ಳಾರಿ, ಪಾರ್ವತಿ ತಾರಿಹಾಳ,ಗೀತಾ ಮೇಟಿ, ಪದ್ಮಾ ತಳಕಲ್, ಆರೀಫಾಬಾನು, ಎಂ ಸಿ ಆಶಾ, ನಾಜಿಯಾ ಅತ್ತಹರ ಸೇರಿದಂತೆ ಮುಂತಾದ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.
ಬೆಂಗಳೂರು.30.ಜೂನ್.25:- ರಾಜ್ಯ ಸರಕಾರವು ಪ್ರಸಕ್ತ ವರ್ಷದಲ್ಲಿ 2.0' ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದ್ದು, ರಾಜ್ಯದ ಏಳು ಸರಕಾರಿ ವಿಶ್ವವಿದ್ಯಾಲಯಗಳಿಗೆ ಸಂಯೋಜನೆ ಹೊಂದಿರುವ…
*ಅಂಬಿಗರ ಚೌಡಯ್ಯ ಅಭಿವೃದ್ಧಿ* ನಿಗಮದಿಂದ,ನೇರ ಸಾಲ ಸ್ವಯಂ ಉದ್ಯೋಗ, ವಾಹನ ಖರೀದಿ ಸಾಲ, ಶಿಕ್ಷೆಣ ಸಾಲ,ಕಿರಾಣ, ಹೋಟೆಲ್, ಬ್ಯೂಟಿಪಾರ್ಲರ್, ಲೇಡಿಸ…
ಹೊಸ ದೆಹಲಿ.29.ಜೂನ್.25:- ಭಾರತ್ ಸರ್ಕಾರದ ರಾಷ್ಟ್ರೀಯ ಜಾನುವಾರ ಮಿಷನ್ ( National Livestock Mission Scheme -NLM) ಯೋಜನೆಯಡಿ ಕುರಿ,…
ಬ್ರಿಡ್ಜ್ನ. ನಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ…
ಭಾರತೀಯ ರೈಲ್ವೇ ಇಲಾಖೆಯು 6,238 ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 28 ಆಗಿದೆ…
ಯಳಂದೂರು.28.ಜೂನ್.25:-ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಅಂಬೇಡ್ಕರ್ ಬಡಾವಣೆಯ ವೃದ್ದೆ ಕೆಂಪಮ್ಮ( 75) ಎಂಬುವರಿಗೆ ಎರಡು ಕಣ್ಣುಗಳು ದೃಷಿಯನ್ನು…