ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಹೆಣ್ಣಿಗೆ ಹೆಣ್ಣೇ ಶತ್ರು ಅನ್ನುವುದು ತಪ್ಪು ಮತ್ತದು ಶುದ್ಧ ಸುಳ್ಳು – ಸೋನಾರೆ

ಬೀದರ.09.ಮಾರ್ಚ.25:- ಜಿಲ್ಲಾ ಸರಕಾರಿ ನೌಕರರ ಮಹಿಳಾ ಸಂಘ ಬೀದರ ಮತ್ತು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಲೇಖಕಿಯರ ಸಂಘ ಬೀದರ ವತಿಯಿಂದ ನಗರದ ಹೆಣ್ಣು ಮಗುವಿನ ವೃತ್ತದ ಬಳಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ನಗರದ ತಾಯಿ ಮತ್ತು ಮಗುವಿನ ಪ್ರತಿಮೆಗೆ ನಗರದ ಗುರುನಾನಕ ಶಾಲೆಯ ವಿದ್ಯಾರ್ಥಿನಿ ಕು.ವಾಸವಿ ವಿಂದ್ಯಾ ಮಾಂತೇಶ ಡಪÀಳಾಪೂರ ಅವರಿಂದ ಮಾಲಾರ್ಪಣೆ ಮಾಡಿಸಲಾಯಿತು. ಮತ್ತು ಎಲ್ಲಾ ಮಹಿಳೆಯರು ಪರಸ್ಪರ ಹೂವುಗಳನ್ನು ಹಾಕಿಕೊಂಡು ಪರಸ್ಪರ ಗೌರವಿಸಿಕೊಳ್ಳುವುದರ ಮೂಲಕ ಮಹಿಳಾ ದಿನಾಚರಣೆಗೆ ಚಾಲನೆಯನ್ನು ನೀಡಿದರು.

ಜಿಲ್ಲಾ ಸರಕಾರಿ ನೌಕರರ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಬಿಜೆ ಪಾರ್ವತಿ ವಿ. ಸೋನಾರೆಯವರು ಎರಡು ಸಾವಿರದ ಇಪ್ಪತ್ತೈದನೇ ವರುಷವು ಮಹಿಳಾ ದೌರ್ಜನ್ಯ ತಡೆಯ ದಿನಾಚರಣೆಯನ್ನಾಗಿ ಆಚರಿಸುತ್ತಿದೆ. ಹಾಗಂತ ವಿಶ್ವ ಸಂಸ್ಥೆ ಹೇಳಿದೆ. ಇದು ಅತ್ಯಂತ ಖೇದಕರ ಮತ್ತು ನಾಚಿಕಿಗೇಡು ವಿಷಯವಾಗಿದೆ ಎಂದರು.

ಮಹಿಳೆಯರ ಮೇಲೆ ನಿರಂತರವಾಗಿ ಅನ್ಯಾಯ ಅತ್ಯಾಚಾರಗಳು ನಡಿತಾ ಇವೆ. ಕಾನೂನು ಅದೇಕೆ ಕೈ ಕಟ್ಟಿಕೊಂಡು ಕುಳಿತಿದೆ ಎಂಬುದು ನಮಗೆಲ್ಲ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಎಂದರು. ಅಷ್ಟೇ ಅಲ್ಲದೆ ಹೆಣ್ಣಿಗೆ ಹೆಣ್ಣೇ ಶತ್ರು ಅನ್ನುವುದು ತಪ್ಪು ಮತ್ತದು ಶುದ್ಧ ಸುಳ್ಳು ಎಂದರು.

ಅದೇ ರೀತಿಯಾಗಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಭಾರತಿ ವಸ್ತçದ್ ಅವರು ಹೆಣ್ಣು ಜಗದ ಕಣ್ಣು. ಎಲ್ಲಾ ಕ್ಷೇತ್ರಗಳಲ್ಲಿ ಹೆಜ್ಜೆ ಹಾಕುತ್ತಿರುವ ಮಹಿಳೆ ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆಯದೆ ಮುನ್ನಡೆಯಬೇಕು ಎಂದರು.

ಜಿಲ್ಲಾ ಸರಕಾರಿ ನೌಕರರ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಗೀತಾ ಗಡ್ಡೆಯವರು ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ತಂದೆ, ಅಣ್ಣ, ಗಂಡ ಹೀಗೆ ಪುರುಷರ ಸಹಕಾರ ಅತ್ಯಂತ ಅವಶ್ಯಕವಾಗಿದೆ. ಇಲ್ಲಿ ಎಲ್ಲರೂ ಸೇರಿ ಅಭಿವೃದ್ಧಿ ಪಥದತ್ತ ಚಲಿಸಬೇಕಾಗಿದೆ ಎಂದರು.
 
ಪ್ರಮುಖರಾದ ಜಯದೇವಿ ಯದ್ಲಾಪೂರೆ, ಪ್ರತಿಭಾ ಚಾಮಾ, ವಿಜಯಲಕ್ಮಿ ಕೌಟಗೆ, ಡಾ. ಶ್ರೇಯಾ ಮಹೇಂದ್ರಕರ್, ಸುಜಾತಾ ಪೂಜಾರಿ, ಸ್ವರೂಪರಾಣಿ ನಾಗೂರ, ಮುಂತಾದವರು ಮಾತನಾಡಿದರು. ಮಾಹಾನಂದಾ ಎಸ್ ಪಾಟೀಲ, ಚೆನ್ನಮ್ಮಾ ವಲ್ಲೇಪೂರೆ, ಕಾವೇರಿ ರಮೇಶ, ವಿದ್ಯಾವತಿ ಹಿರೇಮಠ, ಪದ್ಮಾ ಮಡಿವಾಳ, ಬಂಡೆ,   ಸೇರಿದಂತೆ ಮುಂತಾದವರಿದ್ದರು.

prajaprabhat

Recent Posts

UGC-NET ಜೂನ್ 2025 ರ ಪರೀಕ್ಷಾ ವೇಳಾಪಟ್ಟಿ ಮತ್ತು  ನೋಂದಣಿ

ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…

5 hours ago

ಬೀದರ್‌’ನಲ್ಲಿ ಮೀನು ನುಂಗಿ ರೋಗ ಗುಣಮುಖ ವಿಶಿಷ್ಟ ಆಚರಣೆ

ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…

7 hours ago

ಉತ್ತರಾಖಂಡದಲ್ಲಿ ಸೇನಾ ಸನ್ನದ್ಧತೆಯನ್ನು ಪರಿಶೀಲಿಸಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಐಬೆಕ್ಸ್ ತರಾನಾ 88.4 ಎಫ್‌ಎಂ ಅನ್ನು ಉದ್ಘಾಟಿಸಿದರು.

ಉತ್ತರಾಖಂಡದ ಗರ್ವಾಲ್‌ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…

9 hours ago

ಮಿಥಿ ನದಿ ಹೂಳೆತ್ತುವ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ದಾಳಿ ನಡೆಸಿದೆ.

ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…

9 hours ago

ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಉತ್ತರ ರೈಲ್ವೆ ಪ್ರಾರಂಭಿಸಿದೆ

ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…

9 hours ago

ಭೂಕುಸಿತದಿಂದ ಹಾನಿಗೊಳಗಾದ ಚಾಟೆನ್‌ನಿಂದ ಸಿಕ್ಕಿಬಿದ್ದ ಸ್ಥಳೀಯರು ಮತ್ತು ಟ್ಯಾಕ್ಸಿ ಚಾಲಕರನ್ನು ಸಿಕ್ಕಿಂ ಸರ್ಕಾರ ವಿಶೇಷ ಹೆಲಿಕಾಪ್ಟರ್ ಮೂಲಕ ರಕ್ಷಿಸಿದೆ

ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್‌ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…

9 hours ago